ಏನು ಸಾಧನೆ ಮಾಡಿದ್ದಾರಂತ ಇವರಿಗೆ ಸ್ಯಾಲರಿ ಹೈಕು?
ನಮಗೂ, ನಿಮಗೂ ಇಂಕ್ರೀಮೆಂಟ್ ಆಗಬೇಕಂದರೆ ಅದಕ್ಕೆ ನೂರಾಯೆಂಟು ಪ್ರೊಸಿಜರ್ ಗಳು. ನಮ್ಮ ವಾರ್ಷಿಕ ಸಾಧನೆಯ ಆಧಾರದ ಮೇಲೆ ಸಂಬಳ ಏರಿಕೆಯಾದರೂ ಅದು 6ರಿಂದ 10 ಪರ್ಸೆಂಟ್ ದಾಟಲ್ಲ. ಅದಕ್ಕೆ ಆ ಫಾರ್ಮು, ಈ ಫಾರ್ಮು , ಮೇಲಾಧಿಕಾರಿಗಳ ಅಪ್ರೂವಲ್ ಹೀಗೆ ನಿಯಮಗಳು ಒಂದಾ ಎರಡಾ?
ಆದರೆ ಇವರಿಗೆ ಇದರ ಯಾವ ರಗಳೆನೂ ಇಲ್ಲ. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಸಂಬಳ/ಭತ್ಯೆ ಪಡೆಯುವ ಶಾಸಕರು ಎನ್ನುವ ಹೆಗ್ಗಳಿಕೆಗೆ ನಮ್ಮ ಕರ್ನಾಟಕದ ಶಾಸಕರು ಪಾತ್ರರಾಗಿದ್ದಾರೆ. (ಶಾಸಕರ ವೇತನ ಭಾರೀ ಏರಿಕೆ)

ಶಾಸಕರ ವೇತನ ಹೆಚ್ಚಳ ವಿಧೇಯಕ ಸದನದಲ್ಲಿ ಮಂಡನೆಯಾದಾಗ ಅದೇನು ಒಗ್ಗಟ್ಟು, ಅದೇನು ಸೌಹಾರ್ದತೆ, ಅದೇನು ಸಭ್ಯತೆ? ಆಡಳಿತ, ವಿರೋಧ ಪಕ್ಷ ಎನ್ನುವ ಯಾವುದೇ ಕಟ್ಟುಪಾಡು ಇಲ್ಲದೇ, ಯಾವುದೇ ಚರ್ಚೆ, ಪ್ರಶ್ನೋತ್ತರವಿಲ್ಲದೆ ಶಾಸಕರು ವಿಧೇಯಕಕ್ಕೆ ಜೈ ಎಂದಿದ್ದಾರೆ.
ವೇತನ ಪರಿಷ್ಕರಣೆ ವಿಧೇಯಕ ಮಂಡನೆಯ ವೇಳೆ ತೋರಿದ ಒಗ್ಗಟ್ಟು, ಶಿಸ್ತನ್ನು ಹಿಂದೆಯೂ ಪಾಲಿಸಿಕೊಂಡು ಬಂದಿದ್ದರೆ ಸದನ ಕಲಾಪ ಬಲಿಯಾಗದೇ ಅದೆಷ್ಟೋ ಬಿಲ್ ಗಳು ಪಾಸ್ ಆಗುತ್ತಿದ್ದವು.
ಗತಿಸಿ ಹೋಗಿದ್ದಕ್ಕೆ ಚಿಂತಿಸಿ ಫಲವೇನು ಅನ್ನುವಂತೆ ಇನ್ಮುಂದೆಯಾದರೂ ಸದನದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವ ಗಂಭೀರ ಚರ್ಚೆ ಶಾಸಕರಿಂದ ನಡೆಯಬೇಕಿದೆ.
ಶಾಸಕರ ಮಾಸಿಕ ವೇತನ ಮತ್ತು ಇತರ ಭತ್ಯೆಗಳು ಸೇರಿ 75 ಸಾವಿರದಿಂದ 1.25 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಅಂದರೆ 224 ಶಾಸಕರಿಗೆ ಏರಿಕೆಯಾದ ವೇತನದ ಹೆಚ್ಚುವರಿ ಮಾಸಿಕ ಹೊರೆ ಅಂದಾಜು 1.2 ಕೋಟಿ ರೂಪಾಯಿ.
ಇದು ಬಿಟ್ಟು ಮುಖ್ಯಮಂತ್ರಿಗಳು, ಸಂಪುಟ ದರ್ಜೆ, ರಾಜ್ಯ ದರ್ಜೆ ಸಚಿವರು, ವಿರೋಧ ಪಕ್ಷದ ನಾಯಕ, ಸಭಾಪತಿ, ಉಪಸಭಾಪತಿಯವರದ್ದು ಲೆಕ್ಕ ಬೇರೆ ಇದೆ.
ವೇತನ ಹೆಚ್ಚಿಸಬೇಕೆನ್ನುವ ಬೇಡಿಕೆ ಅಥವಾ ಒತ್ತಡ ಮುಖ್ಯಮಂತ್ರಿಗಳಿಗೆ ಇತ್ತೇ ಎನ್ನುವ ಪ್ರಶ್ನೆ ಇಲ್ಲಿ ಕಾಡುವುದು ಸಹಜ. ಯಾಕೆಂದರೆ, ಈ ವಿಧೇಯಕ ಮಂಡನೆಯಾದಾಗ ಸುಮ್ಮನಿದ್ದ ಕೆಲವು ಶಾಸಕರು, ನಂತರ ಇದರ ಅವಶ್ಯಕತೆ ಇರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು.
ಈ ರೀತಿ ವೇತನ ಹೆಚ್ಚಳವನ್ನು ವಿರೋಧಿಸಿದ ಶಾಸಕರನ್ನು ಪಟ್ಟಿ ಮಾಡಿ, ಅಂಥವರನ್ನು 'ವೇತನ ರಹಿತ' ಶಾಸಕರೆಂದು ಹಣಕಾಸು ಇಲಾಖೆ ಪ್ರತ್ಯೇಕಿಸಿದರೆ ಇದರಿಂದ ಜನರ ತೆರಿಗೆ ಹಣವಾದರೂ ಉಳಿಯಬಹುದೇನೋ?

ಅದೇನೆ ಇರಲಿ, ಶಾಸಕರಿಗೆ ನೀಡುವ ಮಾಸಿಕ ವೇತನಕ್ಕೆ ಏನಾದರೂ ಪ್ಯಾರಾಮೀಟರನ್ನು ಹಣಕಾಸು ಇಲಾಖೆ ಇಟ್ಟುಕೊಂಡಿದೆಯಾ ಎನ್ನುವುದು ಜನಸಾಮಾನ್ಯರ ಪ್ರಶ್ನೆ?
ವರ್ಷದಲ್ಲಿ ಕೆಲವು ದಿನಗಳ ಕಾಲ ನಡೆಯುವ ಸದನ ಕಲಾಪದಲ್ಲೇ ಸರಿಯಾಗಿ ಭಾಗವಹಿಸದ ಶಾಸಕ/ಸಚಿವರಿಗೆ ಮಾಸಿಕ ವೇತನ ನೀಡುವಾಗ ಯಾವ ಪದ್ದತಿಯನ್ನು ಪಾಲಿಸಲಾಗುತ್ತಿದೆ? Human Resources ಪಾಲಿಸಿ ತರ ಶಾಸಕರಿಗೆ MLA ಪಾಲಿಸಿ ಏನಾದರೂ ಜಾರಿಯಲ್ಲಿ ಇದೆಯಾ?
ಶಾಸಕರ ಹಾಜರಾತಿ ಮೇಲೆ ಮಾಸಿಕ ವೇತನ ನೀಡಲಾಗುತ್ತಾ ಅಥವಾ ಐದು ವರ್ಷ ಕ್ಷೇತ್ರ/ಸದನದಲ್ಲಿ ಹಾಜರಿರಲಿ ಬಿಡಲಿ ಫುಲ್ ಸ್ಯಾಲರಿ ಸಿಗುತ್ತಾ?
ಇವರಿಗೂ ಅಟೆಂಡೆನ್ಸ್ ಸಿಸ್ಟಂ ಅನ್ನೋದು ಇದೆಯಾ? ಒಂದು ವೇಳೆ ಅಟೆಂಡೆನ್ಸ್ ಸಿಸ್ಟಂ ಅನ್ನೋದು ಇದ್ದರೆ ಅದು ಯಾವ ರೀತಿ ವರ್ಕೌಟ್ ಆಗುತ್ತೆ? ರಜೆ ಹಾಕಿದರೆ ಅದಕ್ಕೆ ಸಿಎಲ್/ಪಿಎಲ್ ಏನಾದರೂ ಇದೆಯಾ? ಇವರಿಗೆ ವೀಕ್ಲಿ ಆಫ್ ಅನ್ನೋದಿದೆಯಾ?
ಈ ರೀತಿಯ ಜನತೆಗಿರುವ ಹತ್ತು ಹಲವಾರು ಸಂದೇಹ/ಪ್ರಶ್ನೆಗಳಿಗೆ ರಾಜ್ಯ ಹಣಕಾಸು ಇಲಾಖೆ ಅಥವಾ ಸರಕಾರ ಉತ್ತರ ನೀಡಲಿ ಎನ್ನುವುದೊಂದು ಕೋರಿಕೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications