ಪ್ರವಾಹದ 'ಆಳವಾದ' ರಿಪೋರ್ಟ್ನಿಂದ ಟ್ರೋಲ್ ಆದ ಪಾಕಿಸ್ತಾನ ವರದಿಗಾರ
ಇಸ್ಲಾಮಾಬಾದ್, ಜುಲೈ 30: ಪ್ರವಾಹದ ಆಳವನ್ನು ಜನರಿಗೆ ತಿಳಿಸಲು ನೀರಿಗೆ ಇಳಿದು ಪಾಕಿಸ್ತಾನ ವರದಿಗಾರನೊಬ್ಬ ಟ್ರೋಲ್ ಆಗಿದ್ದಾನೆ.
ವರದಿಗಾರನ ಕುತ್ತಿಗೆಯವರೆಗೂ ನೀರು ನೀರಿದ್ದು, ಮೈಕ್ ಅರ್ಧ ಮುಳುಗಿಹೋಗಿದೆ, ಇಂತಹ ಸಂದರ್ಭದಲ್ಲೂ ಆತ ವರದಿ ಮಾಡಿದ್ದಾನೆ. ಎಷ್ಟೇ ನೀರಿನ ಸೆಳೆ ಇದ್ದರೂ ಕೂಡ ಅಂಜದೆ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದಾರೆ ಎಂದು ಪಾಕಿಸ್ತಾನ ಚಾನೆಲ್ ವರದಿ ಮಾಡಿದೆ.
ಎಲ್ಲರಿಗೂ ಪಾಕಿಸ್ತಾನದ ನ್ಯೂಸ್ ರಿಪೋರ್ಟರ್ ಚಾಂದ್ ನವಾಬ್ ಬಗ್ಗೆ ತಿಳಿದೇ ಇದೆ, ಅವರು ಟೇಕ್ ಮೇಲೆ ಟೇಕ್ ತೆಗೆದುಕೊಂಡು ವರದಿ ಮಾಡಿದ್ದು ಪಾಕಿಸ್ತಾನ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಫೇಮಸ್ ಆಗಿತ್ತು. ಆದರೆ ಇದೀಗ ಮತ್ತೊಬ್ಬ ವರದಿಗಾರನ ವಿಡಿಯೋ ವೈರಲ್ ಆಗಿದೆ.

ಪ್ರವಾಹ ಪರಿಸ್ಥಿತಿ ಬಗ್ಗೆ ವರದಿ ಮಾಡ್ತಿದ್ದ ರಿಪೋರ್ಟರ್, ನದಿಯಲ್ಲಿನ ನೀರಿನ ಮಟ್ಟ ಏರಿಕೆಯಾಗಿ ಅದು ಯಾವ ರೀತಿ ಬೆಳೆಗಳನ್ನ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ ಅನ್ನೋದರ ಬಗ್ಗೆ ಪ್ರತ್ಯಕ್ಷ ವರದಿ ನೀಡುತ್ತಿದ್ದ . ಜಿ-ಟಿವಿಯ ಅಜಾದರ್ ಹುಸೈನ್ ಎಂಬಾತ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ರಿಪೋರ್ಟರ್.
ಈತನ ಕತ್ತಿನ ತನಕ ನೀರಿದ್ದು, ಮೈಕ್ ಹಿಡಿದು ವರದಿ ಮಾಡಿದ್ದಾನೆ. ಈತನ ವಿಡಿಯೋವನ್ನ ಶೇರ್ ಮಾಡಿರೋ ಚಾನೆಲ್, ನಮ್ಮ ವರದಿಗಾರ ತನ್ನ ಕರ್ತವ್ಯ ನಿರ್ವಹಿಸಲು ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ ಎಂದು ಹೇಳಿದೆ.
ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ವರದಿಗಾರನಿಗೆ ಭೇಷ್ ಅಂದ್ರೆ ಇನ್ನೂ ಕೆಲವು ಜನ ಇದನ್ನ ಟ್ರೋಲ್ ಮಾಡಿದ್ದಾರೆ. ಇದೊಂದು ಮೂರ್ಖತನದ ಪರಮಾವಧಿ, ಆತ ತನ್ನ ಪ್ರಾಣದ ಜೊತೆ ರಿಸ್ಕ್ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications