Nuclear Bomb: ಆಗ ಜಪಾನ್ಗೆ ಆದ ಗತಿ ಈಗ ಇರಾನ್ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿ: ರಂಗಸ್ವಾಮಿ ಮೂಕನಹಳ್ಳಿ
ಆಗ ಜಪಾನ್ಗೆ ಆದ ಗತಿ ಈಗ ಇರಾನ್ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿಯ ಬಗ್ಗೆ ಲೇಖಕ ಮತ್ತು ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಬಹಳ ಅಗ್ರೆಷನ್ ತೋರಿಸುತಿತ್ತು.ಅಮೆರಿಕಾದ ಬೆದರಿಕೆಗಳಿಗೆ ಎಳ್ಳು ಕಾಳಿನ ಬೆಲೆ ನೀಡುತ್ತಿರಲಿಲ್ಲ.ಪುಟಾಣಿ ಜಪಾನ್ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತದ್ದು ಎಲ್ಲರಿಗೂ ಗೊತ್ತಿರುವ ವಿಚಾರ.ಆಮೇಲೇನಾಯ್ತು ? ಅಮೇರಿಕಾ ನ್ಯೂಕ್ಲಿಯರ್ ಬಾಂಬ್ ಸಿಡಿಸುವುದರ ಮೂಲಕ ಜಪಾನ್ ದೇಶವನ್ನು ಹಾಳು ಮಾಡುವುದರೊಂದಿಗೆ ಎರಡನೇ ಮಹಾಯುದ್ಧ ಮುಕ್ತಾಯವಾಯ್ತು. ಇವತ್ತಿಗೆ ಮೂರನೇ ಮಹಾಯುದ್ಧ ನಡೆಯುತ್ತಿಲ್ಲ.ಬಟ್ ಜಪಾನ್ ಜಾಗದಲ್ಲಿ ಇರಾನ್ ನಿಂತಿದೆ.ಅದೇ ಅಗ್ರೆಷನ್, ಅದೇ ಸಿಟ್ಟು ,ಸೆಡ್ಡು ! ಮುಂದಿನ ಫಲಿತಾಂಶ? ನನ್ನ ಊಹೆ ಸುಳ್ಳಾಗಲಿ 🙏 ಭಾರತ ಇರಾನಿನಲ್ಲಿರುವ ಭಾರತೀಯರನ್ನು ದೇಶ ತೊರೆಯುವಂತೆ ಕರೆ ನೀಡಿದೆ.

ನೆಟ್ಟಿಗರು ಹೇಳಿದ್ದೇನು
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೇಘಾ ಎನ್ನುವವರು, ಈ ಯುದ್ಧ ನಿಲ್ಲಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇದ್ದಿನಿ. ಏನು ಸಿಗುತ್ತೆ ಒಂದಲ್ಲಾ ಒಂದು ದಿನ ಈ ಭೂಮಿಯಿಂದ ಹೊರಡಬೇಕಲ್ವಾ ಯಾಕೆ ಈ ಯುದ್ಧ , ಅಧಿಕಾರ ದಾಹ, ಎಲ್ಲಾ ದೇಶವನ್ನು ನನ್ನ ಕೈಕೆಳಗೆ ಇಟ್ಕೊತಿನಿ ಅನ್ನೋ ಹಠ . ಒಂದು ತಿಳಿತಿಲ್ಲಾ. ಈ ಯುದ್ಧದಿಂದ ತೊಂದರೆ ಆಗೋದು ಸಾಮನ್ಯ ಜನರಿಗೆ. ಟ್ರಂಪ್ಗೆ ನಮ್ಮ ಆಂಜನೇಯ ಒಳ್ಳೆಯ ಬುದ್ಧಿ ಕೊಡ್ಲಿ ಎಂದಿದ್ದಾರೆ.
ದಿನಕರ್ ಎನ್ನುವವರು, ಎಲ್ಲರಿಗೂ ಗಾಬರಿಯಾಗಿದೆ. ಪಕ್ಕದ ದೇಶದವರು ಇದನ್ನು ನೋಡಿ ನಗುತ್ತಿದ್ದಾರೆ. ನನಗೂ ದುಗುಡ ಯಾಕೆಂದರೆ ನಾನು ಸಹ ಇದರ ಪಕ್ಕದ ದೇಶದಲ್ಲಿದ್ದೇನೆ ಎಂದಿದ್ದಾರೆ.
ನ್ಯೂಕ್ಲಿಯರ್ ಬಾಂಬ್ ದಾಳಿ ಎಚ್ಚರಿಕೆ
ಅಮೆರಿಕ ಈಚೆಗೆ ಇರಾನ್ಗೆ ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟಿತ್ತು. ವಿನಾಶಕಾರಿ ಬಾಂಬ್ ದಾಳಿ / ನ್ಯೂಕ್ಲಿಯರ್ ಬಾಂಬ್ ದಾಳಿ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿದ್ದರು. ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇರಾನ್ನ ಯುರೇನಿಯಂ ಸಮೃದ್ಧಿ ಕೇಂದ್ರಗಳ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಕಣ್ಣಿಟ್ಟಿದ್ದು, ಅಣುಬಾಂಬ್ ಮಾದರಿಯ ದಾಳಿ ನಡೆಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
-
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು -
Iran-US-Israel War: ಸುದ್ದಿ ವಾಹಿನಿಗಳ TRP ಸ್ಥಗಿತ ಆದೇಶವನ್ನು ಮತ್ತೆ 4 ವಾರ ವಿಸ್ತರಿಸಿದ ಕೇಂದ್ರ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
Iran-US War: ಇರಾನ್ - ಅಮೆರಿಕ ಕದನ ವಿರಾಮ, ಏಪ್ರಿಲ್ 10ಕ್ಕೆ ಪಾಕ್ನಲ್ಲಿ ಮಾತುಕತೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ -
Sensex: ಇರಾನ್ ಕದನವಿರಾಮ ಸಂಭ್ರಮಿಸಿದ ಷೇರುಪೇಟೆ: ಸೂಚ್ಯಂಕಗಳು ಮೇಲ್ಮುಖ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
ಬುಟ್ಟಿಯಿಂದ ಹೊರ ಬರಲಿಲ್ಲ ಟ್ರಂಪಣ್ಣನ ಹಾವು: ಬಿಎಂ ಹನೀಫ್ ಬರಹ -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ












Click it and Unblock the Notifications