ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ ವಿಶ್ವದ 2ನೇ ವ್ಯಕ್ತಿ ಇವರು!
ನೇಪಾಳಿ ಶೆರ್ಪಾ ಮಾರ್ಗದರ್ಶಿಯೊಬ್ಬರು ಭಾನುವಾರ 26 ನೇ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಹೈಕಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.
46 ವರ್ಷದ ಪಸಾಂಗ್ ದಾವಾ ಶೆರ್ಪಾ 8,849-ಮೀ (29,032-ಅಡಿ) ಶಿಖರವನ್ನು ಏರಿದ್ದಾರೆ. ಈ ಹಿಂದೆ ನೇಪಾಳದ ಕಾಮಿ ರೀಟಾ ಶೆರ್ಪಾ ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ್ದಾರೆ. ಈ ಮೂಲಕ ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ ಹೆಗ್ಗಳಿಕೆಯು ನೇಪಾಳಿಗರಿಗೆ ಸಲ್ಲುತ್ತದೆ ಎಂದು ಸರ್ಕಾರಿ ಪ್ರವಾಸೋದ್ಯಮ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಹೇಳಿದ್ದಾರೆ.

ಇದೀಗ ಎವರೆಸ್ಟ್ ಶಿಖರವನ್ನು ಕಾಮಿ ರೀಟಾ ಮತ್ತೊಮ್ಮೆ ಏರುತ್ತಿದ್ದಾರೆ. ಶಿಖರದ ಕೊನೆಯನ್ನು ತಲುಪಿದರೆ ಕಾಮಿ ರೀಟಾ ಮತ್ತೊಂದು ಹೊಸ ದಾಖಲೆಯನ್ನು ಬರೆದಂತೆ ಆಗುತ್ತದೆ. ಪಸಾಂಗ್ ದಾವಾ ತನ್ನ ಹಂಗೇರಿಯ ಕ್ಲೈಂಟ್ನೊಂದಿಗೆ ಶಿಖರದ ಕೊನೆಯನ್ನು ತಲುಪಿದ್ದಾರೆ ಎಂದು ಇಮ್ಯಾಜಿನ್ ನೇಪಾಲ್ ಟ್ರೆಕ್ಸ್ ಹೈಕಿಂಗ್ ಕಂಪನಿಯ ಅಧಿಕಾರಿ ಹೇಳಿದ್ದಾರೆ.
"ನೇಪಾಳಿಯ ಪಸಾಂಗ್ ದಾವಾ ಶೆರ್ಪಾ ಈಗ ಮೌಂಟ್ ಎವರೆಸ್ಟ್ ಶಿಖರದ ಮೇಲಿನಿಂದ ಕೆಳಕ್ಕೆ ಇಳಿಯುತ್ತಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದೆ," ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ರಾಯಿಟರ್ಸ್ಗೆ ಮಾಹಿತಿ ನೀಡಿದ್ದಾರೆ. ಶೆರ್ಪಾಗಳು ತಮ್ಮ ಕ್ಲೈಂಬಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಪರ್ವಾತರೋಹಿಗಳು ಹೆಚ್ಚಾಗು ಶೆರ್ಪಾಗಳಾಗಿದ್ದಾರೆ.
ಶಿಖರ ಏರಿದ ಮೊದಲ ವಿದೇಶಿ ಮಹಿಳೆ!
ಮುಖ್ಯವಾಗಿ ಪರ್ವತಗಳಲ್ಲಿ ವಿದೇಶಿ ಗ್ರಾಹಕರಿಗೆ ಮಾರ್ಗದರ್ಶನ ನೀಡುವ ಮೂಲಕ ಜೀವನವನ್ನು ಶೆರ್ಪಾ ಸಮುದಾಯಗಳು ನಡೆಸುತ್ತದೆ. ಇನ್ನು ಭಾನುವಾರ ಶಿಖರವನ್ನು ಏರಿದ ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿ ಶಿಖರವನ್ನು ಏರಿದ್ದಾರೆ. ಮಾರ್ಚ್ನಿಂದ ಮೇ ವರೆಗೆ ನಡೆಯುವ ಈ ವರ್ಷದ ಕ್ಲೈಂಬಿಂಗ್ ಋತುವಿನಲ್ಲಿ ಎವರೆಸ್ಟ್ ಅನ್ನು ಏರಿದ ಮೊದಲ ವಿದೇಶಿ ಮಹಿಳೆ ನೈಲಾ ಕಿಯಾನಿ ಆಗಿದ್ದಾರೆ ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ಹೇಳಿದ್ದಾರೆ.
ಅನೇಕ ವಿದೇಶಿ ಆರೋಹಿಗಳು ಈಗಾಗಲೇ ಶಿಖರದತ್ತ ಸಾಗುತ್ತಿರುವ ಕಾರಣ ಈ ಮಾಹಿತಿಯು ದೃಢೀಕರಿಸಲಾಗದು. ಆದರೆ ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿಯೇ ಮೊದಲ ಮಹಿಳೆ ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ಹೇಳಿದ್ದಾರೆ. ದುಬೈ ಮೂಲದ 37 ವರ್ಷದ ಬ್ಯಾಂಕರ್ ಕಿಯಾನಿ, ಎವರೆಸ್ಟ್ಗಿಂತ ಮೊದಲು ವಿಶ್ವದ 14 ಎತ್ತರದ ಪರ್ವತಗಳಲ್ಲಿ ನಾಲ್ಕನ್ನು ಏರಿದ್ದರು ಎಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಎವರೆಸ್ಟ್ ಶಿಖರವನ್ನು ತಲುಪಲು ಬಯಸುವ ವಿದೇಶಿ ಆರೋಹಿಗಳಿಗೆ ನೇಪಾಳವು ಈ ವರ್ಷ 467 ಪರವಾನಗಿಗಳನ್ನು ನೀಡಿದೆ. ಪ್ರತಿಯೊಬ್ಬ ಆರೋಹಿಯು ಸಾಮಾನ್ಯವಾಗಿ ಕನಿಷ್ಠ ಒಬ್ಬ ಶೆರ್ಪಾ ಮಾರ್ಗದರ್ಶಿಯೊಂದಿಗೆ ಪರ್ವತವನ್ನು ಏರಬಹುದು.
ಎವರೆಸ್ಟ್ ಅನ್ನು 1953 ರಲ್ಲಿ ಸರ್ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ಟೆನ್ಸಿಂಗ್ ನಾರ್ಗೆ ಮೊದಲ ಬಾರಿಗೆ ಏರಿದಾಗಿನಿಂದ ಈವರೆಗೆ ಆರೋಹಿಗಳು 11,000 ಕ್ಕೂ ಹೆಚ್ಚು ಬಾರಿ ಏರಿದ್ದಾರೆ. ಈ ಪ್ರಯತ್ನದಲ್ಲಿ ಸುಮಾರು 320 ಜನರು ಸಾವನ್ನಪ್ಪಿದ್ದಾರೆ ಎಂದು ಹಿಮಾಲಯದ ಡೇಟಾಬೇಸ್ ಮತ್ತು ನೇಪಾಳಿ ಅಧಿಕಾರಿಗಳು ತಿಳಿಸಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications