ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಪುತ್ರಿ ನಿಧನ
ಜೋಹಾನ್ಸ್ಬರ್ಗ್, ಜುಲೈ 13: ಶತಮಾನದ ಕಪ್ಪು ಜನರ ನಾಯಕ, ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಪುತ್ರಿ ಜಿಂದಜೀ(59) ನಿಧನರಾಗಿದ್ದಾರೆ.
ಆಕೆಯ ಮರಣ ಸಂದರ್ಭದಲ್ಲಿ ಡೆನ್ಮಾರ್ಕ್ನ ರಾಯಭಾರಿಯಾಗಿದ್ದಳು.ಜೋಹಾನ್ಸ್ ಬರ್ಗ್ನ ಆಸ್ಪತ್ರೆಯೊಂದರಲ್ಲಿ ಜಿಂದಜೀ ಸಾವನ್ನಪ್ಪಿದ್ದಾರೆ.ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜಿಂದಜೀ ಅವರು ನೆಲ್ಸನ್ ಮಂಡೇಲಾ ಆವರ ಆರನೇ ಪುತ್ರಿಯಾಗಿದ್ದಾರೆ.
ನೆಲ್ಸನ್ ಮಂಡೇಲಾ ಅವರ ಆರು ಮಕ್ಕಳಲ್ಲಿ ಕೇವಲ ಇಬ್ಬರು ಮಾತ್ರ ಬದುಕುಳಿದಿದ್ದಾರೆ.ಆಕೆಯ ತಂದೆ ನೆಲ್ಸನ್ ಮಂಡೇಲಾ ಅವರು ಜೈಲುವಾಸದ 27 ವರ್ಷಗಳ ಶಿಕ್ಷೆಯಲ್ಲಿ 18 ವರ್ಷಗಳ ಕಾಲ ರಾಬೆನ್ ಐಸ್ಲ್ಯಾಂಡ್ನ ಕಾರಾಗೃಹದಲ್ಲಿ ಕಳೆದರು.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ನೆಲ್ಸನ್ ಮಂಡೇಲಾ ಅವರು 2013ರ ಜೂನ್ನಿಂದ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದಿದ್ದರು. ಬಳಿಕ ಸೆಪ್ಟೆಂಬರ್ನಿಂದ ಜೋಹನ್ಸ್ಬರ್ಗ್ನ ಉಪನಗರ ಹೂಂಗ್ಟನ್ನಲ್ಲಿರುವ ತಮ್ಮ ನಿವಾಸದಲ್ಲಿ ವೈದ್ಯಕೀಯ ತಂಡದ ನಿಗಾದಲ್ಲಿದ್ದರು.
ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಅಧ್ಯಕ್ಷರಾಗಿದ್ದ ಮಂಡೇಲಾ ಅವರಿಗೆ ಭಾರತ 1990ರಲ್ಲಿ ತನ್ನ ಅತ್ಯುನ್ನತ ನಾಗರಿಕ ಮನ್ನಣೆ 'ಭಾರತ ರತ್ನ' ನೀಡಿ ಗೌರವಿಸಿತ್ತು. ನೊಬೆಲ್ ಪ್ರಶಸ್ತಿಯೂ ಅವರಿಗೆ ಒಲಿದು ಬಂದಿತ್ತು.
ಮಂಡೇಲಾ ಮೊದಲಿಗೆ ವಕೀಲಿಕೆ ಮಾಡುತ್ತಿದ್ದರು. ಕೆಲ ಕಾಲ ಬಾಕ್ಸರ್ ಆಗಿಯೂ ಹೆಸರು ಗಳಿಸಿದ್ದರು. ಸರಿಯಾಗಿ 50 ವರ್ಷಗಳ ಹಿಂದೆ ವರ್ಣಭೇದ ನೀತಿಯ ಸಂಕೋಲೆಗೆ ಸಿಲುಕಿ ನರಳುತ್ತಿದ್ದ ದಕ್ಷಿಣ ಆಫ್ರಿಕಾದ ಕಪ್ಪು ಜನರಿಗೆ ಘನತೆಯ ಬಾಳು ಕಲ್ಪಿಸುವ ಪಣ ತೊಟ್ಟು ಬಿಳಿಯರ ವಿರುದ್ಧ ಸಿಡಿದೆದ್ದರು.
ದೇಶಾದ್ಯಂತ ಚಳವಳಿ ಹುಟ್ಟು ಹಾಕಿದರು. ವರ್ಣಭೇದ ನೀತಿಯ ಕರಾಳ ಮುಖವನ್ನು ಇಡೀ ಪ್ರಪಂಚದ ಮುಂದೆ ಅನಾವರಣಗೊಳಿಸಿ ಎಲ್ಲರ ಮನೆ, ಮನ ಗೆದ್ದರು. ನೆಲ್ಸನ್ ಮಂಡೇಲಾ(95) ಭಾರತೀಯ ಕಾಲಮಾನ 2013 ರ ಡಿಸೆಂಬರ್ 7 ರಂದು ನಿಧನರಾಗಿದ್ದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications