ಮೆರಿಟ್ ಆಧಾರಿತ ವಲಸೆಗೆ ಟ್ರಂಪ್ ಒಲವು, ಇದು ಭಾರತದ ಗೆಲುವು
ವಲಸೆ ನೀತಿ ಬಗ್ಗೆ ಕೆಂಡ ಉಗುಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮೆದುವಾದಂತಿದೆ. ಅವರು ಪ್ರಸ್ತಾವಿಸಿರುವ ಮೆರಿಟ್ ಆಧಾರಿತ ವಲಸೆ ನೀತಿ ಖಂಡಿತಾ ಭಾರತದಂತಹ ದೇಶಕ್ಕೆ ಅನುಕೂಲಕಾರಿಯಾಗುವಂತಿದೆ
ವಾಷಿಂಗ್ಟನ್, ಮಾರ್ಚ್ 1: ಮೆರಿಟ್ ಆಧಾರಿತ ವಲಸೆ ನಿಯಮವನ್ನು ಅನುಸರಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಾತನಾಡಿದ್ದಾರೆ. ಅದರಿಂದ ಭಾರತದಂಥ ದೇಶದ ಹೈ ಟೆಕ್ ವೃತ್ತಿಪರರಿಗೆ ಅನುಕೂಲವಾಗಲಿದೆ. ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದ ಟ್ರಂಪ್, ಜಗತ್ತಿನ ವಿವಿಧ ದೇಶಗಳಲ್ಲಿ ಈ ರೀತಿ ಮೆರಿಟ್ ಆಧಾರಿತ ವಲಸೆ ನೀತಿ ಇದೆ ಎಂದಿದ್ದಾರೆ.
ಇಂಥ ನಿಯಮದಿಂದ ಲೆಕ್ಕವಿಲ್ಲದಷ್ಟು ಹಣ ಉಳಿತಾಯ ಆಗುತ್ತದೆ ಮತ್ತು ಕಾರ್ಮಿಕರ ವೇತನ ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಅಬ್ರಹಾಂ ಲಿಂಕನ್ ಅವರ ಮಾತನ್ನು ನೆನಪಿಸಿಕೊಂಡ ಅವರು, ಮೆರಿಟ್ ಆಧಾರಿತ ವಲಸೆ ನಿಯಮ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದರು.[ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?]

ಲಕ್ಷಗಟ್ಟಲೆ ಉದ್ಯೋಗವನ್ನು ಅಮೆರಿಕಕ್ಕೆ ವಾಪಸ್ ತರ್ತೀನಿ ಎಂದ ಟ್ರಂಪ್, "ನಮ್ಮ ಕಾರ್ಮಿಕರ ಹಿತರಕ್ಷಣೆ ಮಾಡುವುದು ಅಂದರೆ ನಮ್ಮ ಅಧಿಕೃತ ವಲಸೆ ನಿಯಮದಲ್ಲಿ ಸುಧಾರಣೆ ಮಾಡುವುದು ಅಂತಲೇ ಅರ್ಥ. ಸದ್ಯಕ್ಕಿರುವ ಹಳೆಯ ನಿಯಮ ಬಡ ಕಾರ್ಮಿಕರ ವೇತನಕ್ಕೆ ಹೊಡೆತ ನೀಡುತ್ತಿದೆ. ಆದಾಯ ತೆರಿಗೆದಾರರಿಗೂ ಒತ್ತಡ ಆಗುತ್ತಿದೆ" ಎಂದು ಅವರು ಹೇಳಿದರು.
ಅಮೆರಿಕನ್ನರ ಕೆಲಸ ಹಾಗೂ ವೇತನದ ಸ್ಥಿತಿ ಸುಧಾರಣೆ ಮತ್ತು ಅಮೆರಿಕದ ರಕ್ಷಣೆಯನ್ನು ಗುರಿಯಾಗಿಸಿಕೊಂಡು ಈ ನಿಯಮವನ್ನು ಮಾಡಲಾಗುತ್ತಿದೆ. ಇದೂ ಸೇರಿದ ಹಾಗೆ ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಅಂದರೆ ಪಕ್ಷ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಟ್ರಂಪ್ ಹೇಳಿದರು.[ಇರಾಕ್ ಮೇಲಿನ ವೀಸಾ ನಿರ್ಬಂಧ ತೆರವು : ಡೊನಾಲ್ಡ್ ಟ್ರಂಪ್]
ಅಮೆರಿಕಕ್ಕೆ ಎಚ್ 1ಬಿ ವೀಸಾ ಪಡೆದು ತೆರಳುವವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್ ಗಳು ಮತ್ತು ಇತರ ಉತ್ತಮ ತರಬೇತಿ ಪಡೆದ ವೃತ್ತಿಪರರು ಅಮೆರಿಕಕ್ಕೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಅಮೆರಿಕ ಕಂಪನಿಗಳು ಎಚ್ 1ಬಿ ವೀಸಾ ಅಡಿಯಲ್ಲಿ ಬುದ್ಧಿವಂತ ವಿದೇಶಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.
ದಾಖಲೆ ಇಲ್ಲದೆ ಅಮೆರಿಕ ಪ್ರವೇಶಿಸುವ ವಲಸಿಗರನ್ನು ತಡೆಯುವ ಬಗ್ಗೆ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications