ಬಾಲಕನಿಗೆ ಮುತ್ತಿಟ್ಟು, ನಾಲಿಗೆ ನೆಕ್ಕುವಂತೆ ಕೇಳಿದ ದಲೈ ಲಾಮಾ: ಆಕ್ರೋಶಕ್ಕೆ ಗುರಿ ಮಾಡಿತು ವಿಡಿಯೋ
ಬೀಜಿಂಗ್ ಏಪ್ರಿಲ್ 10: ಟಿಬೆಟನ್ ಧರ್ಮಗುರು ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾ ಮಗುವಿನೊಂದಿಗೆ ವಿಚಿತ್ರವಾಗಿ ನಡೆದುಕೊಂಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ದಲೈ ಲಾಮಾ ಅವರು ಮಗುವಿನ ತುಟಿಗಳಿಗೆ ಚುಂಬಿಸಿ ನಂತರ ನಾಲಿಗೆಯನ್ನು ನೆಕ್ಕೆಂದು ಕೇಳುವ ವಿಡಿಯೊ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಅವರು ಹುಡುಗ ಮತ್ತು ಅವನ ಕುಟುಂಬಕ್ಕೆ ಕ್ಷಮೆಯಾಚಿಸಿದ್ದಾರೆ.
ಇದರೊಂದಿಗೆ ಅವರು "ತಾನು ಭೇಟಿಯಾಗುವ ಜನರನ್ನು ಆಗಾಗ್ಗೆ ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಕೀಟಲೆ ಮಾಡುತ್ತಾನೆ" ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಒಬ್ಬ ಚಿಕ್ಕ ಹುಡುಗ ತನ್ನ ಗುರು ದಲೈ ಲಾಮಾ ಅವರನ್ನು ಭೇಟಿ ಮಾಡಿದಾಗ, ದಲೈ ಲಾಮಾ ಆ ಬಾಲಕನ ತುಟಿಗೆ ಮುತ್ತಿಟ್ಟು, ನಾಲಿಗೆಯನ್ನು ನೆಕ್ಕುವಂತೆ ಹೇಳುತ್ತಾರೆ. ಇದು ಬಾಲಕನ ಕುಟುಂಬಸ್ಥರನ್ನು ಮುಜುಗರಕ್ಕೀಡು ಮಾಡಿತ್ತು. ಜೊತೆಗೆ ಈ ವಿಡಿಯೋ ವೈರಲ್ ಆದ ಬಳಿಕ ಅನೇಕರು ದಲೈ ಲಾಮಾ ವರ್ತನೆಯನ್ನು ಖಂಡಿಸಿದ್ದಾರೆ.
ಇದರಿಂದ ದಲೈ ಲಾಮಾ ತಮ್ಮ ಟ್ವಿಟರ್ನಲ್ಲಿ ಕ್ಷಮೆಯನ್ನು ಯಾಚಿಸಿದ್ದಾರೆ. "ಅನೇಕರು ನನ್ನನ್ನು ಭೇಟಿಯಾಗಲು ಬರುತ್ತಾರೆ. ತಾನು ಭೇಟಿಯಾಗುವ ಜನರನ್ನು ಆಗಾಗ್ಗೆ ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಕೀಟಲೆ ಮಾಡುತ್ತಾನೆ" ಎಂದು ಹೇಳಿದ್ದಾರೆ.

ವೈರಲ್ ವಿಡಿಯೋದಲ್ಲಿ ದಲೈ ಲಾಮಾ ಚಿಕ್ಕ ಹುಡುಗನ ತುಟಿಗಳಿಗೆ ಮುತ್ತಿಟ್ಟು ಅವನೊಂದಿಗೆ ಹಣೆಯನ್ನು ಸ್ಪರ್ಶಿಸುತ್ತಿರುವುದನ್ನು ತೋರಿಸಿದೆ. ನಂತರ ನಾಯಕನು ತನ್ನ ನಾಲಿಗೆಯನ್ನು ಹೊರಹಾಕುತ್ತಾನೆ ಮತ್ತು ಹೇಳುತ್ತಾನೆ: "ನೀವು ನನ್ನ ನಾಲಿಗೆಯನ್ನು ನೆಕ್ಕೆನ್ನಬಹುದೇ?" ಎಂದು ಕೇಳುತ್ತಾರೆ. ಟ್ವಿಟ್ಟರ್ ಬಳಕೆದಾರರು ಇದನ್ನು ಅಸಹ್ಯಕರ ಎಂದು ಖಂಡಿಸಿದ್ದರು.
ಟ್ವೀಟ್ ಬಳಕೆದಾರನೊಬ್ಬ "ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನನ್ನು ಚುಂಬಿಸುತ್ತಿದ್ದಾನೆ ಮತ್ತು ಅವನ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ. ಅವನು ನಿಜವಾಗಿಯೂ 'ನನ್ನ ನಾಲಿಗೆಯನ್ನು ಹೀರು' ಎಂದು ಹೇಳುತ್ತಾನೆ. ಅವನು ಅದನ್ನು ಏಕೆ ಮಾಡುತ್ತಾನೆ?" ಜೂಸ್ಟ್ ಬ್ರೋಕರ್ಸ್ ಎಂದು ಟ್ವೀಟ್ ಮಾಡಿದ್ದಾರೆ.
"ದಲೈಲಾಮಾ ಅವರು ಈ ಚಿಕ್ಕ ಹುಡುಗನನ್ನು ಏಕೆ ಮೆಚ್ಚುತ್ತಿದ್ದಾರೆ ಮತ್ತು ಅವನ ನಾಲಿಗೆಯನ್ನು ಹೀರುವಂತೆ ಕೇಳುತ್ತಿದ್ದಾರೆ?" ಎಂದು ಸ್ಟ್ಯೂ ಪೀಟರ್ಸ್ ಪ್ರಶ್ನಿಸಿದರು. ಈ ಹಿಂದೆ 2019 ರಲ್ಲಿ ದಲೈ ಲಾಮಾ ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ "ಆಕೆ ಆಕರ್ಷಕವಾಗಿರಬೇಕು" ಎಂದು ವಿವಾದಾತ್ಮಕವಾಗಿ ಹೇಳಿದ್ದಕ್ಕಾಗಿ ಕ್ಷಮೆಯಾಚಿಸಿದ್ದರು. ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದರು.

ಕಳೆದ ತಿಂಗಳು ದಲೈ ಲಾಮಾ ಅವರು ಎಂಟು ವರ್ಷದ ಯುಎಸ್-ಸಂಜಾತ ಮಂಗೋಲಿಯನ್ ಹುಡುಗನನ್ನು 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಹೆಸರಿಸಿದರು. ಇದು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯಾಗಿದೆ.
ಭಾರತದ ವಿರುದ್ಧ ದಲೈಲಾಮಾ ಹೇಳಿಕೆ
ಈ ಹಿಂದೆ 'ಭಾರತೀಯರು ಚೀನಿಯರಿಗಿಂತ ಸೋಂಬೇರಿಗಳು. ಆದರೆ ಈ ದೇಶ ಹೆಚ್ಚು ಸ್ಥಿರವಾಗಿದೆ ಮತ್ತು ವಿಧ ಸಂಸ್ಕೃತಿಗಳಿಗೆ ಜೀವಂತ ಉದಾಹರಣೆಯಾಗಿದೆ ಎಂದು ಟಿಬೆಟನ್ ಧರ್ಮಗುರು ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾ ಅಭಿಪ್ರಾಯ ಪಟ್ಟಿದ್ದರು. ಭಾರತೀಯ ವಾಣಿಜ್ಯ ಒಕ್ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತ ಹಾಗೂ ಚೀನಾ ಜನರ ಮಧ್ಯೆ ಹೋಲಿಕೆ ಮಾಡಿದ್ದರು. ಚೀನಿಯರಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಎಂದು ಅವರು ಹೇಳಿ ಆಕ್ರೋಶಕ್ಕೆ ಗುರಿಯಾಗಿದ್ದರು.
ಬಹುಶಃ ಆ ಗುಣಕ್ಕೆ ಇಲ್ಲಿನ ವಾತಾವರಣ ಕಾರಣ. ಆದರೆ ಭಾರತ ಸ್ಥಿರವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಪಾತ್ರ ವಹಿಸಬಹುದು. ವಿವಿಧ ಧರ್ಮಗಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಈ ದೇಶದಲ್ಲಿ ಸಹಿಷ್ಣುತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications