1160 ಮಂದಿಗೆ ಕೊರೊನಾ ಹಬ್ಬಿಸಿದ ದಕ್ಷಿಣ ಕೊರಿಯಾ ಮಹಿಳೆ
ಸೋಲ್, ಮಾರ್ಚ್ 17: ದಕ್ಷಿಣ ಕೊರೊಯಾ ಮಹಿಳೆಯೊಬ್ಬರು 1160 ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ.
Recommended Video
61ರ ಕೊರಿಯಾ ಮಹಿಳೆಯಿಂದ ಅನಾಹುತ ಸಂಭವಿಸಿದ್ದು, ಸೋಂಕು 8 ಸಾವಿರಕ್ಕೇರಿದೆ.ದಕ್ಷಿಣ ಕೊರಿಯಾದಲ್ಲಿ ಇದುವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ತಗುಲಿದೆ. 75 ಮಂದಿಯನ್ನು ಇದುವರೆಗೆ ಬಲಿ ಪಡೆದಿದೆ.
ದೇಶದಲ್ಲಿ ಕೇವಲ 30 ಮಂದಿಗೆ ತಗುಲಿದ್ದ ಸೋಂಕು ನಂತರದ ಒಂದೇ ತಿಂಗಳು ಅವಧಿಯಲ್ಲಿ 8 ಸಾವಿರದ ಗಡಿಯನ್ನು ದಾಟಿದೆ.ಫೆಬ್ರವರಿ 17ರಂದು ಮಹಿಳೆ ಪರೀಕ್ಷೆಗೆ ಒಳಗಾದಾಗ ಆಕೆಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.
ಆದರೆ ಯಾರಿಂದ ಆಕೆಗೆ ಕೊರೊನಾ ಅಂಟಿತ್ತು ಎಂಬುದು ತಿಳಿದುಬಂದಿಲ್ಲ, ಆದರೆ ಈಕೆಯಿಂದ ಸಾವಿರಾರು ಮಂದಿಗೆ ಕೊರೊನಾ ಹಬ್ಬಿದೆ.

ಕೊರೊನಾ ಅಂದಾಜು ಮೀರಿ ವ್ಯಾಪಿಸಲು ಮಹಿಳೆಯ ಕಾರಣ
ದೇಶದಲ್ಲಿ ಕೊರೊನಾ ಅಂದಾಜು ಮೀರಿ ವ್ಯಾಪಿಸಲು ಕಾರಣವಾಗಿದ್ದೇ ಪೇಷಂಟ್ 31 ಎಂದು ನಾಮಾಂಕಿತವಾಗಿರುವ ಮಹಿಳಾ ಕೊರೊನಾ ವೈರಸ್ ರೋಗಿ. ಅಂದರೆ ಈಕೆ ದೇಶದ 31ನೇ ಕೊರೊನಾ ಪೀಡಿತೆ.

ಒಬ್ಬಳೇ ಮಹಿಳೆಯಿಂದ 1160 ಮಂದಿಗೆ ಕೊರೊನಾ
ಈ ಒಬ್ಬಳೇ ಮಹಿಳೆಯಿಂದ 1160 ಜನರಿಗೆ ಕೊರೊನಾ ಅಂಟಿದೆ. ಈ ಜನರಿಂದ ಮತ್ತಷ್ಟು ಸಾವಿರ ಜನರಿಗೆ ಕೊರೊನಾ ವ್ಯಾಪಿಸಿದೆ ಎಂದು ಸರ್ಕಾರದ ಮೂಲಗಳು ಉಲ್ಲೇಖಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

1160 ಮಂದಿಗೆ ಕೊರೊನಾ ಹರಡಿದ್ಹೇಗೆ?
61ರ ಮಹಿಳೆಗೆ ಅಪಘಾತವಾಗಿತ್ತು, ಆಸ್ಪತ್ರೆಗೆ ದಾಖಲಾಗಿದ್ದಳು, ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದಳು, ಸಾವಿರಾರು ಜನರ ಜೊತೆ ಭಾಗಿಯಾದಳು. ಬಳಿಕ ಆಸ್ಪತ್ರೆಗೆ ಬಂದಳು. ಆಕೆಯಲ್ಲಿ ಕೊರೊನಾ ದೃಢ ಪಟ್ಟಿತ್ತು. ಕೊರಿಯಾದ್ಯಂತ ಸೋಂಕು ಹೆಚ್ಚಳಗೊಂಡಿದೆ.

ಯಾವ ವಿದೇಶಿಯರನ್ನೂ ಭೇಟಿಯಾಗಿಲ್ಲ ಎಂದಿದ್ದಳು
ಫೆ.15ರಂದು ನಿಮಗೆ ಕೊರೊನಾ ವೈರಸ್ ಇರಬಹುದು. ಪರೀಕ್ಷಿಸೋಣ ಎಂದು ವೈದ್ಯರು ಆಕೆಗೆ ಹೇಳಿದಾಗ ನಾನೇಕೆ ಕೊರೊನಾ ಪರೀಕ್ಷೆಗೆ ಒಳಪಡಲಿ, ನಾನು ಯಾವ ವಿದೇಶಿಯರನ್ನೂ ಭೇಟಿ ಮಾಡಿಲ್ಲ. ವಿದೇಶಕ್ಕೂ ಹೋಗಿಲ್ಲ, ನನಗೆ ಕೊರೊನಾ ಬಂದಿಲ್ಲ ಎಂದು ವೈದ್ಯರ ಜೊತೆ ಜಗಳವಾಡಿದ್ದಳು. ಈ ನಡುವೆ ಕೊರಿಯಾದ ಶಿಂಚೆಯೋನ್ಜಿ ಚರ್ಚ್ ನಲ್ಲಿ ಸಾವಿರಾರು ಜನರು ಭಾಗಿಯಾಗಿದ್ದ ಸಭೆಯಲ್ಲಿ ಈಕೆಯೂ ಕೂಡ ಭಾಗಿಯಾಗಿದ್ದಳು. ಈಕೆಗೆ ಮೊದಲೇ ಕೊರೊನಾ ಬಂದಿದ್ದ ಕಾರಣ ಅಲ್ಲಿದ್ದ ಎಲ್ಲರಿಗೂ ಕೊರೊನಾ ಹರಡುವಂತೆ ಮಾಡಿದ್ದಳು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications