ಚೀನಾ ಕಾಂಗ್ರೆಸ್ನ ಸಮಾವೇಶಕ್ಕೂ ಮುನ್ನ ನಡೆದ ಸಭೆಯ ಸೀಕ್ರೆಟ್ ಏನು!?
ಬೀಜಿಂಗ್, ಅಕ್ಟೋಬರ್ 10: ಚೀನಾದ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ಪಿಂಗ್ ಮೂರನೇ ಬಾರಿ ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ(CCP)ದ 20ನೇ ರಾಜಕೀಯ ಸಭೆ (ಕಾಂಗ್ರೆಸ್) ನಡೆಯಲಿದೆ. ಈ ಸಭೆಗೂ ಮುನ್ನ ನಡೆದ ಪೂರ್ವಭಾವಿ ಸಭೆಯ ಮೇಲೆ ಇದೀಗ ಜಗತ್ತಿನ ದೃಷ್ಟಿ ನೆಟ್ಟಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಕಾಂಗ್ರೆಸ್ ಸಭೆಯು ಮೂರನೇ ಅವಧಿಗೆ ಕ್ಸಿ ಜಿನ್ಪಿಂಗ್ ಆಯ್ಕೆ ಕುರಿತು ಅಜೆಂಡಾ ಸೆಟ್ ಮಾಡಲಾಗಿದೆ. ಕಳೆದ 19ನೇ ಕೇಂದ್ರ ಸಮಿತಿಯ 300ಕ್ಕೂ ಹೆಚ್ಚು ಸದಸ್ಯರಲ್ಲಿ ಹಲವರು ಅಕ್ಟೋಬರ್ 16ರಂದು ಪ್ರಾರಂಭವಾಗುವ 20ನೇ ಪಕ್ಷದ ಕಾಂಗ್ರೆಸ್ನ ಸಭೆಯಲ್ಲಿ ನಿವೃತ್ತರಾಗುತ್ತಾರೆ.
ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ ಸಂವಿಧಾನದ ನೀತಿಗಳು ಮತ್ತು ಕರಡು ತಿದ್ದುಪಡಿಗಳನ್ನು ಅನುಮೋದಿಸಲು ಏಳನೇ ಪ್ಲೀನಮ್ ಎಂಬ ವಾರ್ಷಿಕ ಸರ್ವಸದಸ್ಯರ ಅಧಿವೇಶನ ಕರೆಯಲಾಗಿದೆ. ಅದು ಈ ವಾರದ ಕಾಂಗ್ರೆಸ್ನಲ್ಲಿ ಔಪಚಾರಿಕವಾಗಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್ ಸಭೆಯಲ್ಲಿ ತೆಗೆದುಕೊಳ್ಳುವ ಪ್ರಮುಖ ನಿರ್ಣಯಗಳು ಮತ್ತು ನಿರ್ಧಾರಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ಸಿ ಜಿನ್ಪಿಂಗ್ ಪುನರ್ ಆಯ್ಕೆಯೇ ಕಾಂಗ್ರೆಸ್ ಸಭೆ ಉದ್ದೇಶ
ಚೀನಾದಲ್ಲಿ ಮುಂಬರುವ ಅಕ್ಟೋಬರ್ 16ರಂದು ಶುರುವಾಗಲಿರುವ ಕಾಂಗ್ರೆಸ್ ಪಕ್ಷದ ಸಭೆಯ ಮುಖ್ಯ ಉದ್ದೇಶವೇ ಕ್ಸಿ ಜಿನ್ಪಿಂಗ್ ಪುನರ್ ಆಯ್ಕೆ ಆಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಪುನರ್ ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಚೀನಾದ ಸಂವಿಧಾನದಲ್ಲಿನ ಕೆಲವು ಅಂಶಗಳ ತಿದ್ದುಪಡಿ, ರಾಜಕೀಯ ಸಮಿತಿ(ಪೊಲ್ಯೂಟ್ ಬ್ಯೂರೋ) ರಚನೆ ಹಾಗೂ ಕೇಂದ್ರೀಯ ಸಮಿತಿ ರಚನೆ ಕುರಿತು ನಿರ್ಧರಿಸಲಾಗುತ್ತದೆ.
ಭಾನುವಾರದ ಪ್ಲೀನಮ್ನಲ್ಲಿ ನಡೆದ ಕಾಂಗ್ರೆಸ್ನಲ್ಲಿ ಪ್ರಸ್ತುತಪಡಿಸುವ ಕರಡು ವರದಿ ಬಗ್ಗೆ ಕ್ಸಿ ಜಿನ್ಪಿಂಗ್ "ವಿವರಣಾತ್ಮಕ ಟೀಕೆ" ಅನ್ನು ಉಲ್ಲೇಖಿಸಿದರು. ಆದರೆ ಪಾಲಿಟ್ಬ್ಯುರೊ ಸ್ಥಾಯಿ ಸಮಿತಿ ಸದಸ್ಯ ವಾಂಗ್ ಹುನಿಂಗ್, ಸಾಂವಿಧಾನಿಕ ಕರಡು ತಿದ್ದುಪಡಿಗಳನ್ನು ವಿವರಿಸಿದರು.

2017ರ ಕಾಂಗ್ರೆಸ್ಸಿನಲ್ಲೂ ಅಗತ್ಯ ತಿದ್ದುಪಡಿ
ಕಳೆದ 2017ರಲ್ಲಿ ನಡೆದ ಹಿಂದಿನ ಕಾಂಗ್ರೆಸ್ನಲ್ಲಿ ಕ್ಸಿ ಜಿನ್ಪಿಂಗ್ ಸಿದ್ಧಾಂತವನ್ನು ಸೇರಿಸುವ ಅಂಶಗಳಿಗೋಸ್ಕರ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಇದನ್ನು ಅಧಿಕೃತವಾಗಿ "ಹೊಸ ಯುಗಕ್ಕಾಗಿ ಚೀನೀ ಗುಣಲಕ್ಷಣಗಳೊಂದಿಗೆ ಸಮಾಜವಾದದ ಕುರಿತು ಕ್ಸಿ ಜಿನ್ಪಿಂಗ್ ಚಿಂತನೆ" ಎಂದು ಕರೆಯಲಾಯಿತು. ಅವರನ್ನು ಮಾವೋ ಝೆಡಾಂಗ್ ಮತ್ತು ಡೆಂಗ್ ಕ್ಸಿಯಾಪಿಂಗ್ಗೆ ಸಮಾನವಾಗಿ ಉನ್ನತೀಕರಿಸಲಾಯಿತು. ಸಂವಿಧಾನದಲ್ಲಿ ನಾಮಸೂಚಕ ಸಿದ್ಧಾಂತಗಳೊಂದಿಗೆ ಮಾವೋ ಮತ್ತು ಕ್ಸಿ ಅವರಿಗೆ ಮಾತ್ರ ಅಧಿಕಾರದಲ್ಲಿದ್ದಾಗ ಆ ಗೌರವಗಳನ್ನು ನೀಡಲಾಯಿತು.

ಕಮ್ಯೂನಿಸ್ಟ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ
ನವೆಂಬರ್ 2021ರಲ್ಲಿ ಕೇಂದ್ರ ಸಮಿತಿಯು ಹೊಸ ಯುಗಕ್ಕಾಗಿ ಚೀನೀ ಗುಣಲಕ್ಷಣಗಳೊಂದಿಗೆ ಕ್ಸಿ ಜಿನ್ಪಿಂಗ್ ಚಿಂತನೆಯನ್ನು ಅಂಗೀಕರಿಸಿತು. ಇದು "ನಮ್ಮ ಕಾಲದಲ್ಲಿ ಅತ್ಯುತ್ತಮವಾದ ಚೀನೀ ಸಂಸ್ಕೃತಿ ಮತ್ತು ನೀತಿಯನ್ನು ಸಾಕಾರಗೊಳಿಸುತ್ತದೆ ಮತ್ತು ಚೀನೀ ಸಂದರ್ಭಕ್ಕೆ ಮಾರ್ಕ್ಸ್ವಾದವನ್ನು ಅಳವಡಿಸಿಕೊಳ್ಳುವಲ್ಲಿ ಹೊಸ ಪ್ರಗತಿಯನ್ನು ಪ್ರತಿನಿಧಿಸುತ್ತದೆ" ಎಂದು ಪ್ರತಿಪಾದಿಸಿತು. ಮುಂದಿನ ತಿಂಗಳು ಪಕ್ಷದ ಸಂವಿಧಾನಕ್ಕೆ ಈ ಕುರಿತು ತಿದ್ದುಪಡಿ ತರುವುದು ಖಚಿತವಾಗಿದೆ.
ಈ ನಿರೀಕ್ಷಿತ ತಿದ್ದುಪಡಿಗಳು "ಕಾಮ್ರೇಡ್ ಕ್ಸಿ ಜಿನ್ಪಿಂಗ್ ಸ್ಥಾನವನ್ನು ಭದ್ರಪಡಿಸುತ್ತವೆ. "ಹೊಸ ಯುಗಕ್ಕಾಗಿ ಚೀನೀ ಸಮಾಜವಾದವು ಕ್ಸಿ ಜಿನ್ ಪಿಂಗ್ ಅತಿಕ್ರಮಣ ಸ್ಥಿತಿಯನ್ನು ಪಾಲಿಸುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿವೆ. ಇತರೆ ತಿದ್ದುಪಡಿಗಳು ಚೈನೀಸ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂಸಿ ಅಧ್ಯಕ್ಷರ ಅವಧಿಗೆ ನಿಗದಿಪಡಿಸಿದ್ದ ಸಮಯ ಮಿತಿಯನ್ನು ತೆಗೆದು ಹಾಕಿದೆ. ಅದೇ ರೀತಿ 2018ರಲ್ಲಿ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ್ದ ಐದು ವರ್ಷಗಳ ಮಿತಿಯನ್ನು ರದ್ದುಗೊಳಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಹೊಸ ಕಾಲಮಿತಿಯನ್ನು ನಿಗದಿಪಡಿಸಿಲ್ಲ.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ ಪಿಂಗ್ ನಂತರ ಯಾರು?
ಚೀನಾದ ಗಣ್ಯರು ಕ್ಸಿ ವಿರುದ್ಧ ದಂಗೆ ಏಳುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ವಾಸ್ತವದಲ್ಲಿ ಗಣ್ಯರು ದೇಶದಿಂದ ಪಲಾಯನ ಮಾಡುವ ಸಾಧ್ಯತೆಯಿದ್ದು, ದಂಗೆ ಏಳುವುದರ ಬದಲಿಗೆ ತಮ್ಮನ್ನು ತಾವು ಬೇರೆಡೆ ಸ್ಥಾಪಿಸಿಕೊಳ್ಳುತ್ತಾರೆ. ಅದೇ ರೀತಿ ಎಲ್ಲರ ಮೇಲೆ ಕ್ಸಿ ಜಿನ್ ಪಿಂಗ್ ಕಣ್ಗಾವಲು ಇರಿಸಿದ್ದಾರೆ. ಆಂತರಿಕ ಭದ್ರತಾ ಪಡೆಗಳೊಂದಿಗೆ ಸುತ್ತುವರಿದುಕೊಂಡಿದ್ದಾರೆ. ಆದ್ದರಿಂದ 1989ರಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನಾ ಚಳುವಳಿಗಳನ್ನು ನಡೆಸುವುದು ಕಷ್ಟವಾಗುತ್ತದೆ. ಮುಂದಿನ ಅವಧಿಯಲ್ಲಿ ಕ್ಸಿ ವಿರುದ್ಧ ಸಾರ್ವಜನಿಕ ಕುಂದುಕೊರತೆಗಳು ಬೆಳೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. 69 ವರ್ಷ ವಯಸ್ಸಿನ ಕ್ಸಿ ಕನಿಷ್ಠ ಇನ್ನೂ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತಾರೆ. 2022 ಅಲ್ಲದೇ 2032ರವರೆಗೂ ಅಧಿಕಾರದಲ್ಲಿ ಉಳಿಯುವ ಸಂಭವಗಳು ಹೆಚ್ಚಾಗಿವೆ. ಆದ್ದರಿಂದಲೇ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಘೋಷಿಸುವುದಕ್ಕೆ ಸಾಕಷ್ಟು ಸಮಯವಿದ್ದು, ಸದ್ಯಕ್ಕೆ ತನ್ನ ನಂತರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬುದನ್ನು ಹೇಳುವುದಕ್ಕೆ ಅವರು ಧೈರ್ಯ ಮಾಡಿಲ್ಲ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications