ಗಲ್ವಾನ್ ಆಯ್ತು, ಈಗ ಭೂತಾನ್ ಗಡಿಯಲ್ಲಿ ಕ್ಯಾತೆ ತೆಗೆದ ಚೀನಾ ಸೇನೆ
ನವದೆಹಲಿ, ಜುಲೈ 6: ಚೀನಾವು ಪೂರ್ವ ಲಡಾಖ್ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆದ ಬಳಿಕ ಇದೀಗ ಭೂತಾನ್ ಗಡಿಯಲ್ಲಿ ತನ್ನ ವರಸೆ ಆರಂಭಿಸಿದೆ.
Recommended Video
ಲಡಾಖ್ನ ಪೂರ್ವಭಾಗದಲ್ಲಿ ಪ್ಯಾಂಗಾಂಗ್ ತ್ಸೂ ಸರೋವರದ ಬಳಿಯ ತನ್ನ ಅತಿಕ್ರಮಣವನ್ನು ಒಪ್ಪುವಂತೆ ಭಾರತವನ್ನು ಮಣಿಸಲೇಬೇಕು ಎಂದು ಚೀನಾ ಹಟಕ್ಕೆ ಬಿದ್ದಿದೆ. ಇದಕ್ಕಾಗಿ ಅದು ಒಳದಾರಿಗಳನ್ನು ಹುಡುಕುತ್ತಿದೆ.
ಭೂತಾನ್ ಭಾರತದ ಅರುಣಾಚಲಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಇದೇ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ನ ಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಈ ಭಾಗವನ್ನು ಆಕ್ರಮಿಸಿಕೊಳ್ಳಲು, ಪ್ರಯತ್ನಿಸುತ್ತಲೇ ಇದೆ.

ಇದೀಗ ಭಾರತ ಮತ್ತು ಭೂತನ್ ನಡುವೆ ಇರುವ ಸ್ನೇಹ ಮತ್ತು ಸೌಹಾರ್ದ ಸಂಬಂಧವನ್ನು ಹದಗೆಡಿಸಿಯಾದರೂ, ಪೂರ್ವ ಲಡಾಖ್ನ ತನ್ನ ಅತಿಕ್ರಮಣವನ್ನು ಒಪ್ಪಿಕೊಳ್ಳುವಂತೆ ಭಾರತವನ್ನು ಮಣಿಸಬೇಕು ಎಂಬ ಪ್ರಯತ್ನವನ್ನು ಅದು ಆರಂಭಿಸಿದೆ.
ಇದೀಗ ಅದಕ್ಕೆ ಸಿಕ್ಕಿರುವ ಒಂದು ಅವಕಾಶದಲ್ಲಿ ಪುಟಾಣಿ ರಾಷ್ಟ್ರ ಭೂತಾನ್ನೊಂದಿಗೆ ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿ ಗಡಿ ವಿವಾದ ಇದೆ. ಇದು ತುಂಬಾ ಹಿಂದಿನಿಂತಲೂ ಇರುವಂಥದ್ದು. ಅದನ್ನು ಇತ್ಯರ್ಥ ಪಡಿಸಿಕೊಳ್ಳಲು ಈಗ ಚೀನಾ ನಿರ್ಧರಿಸಿದೆ.
ಹಾಗಾಗಿ ಇದರಲ್ಲಿ ಮೂರನೆಯವರು ಯಾರೂ ಮಧ್ಯಪ್ರವೇಶಿಸಬಾರದು ಎಂದು ಪರೋಕ್ಷವಾಗಿ ಭಾರತವನ್ನು ಉಲ್ಲೇಖಿಸಿ ಚೀನಾ ಹೇಳಿಕೆ ನೀಡಿದೆ.
ಜೂನ್ನಲ್ಲಿ ಭಾರತದ ಉಪಸ್ಥಿತಿಯಲ್ಲಿ ನಡೆದ ಬಹು ಆಯಾಮದ ವೇದಿಕೆಯ ಸಭೆಯಲ್ಲಿ ಕೂಡ ಚೀನಾ ಈ ವಿಷಯವನ್ನು ಪ್ರಸ್ತಾಪಿಸಿತ್ತು. ತಮ್ಮ ದೇಶದ ಪೂರ್ವಭಾಗದ ಗಡಿ ವಿಷಯವಾಗಿ ಭೂತಾನ್ನೊಂದಿಗೆ ವಿವಾದ ಇದೆ ಎಂದು ಹೇಳಿತ್ತು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications