ಅಮೆರಿಕ ಬಳಿಕ 'ವೀಸಾಘಾತ' ನೀಡಿದ ಆಸ್ಟ್ರೇಲಿಯಾ
ಅಮೆರಿಕ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿಯನ್ನು ಬದಲಾಯಿಸಿಕೊಂಡಿದ್ದು, ವಿದೇಶಿಯರನ್ನು ತಾತ್ಕಾಲಿಕವಾಗಿ ಉದ್ಯೋಗಕ್ಕೆ ನೇಮಿಸಿಕೊಳ್ಳುವ 'ವೀಸಾ 457' ಯೋಜನೆ ರದ್ದಾಗಿದೆ.
ಕ್ಯಾನ್ ಬೆರಾ, ಏಪ್ರಿಲ್ 19: ಅಮೆರಿಕ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿಯನ್ನು ಬದಲಾಯಿಸಿಕೊಂಡಿದ್ದು, ವಿದೇಶಿಯರನ್ನು ತಾತ್ಕಾಲಿಕವಾಗಿ ಉದ್ಯೋಗಕ್ಕೆ ನೇಮಿಸಿಕೊಳ್ಳುವ 'ವೀಸಾ 457' ಯೋಜನೆ ರದ್ದಾಗಿದೆ.
ಆಸ್ಟ್ರೇಲಿಯಾ ಫಸ್ಟ್ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 'ವೀಸಾ 457' ಯೋಜನೆಯಿಂದ ನಿರುದ್ಯೋಗ ಸಮಸ್ಯೆ ತಲೆದೋರಿತ್ತು.

ವಿದೇಶಿಯರಿಗೆ ತಾತ್ಕಾಲಿಕವಾಗಿ ಉದ್ಯೋಗ ನೀಡುತ್ತಿದ್ದ ಕೌಶಲ್ಯಪೂರ್ಣ ವಲಸೆಗೆ ಒತ್ತು ನೀಡುತ್ತಿದ್ದ ವೀಸಾ 457 ಯೋಜನೆ ಇನ್ಮುಂದೆ ಬಂದ್ ಆಗಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಘೋಷಿಸಿದ್ದಾರೆ.
ಭಾರತೀಯ ಐಟಿ ರಂಗಕ್ಕೆ ಎಚ್ಚರಿಕೆ: ವಿದೇಶಕ್ಕೆ ಭಾರತದಿಂದ ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ಕಳಿಸುತ್ತಿದ್ದ ಭಾರತೀಯ ಐಟಿ ರಂಗಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಅಮೆರಿಕ, ಬ್ರಿಟನ್ ಹಾಗೂ ಸಿಂಗಪುರ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿ ಬದಲಾಯಿಸಿಕೊಂಡು ವಲಸಿಗರ ಮೇಲೆ ಕಡಿವಾಣ ಹಾಕುತ್ತಿದೆ.
ಸದ್ಯ 95,000ಕ್ಕೂ ಅಧಿಕ ಉದ್ಯೋಗಿಗಳಿಗೆ 457 ವೀಸಾ ನೀಡಿದ್ದು, ಇದರ ನಿಷೇಧ ಭಾರತೀಯರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. 457 ವೀಸಾದ ಮೂಲಕ ಆಸ್ಟ್ರೇಲಿಯಾದ ಕಂಪನಿಗಳು 4 ವರ್ಷ ಗಳ ಅವಧಿಗೆ ವಿದೇಶಿಯರನ್ನು ನೇಮಿಸಿ ಕೊಳ್ಳಬಹುದಾಗಿತ್ತು. ಇದರಿಂದ ಆಸ್ಟ್ರೇಲಿಯನ್ನರಿಗೆ ಉದ್ಯೋಗ ಕೊರತೆ ಎದುರಾಗಿತ್ತು ಎಂದು ಎಬಿಸಿ ವರದಿ ಮಾಡಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications