ಯುಎಸ್ಎ: ಟೆಕ್ಸಾಸ್ ನಲ್ಲಿ ಹಿಂದೂ ದೇಗುಲ ಮೇಲೆ ದಾಳಿ
ವಾಷಿಂಗ್ಟನ್, ಏ.20: ಶಿವರಾತ್ರಿ ಸಂದರ್ಭದಲ್ಲಿ ಹಿಂದೂ ದೇಗುಲವೊಂದರ ಗೋಡೆ ಮೇಲೆ ಎಚ್ಚರಿಕೆ ಬರಹ ಕೆತ್ತಿ ಹೋಗಿದ್ದ ಘಟನೆ ಬೆನ್ನಲ್ಲೇ ಅಮೆರಿಕದ ಉತ್ತರ ಟೆಕ್ಸಾಸ್ ಪ್ರಾಂತ್ಯದ ಹಿಂದೂ ದೇಗುಲದ ಗೋಡೆಯನ್ನು ಅಪವಿತ್ರಗೊಳಿಸಲಾಗಿದೆ. ದೇಗುಲದ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಉತ್ತರ ಟೆಕ್ಸಾಸ್ ನ ಓಲ್ಡ್ ಲೇಕ್ ಹೈಲ್ಯಾಂಡ್ಸ್ ನಲ್ಲಿರುವ ದೇಗುಲದ ಗೋಡೆ ಹಾಗೂ ಮುಖ್ಯದ್ವಾರದ ಮೇಲೆ '666' ಹಾಗೂ ಕ್ರಾಸ್ ಚಿನ್ಹೆಯನ್ನು ಉಲ್ಟಾ ಬರೆಯಲಾಗಿದೆ. ಸ್ಪ್ರೇ ಪೈಂಟ್ ಬಳಸಿ ಗೋಡೆಗಳ ಮೇಲೆ ಗ್ರಾಫಿಟಿಗಳನ್ನು ಬಿಡಿಸುವ ಚಿತ್ರಗಳು ಕಂಡು ಬಂದಿವೆ ಎಂದು ದೇಗುಲದ ಆಡಳಿತ ಮಂಡಳಿ ಸದಸ್ಯ ಕೃಷ್ಣ ಸಿಂಗ್ ಹೇಳಿದ್ದಾರೆ. [ಅಮೆರಿಕದ ದೇಗುಲ ಮೇಲೆ ದಾಳಿ, ಶಿವರಾತ್ರಿ ದಿನ ಆತಂಕ]

ದುಷ್ಕರ್ಮಿಗಳ ಪತ್ತೆಗಾಗಿ ಡಲ್ಲಾಸ್ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ದೇಗುಲದ ಸುತ್ತಾ ಬೇಲಿ ಹಾಕುವ ಕಾರ್ಯವನ್ನು ಭಕ್ತಾದಿಗಳೇ ಸ್ವಇಚ್ಛೆಯಿಂದ ಮಾಡಿದ್ದಾರೆ. ಈ ಕಾರ್ಯದಲ್ಲಿ ಹಿಂದೂ ಧರ್ಮದವರಲ್ಲದೇ ಅನ್ಯಧರ್ಮಿಯರು ಕೈಜೋಡಿಸಿದ್ದು ವಿಶೇಷ., ಅಮೆರಿಕದಲ್ಲಿ ಧಾರ್ಮಿಕ ಶಾಂತಿ ಕದಡುವ ಇಂಥ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೃಷ್ಣ ಸಿಂಗ್ ಹೇಳಿದರು. [ಅಮೆರಿಕದಲ್ಲಿ ಅಣ್ಣಾಮಲೈ ಸ್ವಾಮೀಜಿಗೆ 27 ವರ್ಷ ಶಿಕ್ಷೆ]
ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ಹಿಂದೂ ಧಾರ್ಮಿಕ ಕೇಂದ್ರವೊಂದರ ಮೇಲೆ ಈ ರೀತಿ ದಾಳಿ ನಡೆದಿದೆ. ಸಿಯಾಟೆಲ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಫೆ.15ರಂದು ದೇಗುಲದ ಗೋಡೆ ಮೇಲೆ ಸ್ವಸ್ತಿಕಾ ಚಿನ್ಹೆ ಬರೆದು ಗೆಟ್ ಔಟ್ ಎಂದು ಕರೆ ನೀಡಲಾಗಿತ್ತು. ನಂತರ ಫೆ.26ರಂದು ಕೆಂಟ್ ಹಿಂದೂ ದೇಗುಲದ ಮೇಲೆ fear ಎಂದು ಬರೆಯಲಾಗಿತ್ತು. (ಪಿಟಿಐ)
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications