ಗಾಜಾ ಜನರಲ್ಲಿ ನಿಲ್ಲದ ಭಯದ ವಾತಾವರಣ, ಮತ್ತೆ ಮತ್ತೆ ಮುಂದುವರಿದ ವಾಯುದಾಳಿ
ಹಮಾಸ್ & ಇಸ್ರೇಲ್ ಬಡಿದಾಟಕ್ಕೆ ಗಾಜಾ ನೆಲ ನಾಶವಾಗಿ ಹೋಗಿದೆ, ಕೇವಲ 2 ವರ್ಷ ಅಂತರದಲ್ಲಿ ಗಾಜಾ ಪಟ್ಟಿ ನರಕವಾಗಿ ಬದಲಾಗಿದೆ. ಹಮಾಸ್ ವಿರುದ್ಧದ ಕೋಪಕ್ಕೆ ಯುದ್ಧ ಘೋಷಿಸಿ, ಗಾಜಾ ಮೇಲೆ ನುಗ್ಗಿ ಬಂದಿದ್ದ ಇಸ್ರೇಲ್ ಪಡೆಗಳು ಭಾರಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ಆರಂಭ ಮಾಡಿದ್ದವು. ಈಗಾಗಲೇ ಹಲವು ಬಾರಿ ಕದನ ವಿರಾಮ ಘೋಷಣೆ ಮಾಡಿದ್ದರೂ, ಮತ್ತೆ ಮತ್ತೆ ಗಾಜಾ ನೆಲದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಜನರಿಗೆ ತುತ್ತು ಅನ್ನಕ್ಕೂ ಭಾರಿ ದೊಡ್ಡ ಸಮಸ್ಯೆ ಆಗುತ್ತಿದೆ.
ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಮಾಡಿ, ಯುದ್ಧವನ್ನ ನಿಲ್ಲಿಸಿದ್ದೇನೆ ಅಂತಾ ಟ್ರಂಪ್ ಹೇಳಿದ್ದರು. ಆದರೆ, ಟ್ರಂಪ್ ಅವರು ಮಾತು ಕೊಟ್ಟ ಕೆಲವೇ ದಿನಗಳಲ್ಲಿ ಮತ್ತೆ ಹಿಂಸಾಚಾರದ ಬೆಂಕಿ ಹೊತ್ತಿಕೊಂಡಿತ್ತು. ನೋಡ, ನೋಡುತ್ತಲೇ ಮತ್ತೆ ಹಮಾಸ್ & ಇಸ್ರೇಲ್ ನಡುವೆ ಗಲಾಟೆ ಕೂಡ ಜೋರಾಗಿದೆ. ಹೀಗಿದ್ದಾಗ ಗಾಜಾ ಜನರಲ್ಲಿ ನಿಲ್ಲದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮತ್ತೆ ಮತ್ತೆ ಮುಂದುವರಿದ ವಾಯುದಾಳಿ ಪರಿಣಾಮ ಇನ್ನಷ್ಟು ಜೀವಗಳು ಬಲಿಯಾಗಿವೆ. ಅಲ್ಲದೆ ಈ ವಿಚಾರ ಮತ್ತೆ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಚರ್ಚೆಗೆ ವೇದಿಕೆಯನ್ನೂ ಒದಗಿಸಿದೆ...

ಯುದ್ಧದ ವಿಚಾರದಲ್ಲಿ ಅಮೆರಿಕ ನಿಲುವು ಏನು?
ಮಧ್ಯಪ್ರಾಚ್ಯ ಭಾಗದ ಗಾಜಾ ಪ್ರದೇಶದಲ್ಲಿ ಅಮೆರಿಕ ಬಿಗಿಯಾದ ಹಿಡಿತ ಹೊಂದಿದೆ. ಇಸ್ರೇಲ್ನ ಮೂಲಕ ಮಧ್ಯಪ್ರಾಚ್ಯ ಭೂಭಾಗಕ್ಕೂ ತನ್ನ ಶಕ್ತಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಇದೆಲ್ಲವನ್ನೂ ಮೀರಿ ಇಸ್ರೇಲ್ & ಅಮೆರಿಕ ಅತ್ಯಾಪ್ತ ರಾಷ್ಟ್ರಗಳು. ಹೀಗಾಗಿ ಇಬ್ಬರ ನಡುವೆ ಮಾತುಕತೆ ಮಾಡಿ ಯುದ್ಧ ನಿಲ್ಲಿಸುವ ಪ್ರಯತ್ನವನ್ನು ಪದೇ ಪದೇ ಮಾಡುತ್ತಿದೆ ಡೊನಾಲ್ಡ್ ಟ್ರಂಪ್ ಆಡಳಿತ.
ಹಾಗೇ ಇದೇ ವಿಚಾರದಲ್ಲಿ ತಮಗೆ ನೊಬೆಲ್ ಪ್ರಶಸ್ತಿಯನ್ನು ಕೂಡ ಕೊಡಬೇಕು ಎಂದು ಹೇಳಿದ್ದರು ಟ್ರಂಪ್ ಅವರು. ಆದರೆ ಇದೀಗ ಬೇರೆಯದ್ದೇ ರೀತಿಯ ಕಿರಿಕ್ ಶುರುವಾಗಿದೆ. ಈಗಾಗಲೇ ಸುಮಾರು 60,000 ಜನರು ಗಾಜಾ ನೆಲದಲ್ಲಿ ಯುದ್ಧಕ್ಕೆ ಬಲಿಯಾಗಿರುವ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ಲಕ್ಷಾಂತರ ಗಾಯಾಳುಗಳು ಕೂಡ ನರಳುತ್ತಿದ್ದಾರೆ.
ಯುದ್ಧ ನಿಲ್ಲಿಸದೇ ಹೋದರೆ ಪರಿಸ್ಥಿತಿ ಭೀಕರ?
ಹೌದು, ಅಮೆರಿಕ ಎದುರು ಇದೀಗ ಎರಡು ಆಯ್ಕೆಗಳು ಇವೆ. ಮೊದಲ ಆಯ್ಕೆ ಗಾಜಾ ಯುದ್ಧ ನಿಲ್ಲಿಸಿ ಎಲ್ಲವನ್ನೂ ಸೈಲೆಂಟ್ ಮಾಡುವುದು. ಇಲ್ಲವಾದರೆ ಮಧ್ಯಪ್ರಾಚ್ಯ ದೇಶಗಳ ಜೊತೆಯಲ್ಲಿ ದ್ವೇಷ ಕಟ್ಟಿಕೊಳ್ಳುವುದು. ಹೀಗೆ ಅಮೆರಿಕ ಕೂಡ ಭಾರಿ ದೊಡ್ಡ ಗೊಂದಲದಲ್ಲಿ ನರಳಿ ಹೋಗಿದೆ. ಜೊತೆಗೆ ಇಸ್ರೇಲ್ ತನ್ನ ಮಾತು ಕೇಳುತ್ತಿಲ್ಲ ಎಂಬುದನ್ನು ಹೊರಗೆ ಹೇಳಲು ಕೂಡ ಅಮೆರಿಕದ ಆಡಳಿತ ಸಂಕಟಪಡುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಯುದ್ಧ ಇನ್ನಷ್ಟು ದಿನ ಅಬ್ಬರಿಸುವುದು ಗ್ಯಾರಂಟಿ ಎನ್ನಬಹುದು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications