ಮಕ್ಕಳ ಹತ್ಯಾಕಾಂಡ : ಅಲ್-ಖೈದಾ ದುಃಖದಲ್ಲಿದೆಯಂತೆ..!
ಪೇಶಾವರ, ಡಿ. 22: ಪಾಕಿಸ್ತಾನದ ಪೇಶಾವರದಲ್ಲಿ ತಾಲಿಬಾನ್ ಉಗ್ರರು ನಡೆಸಿದ ನೂರಾರು ಮಕ್ಕಳ ಮಾರಣಹೋಮದಿಂದ ಇಡೀ ಜಗತ್ತು ಕಂಗಾಲಾಗಿದೆ. ಇದುವರೆಗೆ ಉಗ್ರರನ್ನು ಪೋಷಿಸುತ್ತ ಬಂದಿದ್ದ ಪಾಕಿಸ್ತಾನ ಕೂಡ ಅಫ್ಘಾನಿಸ್ತಾನ ಜೊತೆಗೂಡಿ ತಾಲಿಬಾನ್ ವಿರುದ್ಧ ನಿರ್ಣಾಯಕ ಸಮರಕ್ಕಿಳಿದಿದೆ.
ಇದೀಗ ಅಲ್ ಖೈದಾ ಸರದಿ. ತಾಲಿಬಾನ್ ಸಹೋದರ ಸಂಸ್ಥೆಯಾಗಿರುವ ಅಲ್ ಖೈದಾ ಕೂಡ ಮಕ್ಕಳ ಹತ್ಯಾಕಾಂಡವನ್ನು ವಿರೋಧಿಸಿದೆ. "ತಾಲಿಬಾನ್ ನಡೆಸಿದ ಮಕ್ಕಳ ಹತ್ಯಾಕಾಂಡದಿಂದ ನಮ್ಮ ಹೃದಯ ನೋವು ಹಾಗೂ ದುಃಖದಿಂದ ಒಡೆದುಹೋಗಿದೆ" ಎಂದು ಅಲ್ ಖೈದಾ ಸಂಘಟನೆಯ ದಕ್ಷಿಣ ಏಷ್ಯಾ ವಕ್ತಾರ ಒಸಾಮಾ ಮೆಹಮೂದ್ ನಾಲ್ಕು ಪುಟಗಳ ಹೇಳಿಕೆ ನೀಡಿದ್ದಾನೆ. [ತಾಲಿಬಾನ್ ದಾಳಿ : ನೂರಾರು ಮಕ್ಕಳ ಬಲಿ]

ಮುಸ್ಲಿಮರ ಮೇಲೆ ಸೇಡು ಬೇಡ : "ಪಾಕಿಸ್ತಾನ ಸೈನ್ಯ ನಡೆಸುತ್ತಿರುವ ದೌರ್ಜನ್ಯ ಮಿತಿಮೀರಿದೆ ಎಂಬುದರಲ್ಲಿ ಅನುಮಾನವಿಲ್ಲ. ಪಾಕಿಸ್ತಾನಿ ಸೈನ್ಯ ಅಮೆರಿಕದ ಗುಲಾಮನಂತೆ ವರ್ತಿಸುತ್ತಿದೆ. ಆದರೆ, ನಾವು ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳಬಾರದು" ಎಂದು ಅಭಿಪ್ರಾಯಪಟ್ಟಿದೆ. [ಮುಲಾಯಂ ಹುಟ್ಟುಹಬ್ಬಕ್ಕೆ ತಾಲಿಬಾನ್ ಫಂಡ್]
"ನಾವು ಅಲ್ಲಾಹ್ನ ಶತ್ರುವಾದ ಅಮೆರಿಕದ ವಿರುದ್ಧ ಹೋರಾಡುತ್ತಿದ್ದೇವೆ. ಅಮೆರಿಕನ್ನರಿಗೆ ಗುರಿ ಇಟ್ಟಿರುವ ಗನ್ಗಳನ್ನು ಮಕ್ಕಳು, ಮಹಿಳೆಯರು ಹಾಗೂ ಮುಸ್ಲಿಮರತ್ತ ತಿರುಗಿಸಬಾರದು" ಎಂದು ಒಸಾಮಾ ಮೆಹಮೂದ್ ಹೇಳಿದ್ದಾನೆ.
ಮಯನ್ಮಾರ್, ಬಾಂಗ್ಲಾದೇಶ್ ಮತ್ತು ಭಾರತದಲ್ಲಿ ಜಿಹಾದ್ ನಡೆಸುವ ಉದ್ದೇಶದಿಂದ ಅಯ್ಮನ್ ಅಲ್ ಝವಾಹಿರಿ ಈಚೆಗಷ್ಟೇ ಅಲ್ ಖೈದಾದ ದಕ್ಷಿಣ ಏಶಿಯಾ ಘಟಕ ಆರಂಭಿಸಿದ್ದಾನೆ.
ಮಕ್ಕಳನ್ನು ಕೊಲ್ಲುವುದು ಇಸ್ಲಾಂಗೆ ವಿರುದ್ಧ : ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ನಡೆಸಿರುವ ಮಕ್ಕಳ ಮಾರಣಹೋಮವನ್ನು ಅಫ್ಘಾನ್ ತಾಲಿಬಾನ್ ಕೂಡ ವಿರೋಧಿಸಿದೆ. ಮುಗ್ಧ ಮಕ್ಕಳನ್ನು ಕೊಲ್ಲುವುದು ಇಸ್ಲಾಂಗೆ ವಿರುದ್ಧ ಎಂದೂ ಹೇಳಿದೆ. [ತಾಲಿಬಾನ್ ಅಟಾಕ್ : ಪಾಕ್ ಸುಸ್ತು]
ಪಾಕಿಸ್ತಾನವು ಮಕ್ಕಳ ಮಾರಣಹೋಮವನ್ನು "ಮಿನಿ 9/11" ಎಂದು ಘೋಷಿಸಿಕೊಂಡಿದೆ. ಈ ಪ್ರಕರಣವು ಉಗ್ರರ ವಿರುದ್ಧ ನಡೆಸುತ್ತಿರುವ ಹೋರಾಟದ ರೂಪುರೇಷೆಯನ್ನೇ ಬದಲಾಯಿಸಿದೆ. ಅಫ್ಘಾನಿಸ್ತಾನದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯವು ತಾಲಿಬಾನ್ ವಿರುದ್ಧ ಕಳೆದ ಆರು ತಿಂಗಳುಗಳಿಂದ ಹೋರಾಟನಿರತವಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications