ಮಂಗಳ ಅಂಗಳಕ್ಕೆ ಹಾರಲು ಲಕ್ಷಾಂತರ ಭಾರತೀಯರಿಗೆ ಟಿಕೆಟ್!
ನ್ಯೂಯಾರ್ಕ್, ನವೆಂಬರ್ 09: 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿರುವ ಸುದ್ದಿ ತಿಳಿದಿರಬಹುದು. ಆದರೆ, 2018ರಲ್ಲಿ ಮಂಗಳಕ್ಕೆ ತೆರಳಲಿರುವ ನಾಸಾ ನೌಕೆಗೆ ಭಾರತದಿಂದ ಲಕ್ಷಾಂತರ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ.
ಸರಿ ಸುಮಾರು 1,38,899 ಮಂದಿ ಭಾರತೀಯರು ಮಂಗಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. 2018ರ ಮೇ 5ರಂದು ನಾಸಾದ ಇನ್ ಸೈಟ್ (Interior Exploration using Seismic Investigations, Geodesy and Heat Transport) ಬಾಹ್ಯಾಕಾಶ ಯೋಜನೆಯ ನೌಕೆ ಮಂಗಳನಲ್ಲಿಗೆ ತೆರಳಲಿದೆ. ಈ ನೌಕೆಗೆ ಲಕ್ಷಾಂತರ ಮಂದಿ ಟಿಕೆಟ್ ಪಡೆದಿದ್ದಾರೆ.

ಮಂಗಳನ ಅಂಗಳಕ್ಕೆ ಹೋಗಲು ಸಾಧ್ಯವೇ?: ನಾಸಾದ ಅಂತರ್ಜಾಲ ತಾಣಕ್ಕೆ ತೆರಳಿ ಹೆಸರು ನೋಂದಣಿಸಿ, ಅಲ್ಲಿ ಕೇಳುವ ಮಾಹಿತಿ ದಾಖಲಿಸಿ ಆಯ್ಕೆಯಾದವರಿಗೆ ಒಂದು ಆನ್ ಲೈನ್ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಹೀಗೆ ಆಯ್ಕೆಯಾದ ಲಕ್ಷಾಂತರ ಮಂದಿಯ ಹೆಸರುಗಳನ್ನು ಸಿಲಿಕಾನ್ ವೇಫರ್ ಮೈಕ್ರೋಚಿಪ್ ವೊಂದರಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಬಾಹ್ಯಾಕಾಶ ನೌಕೆಯಲ್ಲಿರಿಸಿ ಮಂಗಳನಲ್ಲಿಗೆ ಕಳುಹಿಸಿಕೊಡಲಾಗುತ್ತದೆ.

ನಾಸಾ ಇಲ್ಲಿ ತನಕ 2,429,807 ಅರ್ಜಿಗಳನ್ನು ವಿಶ್ವದೆಲ್ಲೆಡೆಯಿಂದ ಪಡೆದುಕೊಂಡಿತ್ತು. ಯುನೈಟೆಡ್ ಸ್ಟೇಟ್ಸ್ ನಿಂದ 6,76,773 ಅರ್ಜಿ ಬಂದಿದ್ದರೆ, ಚೀನಾದಿಂದ 2,62,752 ಅರ್ಜಿಗಳು ಬಂದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.
ನಿಜಕ್ಕೂ ಆಯ್ಕೆಯಾದವರು: ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲು ಆಯ್ಕೆಯಾದವರಾಗಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications