ಸಾಮಾಜಿಕ ಜಾಲತಾಣ X ಮತ್ತೆ ಡೌನ್: ಭಾರತ ಸೇರಿ ಹಲವು ದೇಶಗಳಲ್ಲಿ ಬಳಕೆದಾರರಿಗೆ ಅಡಚಣೆ
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಬಳಕೆದಾರರು ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಪ್ರವೇಶಿಸಲು ತೀವ್ರ ತೊಂದರೆ ಅನುಭವಿಸಿರುವುದು ವರದಿಯಾಗಿದೆ. ಟೈಮ್ಲೈನ್ ಲೋಡ್ ಆಗದಿರುವುದು, ಪೋಸ್ಟ್ ಮಾಡುವಲ್ಲಿ ಸಮಸ್ಯೆ ಹಾಗೂ ವೆಬ್ಸೈಟ್ ಸಂಪೂರ್ಣವಾಗಿ ತೆರೆಯದಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದಿವೆ. ಇದು ಈ ವಾರದಲ್ಲೇ ಎಕ್ಸ್ ಎದುರಿಸುತ್ತಿರುವ ಎರಡನೇ ಜಾಗತಿಕ ವ್ಯತ್ಯಯವಾಗಿದ್ದು (ಔಟೇಜ್) ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
6,000 ದೂರು ದಾಖಲು
ಸೇವಾ ವ್ಯತ್ಯಯಗಳನ್ನು ಗಮನಿಸುವ ಡೌನ್ಡಿಟೆಕ್ಟರ್ (Downdetector) ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 8.46 ಗಂಟೆಗೆ ಈ ಸಮಸ್ಯೆ ಗರಿಷ್ಠ ಮಟ್ಟ ತಲುಪಿತು. ಆ ಸಮಯದಲ್ಲಿ ಜಾಗತಿಕವಾಗಿ 77,000ಕ್ಕೂ ಹೆಚ್ಚು ಬಳಕೆದಾರರು ಎಕ್ಸ್ ಬಳಸುವಾಗ ಸೇವೆಯಲ್ಲಿ ತೊಂದರೆ ಎದುರಿಸಿದ್ದಾಗಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಭಾರತದಿಂದಲೇ 6,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಬಳಕೆದಾರರು ಮುಖ್ಯವಾಗಿ ಟೈಮ್ಲೈನ್ ಲೋಡ್ ಆಗದಿರುವುದು, ಪೋಸ್ಟ್ ಮಾಡಲು ಸಾಧ್ಯವಾಗದಿರುವುದು, ಲಾಗಿನ್ ಸಮಸ್ಯೆ ಹಾಗೂ ವೆಬ್ಸೈಟ್ ಪ್ರವೇಶದಲ್ಲಿ ಅಡಚಣೆ ಎದುರಿಸಿದ ಬಗ್ಗೆ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಎರಡನೇ ಬಾರಿ ಈ ರೀತಿ ಸಮಸ್ಯೆ ಎದುರಿಸಿದ್ದು, ಇದಕ್ಕೂ ಮೊದಲು, ಮಂಗಳವಾರವೂ ಎಕ್ಸ್ ಜಾಗತಿಕ ಮಟ್ಟದಲ್ಲಿ ಡೌನ್ ಆಗಿತ್ತು. ಆ ವೇಳೆಯೂ ಬಳಕೆದಾರರು ದೀರ್ಘ ಸಮಯದವರೆಗೆ ಎಕ್ಸ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಒಂದೇ ವಾರದಲ್ಲಿ ಎರಡನೇ ಬಾರಿ ಈ ರೀತಿಯ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿರುವುದು, ಈ ವೇದಿಕೆಯ ತಾಂತ್ರಿಕ ಸ್ಥಿರತೆ ಕುರಿತು ಪ್ರಶ್ನೆಗಳನ್ನು ಮುಂದಿಟ್ಟಿವೆ.
ಶುಕ್ರವಾರದ ವ್ಯತ್ಯಯದ ವೇಳೆ, ಎಕ್ಸ್ ಬಳಸುತ್ತಿರುವ Cloudflare (ಕಂಟೆಂಟ್ ಡೆಲಿವರಿ ಮತ್ತು ಭದ್ರತಾ ಸೇವೆ) ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ, ಎಕ್ಸ್ ಸರ್ವರ್ಗಳೊಂದಿಗೆ ಸಂಪರ್ಕ ಸಾಧಿಸಲು ವಿಫಲವಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಸಮಸ್ಯೆ ಎಕ್ಸ್ ಸಂಸ್ಥೆಯ ಆಂತರಿಕ ಸರ್ವರ್ಗಳಲ್ಲೇ ಉಂಟಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. "ಈ ವೆಬ್ಸೈಟ್ Cloudflare ಮೂಲಕ ರಕ್ಷಿಸಲ್ಪಟ್ಟಿದೆ. ಆದರೆ ಸಂಪರ್ಕ ಸಾಧಿಸಲು ತೊಂದರೆಯಾಗಿದೆ. ಸಮಸ್ಯೆ ಮುಂದುವರಿದರೆ, ಅದು ನೀವು ಸಂಪರ್ಕಿಸಲು ಯತ್ನಿಸುತ್ತಿರುವ ವೆಬ್ಸರ್ವರ್ನ ದೋಷವಾಗಿರಬಹುದು" ಎಂದು ಉಲ್ಲೇಖಿಸಲಾಗಿತ್ತು.
ಇಷ್ಟೆಲ್ಲ ಆದರೂ ಎಕ್ಸ್ ಸಂಸ್ಥೆ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಸೇವೆ ಯಾವಾಗ ಸಂಪೂರ್ಣವಾಗಿ ಪುನಃ ಸ್ಥಾಪನೆಯಾಗಲಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ. ಕೆಲ ಬಳಕೆದಾರರು ಮಧ್ಯಂತರವಾಗಿ ಪ್ರವೇಶ ಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದರೂ, ಇನ್ನೂ ಹಲವರಿಗೆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಎಕ್ಸ್ನಲ್ಲಿ ಪದೇ ಪದೇ ಉಂಟಾಗುತ್ತಿರುವ ತಾಂತ್ರಿಕ ದೋಷಗಳು ಬಳಕೆದಾರರಲ್ಲಿ ಅಸಮಾಧಾನ ಹೆಚ್ಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications