Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಹೈದರಾಬಾದ್, ಚೆನ್ನೈನೊಂದಿಗೆ ಹೈಸ್ಪೀಡ್ ರೈಲ್ ಸಂಪರ್ಕ: ಈ ಮಾರ್ಗದಲ್ಲಿ ಓಡುವ ರೈಲಿನ ವೇಗ ಗಂಟೆಗೆ 350 ಕಿ.ಮೀ

2026-27ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಬಲ್ಲ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ದೇಶದ ಪ್ರಮುಖ ನಗರಗಳ ನಡುವೆ ಸಂಪರ್ಕ ಮತ್ತು ಆರ್ಥಿಕ ಪ್ರಗತಿಯನ್ನು ವೇಗಗೊಳಿಸುವ ನಿಟ್ಟಿನಲ್ಲಿ 'ಗ್ರೋತ್ ಕನೆಕ್ಟರ್ಸ್' (Growth Connectors) ಎಂದು ಬಣ್ಣಿಸಲಾದ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಲಾಗಿದೆ. ಈ ಪೈಕಿ ದಕ್ಷಿಣ ಭಾರತದ ಹೆಮ್ಮೆಯ ನಗರವಾದ ನಮ್ಮ ಬೆಂಗಳೂರು ಎರಡು ಪ್ರಮುಖ ಹೈಸ್ಪೀಡ್ ರೈಲು ಮಾರ್ಗಗಳ ಮೂಲಕ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಹೊಂದಲಿದ್ದು, ಇದು ಕರ್ನಾಟಕದ ಪಾಲಿಗೆ ಬಜೆಟ್‌ನ ಅತಿದೊಡ್ಡ ಕೊಡುಗೆಯಾಗಿದೆ.

ಬೆಂಗಳೂರಿಗೆ ಜೋಡಿ ಬುಲೆಟ್ ರೈಲುಗಳ ಬಲ

ಪ್ರಸ್ತಾಪಿತ ಯೋಜನೆಯಂತೆ, ಬೆಂಗಳೂರು ನಗರವು ಹೈದರಾಬಾದ್ ಮತ್ತು ಚೆನ್ನೈ ನಡುವೆ ಎರಡು ಪ್ರತ್ಯೇಕ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಮೂಲಕ ಬೆಸೆಯಲಿದೆ. ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಮತ್ತು ಸರಾಸರಿ 250 ಕಿ.ಮೀ ವೇಗವನ್ನು ಕಾಯ್ದುಕೊಳ್ಳಬಲ್ಲ ಈ ರೈಲುಗಳು ಪ್ರಯಾಣದ ಅವಧಿಯನ್ನು ಊಹೆಗೂ ಮೀರಿದ ಮಟ್ಟಕ್ಕೆ ತಗ್ಗಿಸಲಿವೆ.

Union Budget 2026

1. ಚೆನ್ನೈ-ಬೆಂಗಳೂರು ಕಾರಿಡಾರ್: ಈ ಮಾರ್ಗದಲ್ಲಿ ಬುಲೆಟ್ ರೈಲು ಸಂಚಾರ ಆರಂಭವಾದರೆ, ಕೇವಲ 1 ಗಂಟೆ 13 ನಿಮಿಷಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ವಂದೇ ಭಾರತ್ ರೈಲಿನಲ್ಲಿ ಈ ಪ್ರಯಾಣಕ್ಕೆ ಸುಮಾರು 4.5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಈ ಯೋಜನೆಯು ಹಸಿರು ಇಂಧನ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಆಧರಿಸಿರಲಿದ್ದು, ಎರಡು ಮಹಾನಗರಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಹೊಸ ವೇಗ ನೀಡಲಿದೆ.

2. ಹೈದರಾಬಾದ್-ಬೆಂಗಳೂರು ಕಾರಿಡಾರ್: ಐಟಿ ಹಬ್‌ಗಳಾದ ಹೈದರಾಬಾದ್ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಈ ಮಾರ್ಗವು ಸುಮಾರು 626 ಕಿ.ಮೀ ಉದ್ದವಿದ್ದು, ಪ್ರಯಾಣದ ಅವಧಿಯನ್ನು ಕೇವಲ 2 ಗಂಟೆಗೆ ಇಳಿಸಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಚಲಿಸುವ ಕಾಚಿಗುಡ-ಯಶವಂತಪುರ ರೈಲು ಸುಮಾರು 8.5 ಗಂಟೆ ತೆಗೆದುಕೊಳ್ಳುತ್ತದೆ. ಕಳೆದ ವರ್ಷವಷ್ಟೇ ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್‌) ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯನ್ನು ರೈಟ್ಸ್ (RITES) ಸಂಸ್ಥೆಗೆ ವಹಿಸಿತ್ತು.

ಮೈಸೂರು ಮಾರ್ಗ ಕೈಬಿಟ್ಟರೇ?

ಈ ಹಿಂದೆ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯನ್ನು ಒಟ್ಟಾಗಿ ರೂಪಿಸಲಾಗಿತ್ತು. 2021ರಲ್ಲಿ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಈ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲು ಆರಂಭಿಸಿತ್ತು. ಮೊದಲ ಹಂತದಲ್ಲಿ ಚೆನ್ನೈ-ಬೆಂಗಳೂರು (306 ಕಿ.ಮೀ) ಹಾಗೂ ಎರಡನೇ ಹಂತದಲ್ಲಿ ಬೆಂಗಳೂರು-ಮೈಸೂರು (157 ಕಿ.ಮೀ) ಮಾರ್ಗ ನಿರ್ಮಿಸುವ ಉದ್ದೇಶವಿತ್ತು.

ಆದರೆ, ಇಂದಿನ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಕೇವಲ "ಚೆನ್ನೈ-ಬೆಂಗಳೂರು" ಮಾರ್ಗವನ್ನು ಮಾತ್ರ ಪ್ರಸ್ತಾಪಿಸಿರುವುದು ಮತ್ತು ಮೈಸೂರಿನ ಹೆಸರನ್ನು ಉಲ್ಲೇಖಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೈಸೂರು ಭಾಗದ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆಯೇ ಅಥವಾ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದೇ ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಮುಖ ನಿಲ್ದಾಣವನ್ನು ಕಲ್ಪಿಸಿರುವ ಈ ಯೋಜನೆಯಲ್ಲಿ, ಬೆಂಗಳೂರು ನಗರದೊಳಗೆ ಸುಮಾರು 14 ಕಿ.ಮೀ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪವೂ ಹಿಂದಿನ ಡಿಪಿಆರ್‌ನಲ್ಲಿತ್ತು.

ಉಪನಗರ ರೈಲಿಗೆ ಸಂಜೀವಿನಿ: 500 ಕೋಟಿ ರೂ. ಅನುದಾನ

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2025-26ನೇ ಸಾಲಿನಲ್ಲಿ 350 ಕೋಟಿ ರೂ. ನೀಡಲಾಗಿತ್ತು, ಈ ಬಾರಿ ಅದನ್ನು ಹೆಚ್ಚಿಸಿರುವುದು ತುಸು ನೆಮ್ಮದಿಯ ವಿಷಯ. ಕೆ-ರೈಡ್ (K-RIDE) ಸಂಸ್ಥೆಯು ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ರಾಜಾನುಕುಂಟೆ ಮಾರ್ಗಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತಾದರೂ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಗುತ್ತಿಗೆದಾರರು ಹಿಂದೆ ಸರಿದ ಕಾರಣ ಕಾಮಗಾರಿ ಕುಂಟುತ್ತಾ ಸಾಗಿತ್ತು.

ಇದೀಗ ಕೇಂದ್ರದ ಈ ಅನುದಾನ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ, ಮರು ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗೆ ವೇಗ ನೀಡುವ ನಿರೀಕ್ಷೆಯಿದೆ. ಈ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅತ್ಯಂತ ನಿರ್ಣಾಯಕವಾಗಿದೆ.

ಒಟ್ಟಾರೆಯಾಗಿ, 2026ರ ಬಜೆಟ್ ರೈಲ್ವೆ ಮೂಲಸೌಕರ್ಯಕ್ಕೆ ಒತ್ತು ನೀಡಿದೆ. ಏಳು ಹೊಸ ಹೈಸ್ಪೀಡ್ ಕಾರಿಡಾರ್‌ಗಳ ಘೋಷಣೆ ಭಾರತದ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದ್ದು, ಅದರಲ್ಲಿ ಎರಡು ಮಾರ್ಗಗಳು ಬೆಂಗಳೂರಿಗೆ ಸಿಕ್ಕಿರುವುದು ಕರ್ನಾಟಕದ ಪಾಲಿಗೆ ಶುಭಸುದ್ದಿ. ಆದರೆ, ಮೈಸೂರು ಭಾಗದ ಜನರಿಗೆ ಆದ ನಿರಾಸೆ ಮತ್ತು ಉಪನಗರ ರೈಲು ಯೋಜನೆಯ ಅನುಷ್ಠಾನದ ವೇಗ ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯವಾಗಲಿದೆ. ಡಿಪಿಆರ್ ಅಂತಿಮಗೊಂಡ ನಂತರವಷ್ಟೇ ಈ ಯೋಜನೆಗಳ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+