ಭಾರತ,ದಕ್ಷಿಣ ಏಷ್ಯಾ ಪ್ಲಾಸ್ಮಾ ದಾನಿಗಳಿಗೆ ಯುಕೆ ತುರ್ತು ಕರೆ
ಲಂಡನ್, ಆಗಸ್ಟ್ 21: ಭಾರತ ಹಾಗೂ ದಕ್ಷಿಣ ಏಷ್ಯಾದ ಪ್ಲಾಸ್ಮಾ ದಾನಿಗಳಿಗೆ ಬರುವಂತೆ ಯುಕೆ ಮನವಿ ಮಾಡಿದೆ.ಪ್ಲಾಸ್ಮಾ ದಾನ ಮಾಡಿ ಅಲ್ಲಿನ ಜನತೆಯನ್ನು ಉಳಿಸುವಂತೆ ನ್ಯಾಷನಲ್ ಹೆಲ್ತ್ ಸರ್ವೀಸ್ ಕೂಡ ಕೇಳಿಕೊಂಡಿದೆ.
Recommended Video
ಯುಕೆ ಜನರಿಗಿಂತ ದಕ್ಷಿಣ ಏಷ್ಯಾದ ಜನರಲ್ಲಿ ಪ್ರತಿಕಾಯ ವೃದ್ಧಿಯಾಗಿದೆ. ಇಲ್ಲಿನ ಜನರನ್ನು ಉಳಿಸಲು ಪ್ಲಾಸ್ಮಾ ಥೆರಪಿ ನಡೆಸಿ ಜೀವ ಉಳಿಸಲಾಗುತ್ತಿದೆ ಎಂದು ತಿಳಿಸಿದೆ. ಪ್ರತಿಕಾಯ-ಪ್ಲಾಸ್ಮಾ ಜನರ ಜೀವವನ್ನು ಉಳಿಸಬಲ್ಲದು. ಯುಕೆಯಲ್ಲಿ ಎರಡನೇ ಹಂತದಲ್ಲಿ ಕೊರೊನಾ ಅಲೆ ಏಳುವ ಸಾಧ್ಯತೆ ಇದೆ.
ಏಷ್ಯಾ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಕೊವಿಡ್ 19, ಏಷ್ಯಾದ ಸಮುದಾಯದ ಮೇಲೆ ಹೆಚ್ಚು ಆಕ್ರಮಣ ಮಾಡಿದೆ. ಪ್ಲಾಸ್ಮಾ ದಾನ ಮಾಡುವುದರಿಂದ ಜೀವ ಉಳಿಸಬಹುದು.

ಪ್ಲಾಸ್ಮಾ ದಾನವು ಸುರಕ್ಷಿತ, ಸ್ವಚ್ಛ ಹಾಗೂ ಸುಲಭದ ಮಾರ್ಗವಾಗಿದೆ. ಇದು ಕೇವಲ 45 ನಿಮಿಷವನ್ನು ತೆಗೆದುಕೊಳ್ಳುತ್ತದೆ. ಪ್ಲಾಸ್ಮಾ ಹಾಗೂ ಪ್ರತಿಕಾಯಗಳನ್ನು ತ್ವರಿತವಾಗಿ ಬದಲಾಯಿಸುತ್ತದೆ.
ಪ್ಲಾಸ್ಮಾ ದಾನವು ಅಗತ್ಯವಿರುವವರಿಗೆ ಸಹಾಯ ಮಾಡುವ ಒಂದು ಮಾರ್ಗವಾಗಿದೆ. ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ , ಬೇರೆಯವರು ಬದುಕುಳಿಯಲು ಸಹಾಯಕವಾಗುತ್ತದೆ ಎಂದು ಡಾ. ನೈಮ್ ಅಖ್ತರ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಡಲುಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಒಂದು ಹೊಸ ಚಿಕಿತ್ಸೆಯಾಗಿದೆ. ತೀವ್ರವಾದ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಕೋವಿಡ್ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಿಂದ ಪ್ರತಿಕಾಯಗಳನ್ನು ಬಳಸುವುದು ಈ ಚಿಕಿತ್ಸೆಯಾಗಿದೆ.











Click it and Unblock the Notifications