ಶಂಕಿತ ಇಬ್ಬರು ಉಗ್ರರಿಗೂ ಸೋನಿಯಾ ಆಪ್ತ ಕಾರ್ಯದರ್ಶಿಗೂ ಏನು ಸಂಬಂಧ?
ಗುಜರಾತಿನ ಭಯೋತ್ಪಾದನಾ ನಿಗ್ರಹ (ಎಟಿಎಸ್) ದಳ ಇಬ್ಬರು ಶಂಕಿತ ಐಎಸ್ಐಎಸ್ ಉಗ್ರರನ್ನು ಸೂರತ್ ನಲ್ಲಿ ಎರಡು ದಿನದ ಹಿಂದೆ ಬಂಧಿಸಿತ್ತು. ಈ ಸಂಬಂಧ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನೀಡಿರುವ ಹೇಳಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.
ಇಬ್ಬರು ಶಂಕಿತ ಉಗ್ರರಲ್ಲಿ ಒಬ್ಬ ಅಂಕಲೇಶ್ವರ ಸರ್ದಾರ್ ಪಟೇಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಆಸ್ಪತ್ರೆಯ ಟ್ರಸ್ಟಿಗಳಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ/ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಕೂಡಾ ಒಬ್ಬರು.
ಭರೂಚ್ ನಲ್ಲಿ ನವೀಕರಣಗೊಂಡ ಆಸ್ಪತ್ರೆಯ ಉದ್ಘಾಟನೆಯಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೊತೆ ಅಹಮದ್ ಪಟೇಲ್ ಕೂಡಾ ಭಾಗವಹಿಸಿದ್ದರು. ಇಬ್ಬರು ಬಂಧಿತ ಶಂಕಿತ ಉಗ್ರರಲ್ಲಿ ಒಬ್ಬ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಸಿಎಂ ರೂಪಾನಿ ಹೇಳಿದ್ದಾರೆ.
ಇಂತಹ ಉಗ್ರನಿಗೆ ತಮ್ಮ ಆಸ್ಪತೆಯಲ್ಲಿ ಕೆಲಸ ನೀಡಿದ್ದಕ್ಕೆ, ನೈತಿಕ ಹೊಣೆಹೊತ್ತು ಅಹಮದ್ ಪಟೇಲ್ ರಾಜೀನಾಮೆ ನೀಡಬೇಕೆಂದು ರೂಪಾನಿ ಒತ್ತಾಯಿಸಿದ್ದಾರೆ. ರೂಪಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಚುನಾವಣೆಯ ವೇಳೆ ಬಿಜೆಪಿ ಅಸಾಹಯಕತೆಯಿಂದ ಈ ಹೇಳಿಕೆ ನೀಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಆಸ್ಪತ್ರೆಯ ಮಾನವ ಸಂಪನ್ಮೂಲ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೊಹಮ್ಮದ್ ಖಾಸಿಂ ಎನ್ನುವ ವ್ಯಕ್ತಿಯನ್ನು ಮಾಮೂಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪೆನಿಗೆ ಸೇರಿಸಿಕೊಳ್ಳಲಾಗಿತ್ತು, ಈ ಅಕ್ಟೋಬರ್ ನಾಲ್ಕರಂದು ಆತ ಕಂಪೆನಿಗೆ ರಾಜೀನಾಮೆ ನೀಡಿದ್ದಾನೆ. ಈತನಿಗೆ ಉಗ್ರರ ಜೊತೆ ಸಂಬಂಧವಿದೆ ಎನ್ನುವ ಮಾಹಿತಿ ನಮಗಿರಲಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ. ಮುಂದೆ ಓದಿ...

ಅಹಮದ್ ಪಟೇಲ್ ರಾಜೀನಾಮೆ ನೀಡಲಿ
ಅಹಮದ್ ಪಟೇಲ್ ರಾಜೀನಾಮೆ ನೀಡಬೇಕೆಂದು ಗುಜರಾತ್ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಎಟಿಎಸ್ ಕಾರ್ಯಾಚರಣೆಯನ್ನು ನಾವು ಮನಸಾರೆ ಹೊಗಳುತ್ತೇವೆ. ಆದರೆ, ಬಿಜೆಪಿ ಆರೋಪ ತಲೆಬುಡ ಇಲ್ಲದಂತದ್ದು. ದೇಶದ ಭದ್ರತೆ ನಮಗೆ ಮೊದಲ ಆದ್ಯತೆ, ಇಂತಹ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ with ಟೆರರಿಸ್ಟ್ ಹ್ಯಾಷ್ ಟ್ಯಾಗ್
#CongressWithTerrorists ಎನ್ನುವ ಟ್ವಿಟ್ಟರ್ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಭಯೋತ್ಪಾದಕರಿಗಾಗಿ ಅಹ್ಮದ್ ಪಟೇಲ್ ಒಂದು ಆಸ್ಪತ್ರೆಯನ್ನು ಸುರಕ್ಷಿತ ತಾಣ ಮಾಡಲು ಸಾಧ್ಯವಾದರೆ, ಕಾಂಗ್ರೆಸ್ ನೇತೃತ್ವದಲ್ಲಿ ಗುಜರಾತ್ ಯಾವ ಮಟ್ಟಕ್ಕೆ ಇಳಿಯುತ್ತಿತ್ತು ಎನ್ನುವ ಟ್ವೀಟ್.

ಕಾಂಗ್ರೆಸ್ ಮತ್ತು ಭಯೋತ್ಪಾದನೆ ಇಬ್ಬರೂ ಒಂದೇ
ಕಾಂಗ್ರೆಸ್ ಮತ್ತು ಭಯೋತ್ಪಾದನೆ ಇಬ್ಬರೂ ಒಂದೇ. ಯಾಕೆ ಅಹಮದ್ ಪಟೇಲ್, ತನ್ನ ಆಸ್ಪತೆಯಲ್ಲಿ ಉಗ್ರನಿಗೆ ನೆಲೆ ಕೊಡಬೇಕಿತ್ತು.

ಅಹಮದ್ ಪಟೇಲ್, ಸೋನಿಯಾ ಕಾರ್ಯದರ್ಶಿ
ಸೋನಿಯಾ ಆಪ್ತನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನ ಬಂಧನ. ಗುಜರಾತ್ ಚುನಾವಣೆಯನ್ನು ಉಗ್ರರ ಸಹಾಯದೊಂದಿಗೆ ಕಾಂಗ್ರೆಸ್ ಗೆಲಲ್ಲು ಪ್ರಯತ್ನಿಸುತ್ತಿದೆಯೇ?

ISI ಗೂಢಚಾರ ಎಂದು ವ್ಯಕ್ತಿಯ ಫೋಟೋ
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾಷಣ ಮಾಡುತ್ತಿದ್ದ ಇಮೇಜನ್ನು ಹಾಕಿ, ಅದರ ಹಿಂದೆ ISI ಗೂಢಚಾರ ಎಂದು ವ್ಯಕ್ತಿಯ ಫೋಟೋ ಹಾಕಿರುವ ಟ್ವೀಟ್

ಝಾಕೀರ್ ಹುಸೇನ್ ಅವರನ್ನು ಬರಮಾಡಿಕೊಂಡಿತ್ತು
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲು ಝಾಕೀರ್ ಹುಸೇನ್ ಅವರನ್ನು ಬರಮಾಡಿಕೊಂಡಿತ್ತು. ದೇಶಕ್ಕೆ ಬ್ರಿಟಿಷರಿಗಿಂತ ಜಾಸ್ತಿ ತೊಂದರೆಯಾಗಿರುವುದು ಕಾಂಗ್ರೆಸ್ಸಿನಿಂದ ಎನ್ನುವ ಟ್ವೀಟ್.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications