ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ: ರಂಗಸ್ವಾಮಿ ಮೂಕನಹಳ್ಳಿ
ಭಾರತ-ಯುರೋಪ್ ಹಾಗೂ ಅರಬ್ ಲೀಗ್ ನಡುವಿನ ವ್ಯಾಪಾರ ಒಪ್ಪಂದಗಳ ಬೆಳವಣಿಗೆಯ ನಡುವೆ ಅಮೆರಿಕ ಕೂಡ ಎಚ್ಚೆತ್ತುಕೊಂಡಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ ಡೊನಾಲ್ಡ್ ಟ್ರಂಪ್. ಈ ಒಪ್ಪಂದದ ಭಾಗವಾಗಿ ಭಾರತ ಮೇಲಿನ ದುಬಾರಿ ಆಮದು ಸುಂಕವನ್ನು ಕಡಿತಗೊಳಿಸಲಾಗಿದ್ದು, ಶೇ.25ರಷ್ಟಿದ್ದ ಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ. ಈ ನಿರ್ಧಾರದಿಂದ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಭಾರತೀಯ ರಫ್ತುಗಾರರಿಗೆ ದೊಡ್ಡ ಉತ್ತೇಜನ ದೊರಕಲಿದೆ ಎಂದು ಹೇಳಲಾಗುತ್ತಿದೆ. ಆದರೆ "ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ. ಅಮೆರಿಕವೂ ಬೇಯುತ್ತಿದೆ" ಎಂದಿದ್ದಾರೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ.
'ಅಮೆರಿಕಾದ ತೆರಿಗೆ ಆಕ್ರಮಣಕ್ಕೆ ತಲೆ ಬಾಗದೆ ನಿಂತ ಕಾರಣ ಯುರೋಪಿಯನ್ ಒಕ್ಕೂಟದ ಜೊತೆಗೆ ಒಪ್ಪಂದ ಆಯ್ತು. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ದೇಶಗಳ ಜೊತೆಗೆ ಟ್ರೇಡ್ ಡೀಲ್ ಮುಗಿದಿದೆ. ಇಷ್ಟೆಲ್ಲಾ ಆದದ್ದು ಒಂದು ಕಠಿಣ ನಿರ್ಧಾರದಿಂದ! ಒಬ್ಬ ವ್ಯಕ್ತಿ, ಉನ್ನತ ಸ್ಥಾನದಲ್ಲಿರುವ ಆ ವ್ಯಕ್ತಿ ತೆಗೆದು ಕೊಂಡ ನಿರ್ಧಾರದಿಂದ. ಹೌದು ಆ ನಿರ್ಧಾರ ತೆಗೆದುಕೊಳ್ಳಲು ಆತನಿಗೆ ಸಲಹೆ ನೀಡುವ ತಜ್ಞರ ತಂಡವಿರುತ್ತೆ, ಅದು ಬೇರೆ ಮಾತು. ಕೊನೆಗೂ ನಿರ್ಧಾರದ ಕೊನೆ ಬಟನ್ ಒತ್ತಬೇಕಾಗಿರುವುದು ಆ ಒಬ್ಬ ವ್ಯಕ್ತಿ ಮಾತ್ರ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

'ಈ ಬಾರಿ ಪೂರ್ಣ ಬಹುಮತ ಇಲ್ಲದ ಕಾರಣ ಈತನ ವರ್ಚಸ್ಸು ಕುಗ್ಗಬಹುದು ಎಂದು ಕೊಂಡಿದ್ದೆ. ಆದರೆ ಈತನೀಗ ವಿಶ್ವನಾಯಕ. ಯಾರೆಷ್ಟೆ ವಿಷ ಕಾರಿದರೂ ಆತ ವಿಶ್ವನಾಯಕ ಎನ್ನುವುದು ಬದಲಾಗುವುದಿಲ್ಲ. ಒಬ್ಬನಿಂದ ಏನಾಗುತ್ತೆ ಎನ್ನುತ್ತೇವೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿ ಬಿಟ್ಟರೆ ಜಗತ್ತು ಕೂಡ ಮಣಿಯುತ್ತೆ. ವ್ಯಕ್ತಿಯ ಕನಸು, ನಿಯತ್ತು ಸರಿಯಿರಬೇಕು ಅಷ್ಟೇ'.
'ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ. ಅಮೆರಿಕವೂ ಬೇಯುತ್ತಿದೆ, ಆತನಿಗೂ ಅನ್ಯ ಮಾರ್ಗವಿರಲಿಲ್ಲ. ಅದಕ್ಕೆ ತಿಂಗಳುಗಳ ಮುಂಚೆ ಡಿಪ್ಲೋಮಟ್ ಅಲ್ಲದ ತನ್ನ ಆಪ್ತ ಸೇರ್ಜಿಯೋ ವನ್ನು ಭಾರತಕ್ಕೆ ಕಳುಹಿಸಿದ್ದು. ಬಂದ ದಿನವೇ ಆತ ಭಾರತವನ್ನು, ಮೋದಿಯನ್ನು ಇನ್ನಿಲ್ಲದಂತೆ ಹೊಗಳಿದ್ದು. ಒಂದು ಒಪ್ಪಂದದ ಹಿಂದೆ ಅದೆಷ್ಟು ಕಥೆಗಳಿರುತ್ತವೆ. ಈ ಒಪ್ಪಂದದಿಂದ ಯಾರಿಗೆ ಹೆಚ್ಚು ಲಾಭ? ಬರೆಯುವೆ .ಸದ್ಯಕ್ಕಿರುವ ಕುತೂಹಲ ಮೋದಿಜೀ ಪುಟಿನ್ ಸಾಹೇಬರನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು, ಶುಭವಾಗಲಿ' ಎಂದು ಬರೆದುಕೊಂಡಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications