ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಸಿಮಿ-ಐಎಂ ಸ್ನೇಹ?
ಸತ್ತಿದ್ದಾನೆ ಎಂದು ತಿಳಿದಿದ್ದ ಐಎಸ್ಐಎಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಮಾತನಾಡಿರುವ ಮುದ್ರಿತ ಆಡಿಯೋ ದಾಖಲೆ ಬಿಡುಗಡೆಯಾಗಿದೆ ಹಾಗೂ ಸಿರಿಯಾದಲ್ಲಿ ಐಎಸ್ಐಎಸ್ ಮತ್ತು ಅಲ್ ಖೈದಾ ಜತೆಯಾಗಿ ಯುದ್ಧ ನಡೆಸಲು ತೀರ್ಮಾನಿಸಿವೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಐಎಸ್ಐಎಸ್ ಹಾಗೂ ಅಲ್ ಖೈದಾ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿತ್ತು. ಐಎಸ್ಐಎಸ್ ಸಂಘಟನೆಗೆ ಸದಸ್ಯರನ್ನು ನೇಮಿಸುವ ಜವಾಬ್ದಾರಿ ಹೊತ್ತಿದ್ದ ಸುಲ್ತಾನ್ ಅಹ್ಮದ್ ಅರ್ಮರ್ ಕೂಡ ಅನೇಕ ಬಾರಿ ನೇಮಕಾತಿಯು ಅತ್ಯಂತ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದ್ದು ಬಹಿರಂಗವಾಗಿತ್ತು. ಆದರೆ, ಈ ಬೆಳವಣಿಗೆ ಭಾರತದ ಉಗ್ರ ಸಂಘಟನೆಗಳಾದ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ಗಳಿಗೆ ಅಚ್ಚರಿ ಮೂಡಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. [ಇರಾಕ್ ಉಗ್ರರ ಜತೆ ಬೆಂಗಳೂರು ಯುವಕ]
ಸಿಮಿ, ಐಎಂ ಒಂದಾಗಲಿವೆಯೇ?
ಇಂಡಿಯನ್ ಮುಜಾಹಿದೀನ್ ಸಂಘಟನೆ ಸದಸ್ಯನಾಗಿದ್ದ ಅರ್ಮರ್ ಮೊದಲು ಅಲ್ ಖೈದಾ ಸಂಘಟನೆಗೆ ಸದಸ್ಯರನ್ನು ನೇಮಿಸುತ್ತಿದ್ದ. ಆದರೆ, ಐಎಸ್ಐಎಸ್ ಹುಟ್ಟಿಕೊಂಡ ನಂತರ ಅದಕ್ಕೆ ನಿಷ್ಠೆ ತೋರತೊಡಗಿದ. ಈಗ ಎರಡೂ ಸಂಘಟನೆಗಳು ಸಿರಿಯಾದಲ್ಲಿ ಜತೆಯಾಗಿ ಯುದ್ಧ ಮಾಡಲು ನಿರ್ಧರಿಸಿರುವ ಕಾರಣ ಅರ್ಮರ್ ಹಾಗೂ ಪಾಕಿಸ್ತಾನದಲ್ಲಿ ಸದಸ್ಯರ ನೇಮಕಾತಿ ನೋಡಿಕೊಳ್ಳುತ್ತಿದ್ದ ಕಮ್ರಾನ್ ಶಾ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ. [ಭಾರತಕ್ಕೆ ಒಕ್ಕರಿಸಿದ ಅಲ್ ಖೈದಾ, ಮೋದಿಗೆ ಆತಂಕ]
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಜತೆ ಸೇರುವ ಭೀತಿ ಎದುರಾಗಿದೆ. ಅಲೈ ಖೈದಾ ಅಂಗವಾದ ಸಿಮಿ ಹಾಗೂ ಐಎಸ್ಐಎಸ್ ಅಂಗವಾದ ಇಂಡಿಯನ್ ಮುಜಾಹಿದೀನ್ ಸೇರಿದರೆ ಅಪಾಯಕಾರಿ ಶಕ್ತಿಯಾಗಲಿವೆ. ಆಗ ಭಾರತದಲ್ಲಿ ವಿಧ್ವಂಸಕ ಕೃತ್ಯಗಳು ಹೆಚ್ಚುವ ಅಪಾಯವಿದೆ ಎಂದು ನಿರೀಕ್ಷಿಸಲಾಗಿದೆ. [ಭಾರತದ ಮೇಲೆ ದಾಳಿಯ ಕಾರ್ಮೋಡ]
ಸಿಮಿ, ಐಎಂ ಇನ್ನೂ ಸೇರಿಲ್ಲ
ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸುತ್ತಿರುವವರು ಹೇಳುವಂತೆ ಸದ್ಯಕ್ಕೆ ಸಿಮಿ ಹಾಗೂ ಐಎಂ ಬೇರೆಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಸಿಮಿ ಸ್ವತಂತ್ರವಾಗಿದ್ದು, ಅಲ್ ಖೈದಾ ಪರ ವಾಲುತ್ತಿದೆ. ಐಎಂ ಸಂಘಟನೆ ಐಎಸ್ಐಎಸ್ಗೆ ಮಾತ್ರ ಬೆಂಬಲ ನೀಡುತ್ತಿದೆ ಹಾಗೂ ಅನ್ಸಾರ್ ಉಲ್ ತಾವ್ಹಿದ್ ಪರ ಕೆಲಸ ಮಾಡುತ್ತಿದೆ.
ಈಚೆಗಷ್ಟೇ ಹೈದರಾಬಾದ್ನಲ್ಲಿ ಬಂಧಿತರಾಗಿರುವ ಇಬ್ಬರು ತಾವು ಅರ್ಮರ್ ಜತೆ ಸಂಬಂಧ ಹೊಂದಿರುವುದಾಗಿಯೂ ಹೇಳಿದ್ದಾರೆ.
ಆದ್ದರಿಂದ ಪ್ರಸ್ತುತ ಪಾಕಿಸ್ತಾನದಲ್ಲಿರುವ ಸುಲ್ತಾನ್ ಅಹ್ಮದ್ ಅರ್ಮರ್ ಚಟುವಟಿಕೆ ಮೇಲೆ ಭಾರತ ಕಣ್ಣಿಡಬೇಕಾಗಿದೆ. ಆದರೆ, ಇದುವರೆಗೂ ಆತನ ವಿರುದ್ಧ ಸಾಕ್ಷಿ ಸಿಕ್ಕಿಲ್ಲ. ಆದ್ದರಿಂದ ಭಾರತದಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ. [ಇಂಟರ್ ಪೋಲ್ ಭಯ: ದಾವೋದ್ ಪರಾರಿ]
ಈಗ ಅರ್ಮರ್ ಸಾಮಾಜಿಕ ತಾಣದಲ್ಲಿ ಕಳುಹಿಸುತ್ತಿರುವ ಸಂದೇಶಗಳು ಹಾಗೂ ನಡೆಸಿರುವ ಮಾತುಕತೆಯ ದಾಖಲೆಗಳೆಲ್ಲವೂ ಭಾರತೀಯ ಗುಪ್ತಚರ ಸಂಸ್ಥೆಗಳ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಆದ್ದರಿಂದ ಹೈದರಾಬಾದ್ ಪೊಲೀಸರು ಇದೇ ಮೊದಲ ಬಾರಿ ಅರ್ಮರ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral













Click it and Unblock the Notifications