ಇತಿಹಾಸದ ಅತ್ಯಂತ ದುಬಾರಿ ಲೋಕಸಭಾ ಚುನಾವಣೆ
ನವದೆಹಲಿ, ಮೇ 14: ಹದಿನಾರನೇ ಲೋಕಸಭಾ ಚುನಾವಣೆ ಸುದೀರ್ಘ ಒಂಬತ್ತು ಹಂತದಲ್ಲಿ ನಡೆದಿದ್ದು ಒಂದೆಡೆಯಾದರೆ, ಇದು ಇತಿಹಾಸದಲ್ಲಿನ ಅತ್ಯಂತ ದುಬಾರಿ ಲೋಕಸಭಾ ಚುನಾವಣೆಯೂ ಕೂಡಾ ಆಗಿದೆ.
ಹದಿನಾರನೇ ಲೋಕಸಭಾ ಚುನಾವಣೆಗೆ 3,426 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಇದು 2009ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ. 131ರಷ್ಟು ಹೆಚ್ಚು. 2009ರ ಚುನಾವಣೆಗೆ 1,483 ಕೋಟಿ ಖರ್ಚಾಗಿತ್ತು.
ಚುನಾವಣೆಗೆ ಇಷ್ಟು ಅಗಾಧ ಪ್ರಮಾಣದಲ್ಲಿ ಖರ್ಚಾಗಲು ಹಣದುಬ್ಬರ ಮತ್ತು ಮತದಾನದ ಹಂತಗಳು ಪ್ರಮುಖ ಕಾರಣ ಎನ್ನುವುದು ಚುನಾವಣಾ ಆಯೋಗ ನೀಡುತ್ತಿರುವ ಸ್ಪಷ್ಟೀಕರಣ. ಲೋಕಸಭಾ ಚುನಾವಣೆಗೆ ಆಗುವ ಖರ್ಚನ್ನು ಕೇಂದ್ರ ಸರಕಾರ ಭರಿಸಿದರೆ, ಕಾನೂನು ಸುವ್ಯವಸ್ಥೆಗೆ ತಗಲುವ ಖರ್ಚನ್ನು ಆಯಾಯ ರಾಜ್ಯ ಸರಕಾರಗಳು ಭರಿಸ ಬೇಕಾಗುತ್ತದೆ. (ಚುನಾವಣಾ ಅಕ್ರಮದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ)

ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಂತೆ ಚುನಾವಣೆಯ ಖರ್ಚು ಹೆಚ್ಚಾಗುತ್ತದೆ. ಮತದಾನದ ಪ್ರಮಾಣ ಹೆಚ್ಚಿಸಲು ಆಯೋಗ ಕೈಗೊಂಡಿರುವ ಹಲವು ಕ್ರಮಗಳೂ ಖರ್ಚು ಹೆಚ್ಚಾಗಲು ಕಾರಣ ಎಂದು ಆಯೋಗ ತಿಳಿಸಿದೆ.
ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾಡಬಹುದಾದ ಖರ್ಚಿನ ವೆಚ್ಚವನ್ನು ನಲವತ್ತು ಲಕ್ಷದಿಂದ ಎಪ್ಪತ್ತು ಲಕ್ಷಕ್ಕೆ ಏರಿಸಲಾಗಿತ್ತು. ಇದು ಕೂಡಾ ಚುನಾವಣೆಯ ಒಟ್ಟು ಖರ್ಚಿನ ಏರಿಕೆಯಲ್ಲಿ ಪ್ರಮುಖವಾದ ಅಂಶ ಎಂದು ಆಯೋಗ ತಿಳಿಸಿದೆ.
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಕಪ್ಪು ಹಣ, ರಾಜಕೀಯ ಪಕ್ಷಗಳು ಮಾಡಿದ ವೆಚ್ಚ ಈ ಬಾರಿಯ ಚುನಾವಣೆಯನ್ನು ದುಬಾರಿ ಚುನಾವಣೆಯನ್ನಾಗಿಸಿದೆ.
ಒಟ್ಟು ಹದಿನಾರನೇ ಲೋಕಸಭಾ ಚುನಾವಣೆಯ ವೆಚ್ಚ 2012ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆದ ಖರ್ಚಿಗೆ ಸಮೀಪವಾಗಿದೆ. ಅಮೆರಿಕಾದ ಚುನಾವಣೆಗೆ 42,000 ಸಾವಿರ ಕೋಟಿ ವೆಚ್ಚ ತಗುಲಿತ್ತು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications