ಸದನದಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ
1989ರ ಮಾರ್ಚ್ 25ರಲ್ಲಿ ತಮಿಳುನಾಡು ಸದನದ ಬಜೆಟ್ ಅಧಿವೇಶನದ ವೇಳೆ ಡಿಎಂಕೆ ಸದಸ್ಯರೊಬ್ಬರು ಜಯಲಲಿತಾ ಸೀರೆಗೆ ಕೈಹಾಕಿದ ಘಟನೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಿತು.
75 ದಿನಗಳ ಜೀವನ್ಮರಣ ಹೋರಾಟದಲ್ಲಿ ಕೊನೆಗೂ ಚೇತರಿಸಿಕೊಳ್ಳದ ತಮಿಳುನಾಡಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಜಯಲಲಿತಾ ಸೋಮವಾರ (ಡಿ 5) ತಡರಾತ್ರಿ ಕೊನೆಯುಸಿರನ್ನೆಳೆದಿದ್ದಾರೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
1977ರಲ್ಲಿ ಅಂದಿನ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್, ಜಯಲಲಿತಾರನ್ನು ರಾಜಕೀಯ ರಂಗಕ್ಕೆ ಪರಿಚಯಿಸಿದ ನಂತರ ಎಂಜಿಆರ್ ಹೆಸರಿನಲ್ಲಿ 1983ರಲ್ಲಿ ಮೊದಲ ಬಾರಿಗೆ ತಿರುಚೆಂದೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದರು.
ಲಕ್ವ ಹೊಡೆದ ನಂತರ ರಾಜಕೀಯ ಮತ್ತು ಪಕ್ಷದ ಚಟುವಟಿಕೆಯಿಂದ ದೂರ ಸರಿದ ಎಂಜಿಆರ್ ಅವರ ಸ್ಥಾನವನ್ನು ಒಂದೊಂದು ಹೆಜ್ಜೆಯನ್ನು ಇಡುತ್ತಲೇ ತುಂಬುತ್ತಾ ಬಂದ ಪಕ್ಷದಲ್ಲಿ ಮತ್ತು ತಮಿಳುನಾಡು ರಾಜಕೀಯದಲ್ಲಿ ಬಲಾಢ್ಯವಾಗಿ ಹೊರಹೊಮ್ಮಿದ್ದರು.
ತಮಿಳುನಾಡಿನಲ್ಲಿ ಕಳೆದ ಎರಡು ದಶಕಗಳಿಂದ ಎರಡು ಸ್ಥಳೀಯ ಪಕ್ಷಗಳದ್ದೇ ಕಾರುಬಾರು ಮತ್ತು ಇಬ್ಬರು ರಾಜ್ಯದ ಪ್ರಭಾವಿ ಮುಖಂಡರಾದ ಕರುಣಾನಿಧಿ ಮತ್ತು ಜಯಲಲಿತಾ ನಡುವೆಯೇ ನೇರ ಹಣಾಹಣಿ.
ರಾಜಕೀಯವಾಗಿ ಹಾವು ಮುಂಗುಸಿಯಂತಿರುವ ಈ ಇಬ್ಬರು ಮುಖಂಡರ ನಡುವಿನ ವೈಮನಸ್ಸು ಅತ್ಯಂತ ಕೀಳುಮಟ್ಟಕ್ಕೆ ಹೋದ ಉದಾಹರಣೆಗಳೂ ಇವೆ. ಅದರಲ್ಲಿ ಪ್ರಮುಖವಾಗಿ ವಿಧಾನಸಭೆಯಲ್ಲೇ ಜಯಲಲಿತಾ ಸೀರೆಯ ಮೇಲೆ ಡಿಎಂಕೆ ಸದಸ್ಯ ಕೈಹಾಕಿದ್ದು. ಮುಂದೆ ಓದಿ..

ತಮಿಳುನಾಡು ಅಸೆಂಬ್ಲಿ
1989ರ ಮಾರ್ಚ್ 25ರಲ್ಲಿ ನಡೆದ ಘಟನೆ ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕಪ್ಪುಚುಕ್ಕೆ. ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಸೀರೆಗೆ ಡಿಎಂಕೆ ಸದಸ್ಯ ಕೈಹಾಕಿದ್ದು ಮಾನವ ಸಮಾಜವೇ ತಲೆ ತಗ್ಗಿಸುವಂತೆ ಮಾಡಿತು. ಮತ್ತು ಸಿಎಂ ಆಗಿದ್ದ ಕರುಣಾನಿಧಿ ಪಾಲಿಗೆ ಈ ಘಟನೆ ತಲೆತಗ್ಗುಸುವಂತೆ ಮಾಡಿತು.

ಬಜೆಟ್ ಅಧಿವೇಶನ
25.03.1989ರಂದು ಹಣಕಾಸು ಖಾತೆಯನ್ನೂ ಹೊಂದಿದ್ದ ಸಿಎಂ ಕರುಣಾನಿಧಿ ಬಜೆಟ್ ಭಾಷಣ ಓದಲು ಮುಂದಾಗಿದ್ದರು. ಆಗ ಸರಕಾರ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದೆ, ನನ್ನ ದೂರವಾಣಿ ಕದ್ದಾಲಿಗೆಯಾಗುತ್ತಿದೆ. ಮೊದಲು ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಜಯಾ ಹಠ ಹಿಡಿದು, ಪ್ರತಿಭಟನೆ ನಡೆಸಿದರು.

ಕೆಂಡಕಾರಿದ ಸಿಎಂ
ಜಯಾ ಮತ್ತು ಎಐಡಿಎಂಕೆ ಸದಸ್ಯರ ಪ್ರತಿಭಟನೆಗೆ ಕೆಂಡಕಾರಿದ ಸಿಎಂ ಕರುಣಾನಿಧಿ ಅಸಂವಿಧಾನಿಕ ಪದಗಳನ್ನು ಜಯಾ ವಿರುದ್ದ ಬಳಸಿದರು. ಇದಕ್ಕೆ ತಿರುಗಿಬಿದ್ದ ಎಐಡಿಎಂಕೆ ಸದಸ್ಯರು ಮತ್ತು ಜಯಾ ಸ್ಪೀಕರ್ ಕುರ್ಚಿಯತ್ತ ಹೊರಟಾಗ ಆಯತಪ್ಪಿ ಕೆಳಗೆಬಿದ್ದರು.

ಚಪ್ಪಲಿ ತೂರಾಟ
ಎಐಡಿಎಂಕೆ ಸದಸ್ಯರ ಪ್ರತಿಭಟನೆಗೆ ತಿರುಗಿಬಿದ್ದ ಆಡಳಿತ ಡಿಎಂಕೆ ಪಕ್ಷದ ಸದಸ್ಯರು ವಾಗ್ಯುದ್ದಕ್ಕೆ ಇಳಿದರು. ಸಭೆಯಲ್ಲಿ ಆರೋಪ, ಪ್ರತ್ಯಾರೋಪದ ನಡುವೆ ಪರಸ್ಪರ ಚಪ್ಪಲಿ ತೂರಿಕೊಂಡು ಸದನದ ಪಾವಿತ್ರ್ಯತೆಕ್ಕೆ ಧಕ್ಕೆ ತಂದಿದ್ದರು. ಸ್ಪೀಕರ್ ಬೇರೆ ವಿಧಿಯಿಲ್ಲದೇ ಸದನವನ್ನು ಮುಂದೂಡಿದ್ದರು.

ಜಯಾ ಸೆರಿಗಿಗೆ ಕೈಹಾಕಿದ ಶಾಸಕ
ಆ ಸಮಯದಲ್ಲಿ ಸಭೆಯಿಂದ ಹೊರಹೋಗಲು ಮುಂದಾಗಿದ್ದ ಜಯಲಲಿತಾ ಸೀರೆಯ ಸೆರಗಿಗೆ ಡಿಎಂಕೆ ಸದಸ್ಯ ಕೈಹಾಕಿದ. ಆ ಸಮಯದಲ್ಲಿ ಜಯಲಲಿತಾ ಸಹಾಯಕ್ಕಾಗಿ ಕಿರುಚಾಡಿದರು. ಈ ಘಟನೆ ಭಾರತದ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿಯಿತು.

ಜಯಾ ಪ್ರತಿಜ್ಞೆ
ಹೆಣ್ಣಿಗೆ ಸದನದಲ್ಲಿ ಗೌರವ, ಮರ್ಯಾದೆ, ಅಭಯ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ತಮಿಳುನಾಡು ಅಸೆಂಬ್ಲಿಗೆ ಕಾಲಿಡುವುದಿಲ್ಲ ಎಂದು ಜಯಲಲಿತಾ ಪ್ರಮಾಣ ಮಾಡಿದರು. ತಮ್ಮ ಪ್ರತಿಜ್ಞೆಯನ್ನು ಪಾಲಿಸಿಕೊಂಡು ಬಂದರೋ ಇಲ್ಲವೋ ಅದು ಜಯಾ ರಾಜಕೀಯ ಇತಿಹಾಸದ ಗತಪುಟಕ್ಕೆ..
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications