ಅಪನಗದೀಕರಣ ಸ್ವಾಗತಿಸಿದ ಗ್ರಾಮೀಣ ಭಾರತ:ನಾರಾಯಣಮೂರ್ತಿ
ಕೋಲ್ಕತ್ತಾ, ಮಾರ್ಚ್ 22: ಕೇಂದ್ರ ಸರ್ಕಾರ ನವೆಂಬರ್ 2016 ರಲ್ಲಿ ತೆಗೆದುಕೊಂಡ ಅಪನಗದೀಕರಣದ ನಿರ್ಧಾರವನ್ನು ನಗರ ಪ್ರದೇಶದ ಜನರು ಸ್ವಾಗತಿಸದಿದ್ದರೂ, ಗ್ರಾಮೀಣ ಪ್ರದೇಶದ ಜನರು ಮುಕ್ತ ಮನದಿಂದ ಸ್ವಾಗತಿಸಿದ್ದಾರೆ ಎಂದು ಇನ್ಫೋಸಿಸ್ ಕೋ ಫೌಂಡರ್ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೋಲ್ಕತ್ತದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಅಪನಗದೀಕರಣದ ಬಗ್ಗೆ ಮಾತನಾಡುತ್ತಿದ್ದ ಅವರು ಹೀಗೆ ಹೇಳಿದರು.
ಆರ್ ಬಿಐನ ಈ ಮಾಹಿತಿ ನೋಡಿ, ನೋಟು ನಿಷೇಧ ಯಾವ ಪುರುಷಾರ್ಥಕ್ಕೆ?
"ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೆ ಒಂದಂತೂ ಹೇಳಬಲ್ಲೆ. ಅಪನಗದೀಕರಣದ ಕುರಿತು ನಗರ ಪ್ರದೇಶದಲ್ಲಿ ಎಷ್ಟು ವಿರೋಧ ವ್ಯಕ್ತವಾಯಿತೋ, ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಜನ ಅದನ್ನು ಸ್ವಾಗತಿಸಿದ್ದಾರೆ" ಎಂದು ಅವರು ಹೇಳಿದರು.
"ನನಗೆ ಈ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಸರ್ಕಾರ ಹಳೆಯ 500 ರೂ ನೋಟುಗಳನ್ನು ನಿಷೇಧಿಸಿ, ತಕ್ಷಣವೇ 2000 ರೂ.ಮುಖಬೆಲೆಯ ನೋಟುಗಳನ್ನು ಪರಿಚಯಿಸಿದ್ದು ಏಕೆ ಎಂಬುದು ನನಗೆ ಅರ್ಥವಾಗಿಲ್ಲ. ಇದನ್ನು ಯಾರಾದರೂ ತಜ್ಞರೇ ಹೇಳಬೇಕು" ಎಂದು ಅವರು ತಿಳಿಸಿದರು.