ಬಿಜೆಪಿಗೆ ವರ, ಕಾಂಗ್ರೆಸ್ಸಿಗೆ ದುಃಸ್ವಪ್ನವಾಗಲಿದೆ ನೆಹರು ಬರೆದಿದ್ದ 'ಆ ಪತ್ರ'!
Recommended Video

ನವದೆಹಲಿ, ನವೆಂಬರ್ 05: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ದ ಗವರ್ನರ್ ಮತ್ತು ಮೋದಿ ಸರ್ಕಾರದ ನಡುವಿನ ವಿವಾದ ಕಾಂಗ್ರೆಸ್ಸಿನ ಬಹುಮುಖ್ಯ ಅಸ್ತ್ರವಾಗಿ ಬತ್ತಳಿಕೆ ಸೇರಿಕೊಂಡಿದೆ.
ಆದರೆ 1957 ರ ಜನವರಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರು ಆರ್ ಬಿಐ ಗವರ್ನರ್ ಗೆ ಬರೆದಿದ್ದ ಪತ್ರವೊಂದು ಕಾಂಗ್ರೆಸ್ಸಿನ ಬಾಯಿಮುಚ್ಚಿಸುವ ಅಸ್ತ್ರವಾಗಿ ಬಿಜೆಪಿ ಬತ್ತಳಿಕೆಗೆ ಸೇರಿಕೊಳ್ಳಲಿದೆ!
1957 ರಲ್ಲಿ ಸರ್ಕಾರ ಮತ್ತು ಆರ್ಬಿಐ ನಡುವೆ ಇಂಥದೇ ವಿವಾದ ಎದ್ದಿದ್ದ ಸಂದರ್ಭದಲ್ಲಿ ಸ್ವತಃ ನೆಹರು ಅವರೇ ಆರ್ ಬಿ ಐ ಗವರ್ನರ್ ಅವರ ರಾಜೀನಾಮೆ ಕೇಳಿದ್ದರು! ಅಷ್ಟೇ ಅಲ್ಲ, ಆರ್ ಬಿಐ ನಲ್ಲಿ ಸರ್ಕಾರ ಮೂಗು ತೂರಿಸುವುದು ತಪ್ಪಲ್ಲ ಎಂದು ಸಹ ತಮ್ಮ ಪತ್ರದಲ್ಲಿ ಬರೆದಿದ್ದರು!

ಆರ್ ಬಿಐ ಗವರ್ನರ್ ಗೆ ನೆಹರೂ ಪತ್ರ
ಆರ್ ಬಿಐ ನ ನಾಲ್ಕನೇ ಗವರ್ನರ್ ಆಗಿದ್ದ ಬೆನಗಲ್ ರಾಮ ರಾವು ಅವರು ಏಳೂವರೆ ವರ್ಷಗಳ ಕಾಲ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ನೆಹರೂ ಸಂಪುಟದಲ್ಲಿ ಟಿ ಟಿ ಕೃಷ್ಣಮಾಚಾರಿ ಅವರು ಹಣಕಾಸು ಸಚಿವರಾಗಿದ್ದಾಗ, ಆರ್ ಬಿಐ ನ ಹಲವು ಕಾರ್ಯಗಳಲ್ಲಿ ಮೂಗುತೂರಿಸುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ರಾವು ಅವರು, 'ಕೃಷ್ಣಮಾಚಾರಿ ಅವರ ಒರಟು ವರ್ತನೆ ಮತ್ತು ವಿನಾಕಾರಣ ಆರ್ ಬಿಐ ಕಾರ್ಯಗಳಲ್ಲಿ ತಲೆಹಾಕುವುದು ನಮಗೆ ಇರಿಸುಮುರಿಸುಂಟು ಮಾಡುತ್ತಿದೆ' ಎಂದು ನೆಹರು ಅವರ ಬಳಿ ದೂರು ನೀಡಿದ್ದರು.

ನೆಹರು ಪ್ರತಿಕ್ರಿಯೆ!
ರಾವು ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ನೆಹರು, 'ಆರ್ ಬಿಐ ಸಹ ಸರ್ಕಾರದ ಒಂದು ಭಾಗ. ಸರ್ಕಾರದ ಎಷ್ಟೋ ಕೆಲಸಗಳು ಆರ್ ಬಿಐ ಮೂಲಕವೇ ಆಗಬೇಕು. ಆದ್ದರಿಂದ ಸರ್ಕಾರ ಆರ್ ಬಿಐ ನಲ್ಲಿ ತಲೆತೂರಿಸುವುದು ತಪ್ಪಲ್ಲ. ಸರ್ಕಾರಕ್ಕೆ ಆ ಅಧಿಕಾರ ಇದೆ' ಎಂದು ಹೇಳಿದ್ದರು. 'ಆರ್ ಬಿಐ ಸರ್ಕಾರಕ್ಕೆ ಯಾವುದೇ ರೀತಿಯ ಸಲಹೆ ನೀಡಬಹುದು. ಆದರೆ ಅದು ಸರ್ಕಾರದೊಂದಿಗೇ ಕೆಲಸ ನಿರ್ವಹಿಸಬೇಕು' ಎಂದು ನೆಹರು, ರಾವು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರಾವು ರಾಜೀನಾಮೆ ನೀಡಿದ್ದರು!

ಬಿಜೆಪಿಗೆ ನಿಟ್ಟುಸಿರು ತಂದ ನೆಹರು ಪತ್ರ!
ಸದ್ಯಕ್ಕೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸಹ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ. ಆರ್ ಬಿಐ ಗವರ್ನರ್ ಪದಚ್ಯುತಿಯಾಗಬಹುದು ಅನುಮಾನ ಎದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಆರ್ ಬಿಐ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ನಾಯಕರಾಗಿದ್ದ ನೆಹರು ಅವರು ಒಂದಾನೊಂದು ಕಾಲದಲ್ಲಿ ಬರೆದಿದ್ದ ಪತ್ರವೇ ಮುಳುವಾಗಿದೆ! ಈ ಪತ್ರದ ಬಗ್ಗೆ ತಿಳಿದು ಬಿಜೆಪಿಯಂತೂ ನಿಟ್ಟುಸಿರುಬಿಟ್ಟಿದೆ!

ಆರ್ ಬಿಐ ವಿವಾದವೇನು?
ಸರ್ಕಾರ ಮತ್ತು ಆರ್ ಬಿಐ ನಡುವೆ ಹೊಂದಾಣಿಕೆ ಇಲ್ಲದಿರುವುದೇ ಈ ಎಲ್ಲ ವಿವಾದಗಳಿಗೆ ನಾಂದಿ ಹಾಡಿದೆ. ಸರ್ಕಾರ ಮತ್ತು ಆರ್ ಬಿಐ ಯೋಜನೆಗಳು ಪರಸ್ಪರ ವ್ಯತಿರಿಕ್ತವಾಗಿರುತ್ತಿರುವುದರಿಂದ ಜನಸಾಮಾನ್ಯ ಬೆಲೆ ಏರಿಕೆ ಬಿಸಿ ಎದುರಿಸುವಂತಾಗಿದೆ. ಊರ್ಜಿತ್ ಪಟೇಲ್ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಆರೋಪಿಸಿದರೆ, ಸರ್ಕಾರ ಆರ್ ಬಿಐ ಕಾರ್ಯಗಳಲ್ಲಿ ಮೂಗು ತೂರಿಸದೆ ಇದ್ದರೆ ನಾವು ನಮ್ಮ ಕೆಲಸವನ್ನು ಮುಕ್ತವಾಗಿ ಮಾಡುತ್ತೇವೆ ಎಂದು ಆರ್ ಬಿಐ ಹೇಳಿದೆ. ಇದರಿಂದಾಗಿ ತಲೆದೂರಿದ ಸಮಸ್ಯೆ ಆರ್ ಬಿಐ ಗವರ್ನರ್ ಪದಚ್ಯುತಿಯ ಸಾಧ್ಯತೆಯನ್ನು ಹೆಚ್ಚಿಸಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications