Get Updates
Get notified of breaking news, exclusive insights, and must-see stories!

ಕಲರ್ ಪಾಲಿಟಿಕ್ಸ್: ಅಂಬೇಡ್ಕರ್ ಪ್ರತಿಮೆಗೆ ರಾಜಕೀಯ ಬಣ್ಣ

ಬೆಂಗಳೂರು, ಏಪ್ರಿಲ್ 11: ಉತ್ತರ ಪ್ರದೇಶದ ಹಲವೆಡೆ ಅಂಬೇಡ್ಕರ್ ಪ್ರತಿಮೆ ಧ್ವಂಸ ಬಳಿಕ ಸ್ಥಾಪಿಸಿದ ಹೊಸ ಪ್ರತಿಮೆ ಕೇಸರಿ ಬಣ್ಣ ಹೊಂದಿದ್ದು, ಅದಕ್ಕೆ ಮತ್ತೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತರು ನೀಲಿ ಬಣ್ಣ ಬಳಿದಿದ್ದಾರೆ.

ಬದಾನ್ ಜಿಲ್ಲೆಯ ದುಗ್ರೈಯ್ಯ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪ್ರತಿಮೆ ಭಗ್ನಗೊಳಿಸಿದ್ದರು. ನಂತರ ನಾಗರಿಕರು ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳೀಯಾಡಳಿತ ಆಗ್ರಾದಿಂದ ಹೊಸ ಪ್ರತಿಮೆ ತರಿಸಿ ಸ್ಥಾಪಿಸಿತ್ತು. ಆದರೆ ಹೊಸ ಪ್ರತಿಮೆ ಕೇಸರಿ ಬಣ್ಣ ಹೊಂದಿದ್ದರಿಂದ ಬಿಎಸ್ ಪಿ ಕಾರ್ಯಕರ್ತರು ಅದಕ್ಕೆ ಮೂಲದಲ್ಲಿ ಇದ್ದ ನೀಲಿ ಬಣ್ಣ ಬಳಿದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈವರೆಗೆ ಸುಮಾರು ಒಂಭತ್ತು ಕಡೆ ಅಂಬೇಡ್ಕರ್ ಪ್ರತಿಮೆ ಭಗ್ನಗೊಳಿಸಲಾಗಿದೆ. ಪ್ರತಿಮೆ ಭಗ್ನಗೊಳಿಸುವ ಮತ್ತು ಶಾಂತಿ ಕದಡುವ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬಿಎಸ್ ಪಿ ನಾಯಕಿ ಮಾಯಾವತಿ ಕೂಡ ರಾಜ್ಯದಲ್ಲಿನ ಅಂಬೇಡ್ಕರ್ ಪ್ರತಿಮೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಅಂಬೇಡ್ಕರ್ ಪ್ರತಿಮೆ: ಕೇಸರಿ ಬಣ್ಣದ ಮೇಲೆ ನೀಲಿ ಬಣ್ಣ

ಅಂಬೇಡ್ಕರ್ ಪ್ರತಿಮೆ: ಕೇಸರಿ ಬಣ್ಣದ ಮೇಲೆ ನೀಲಿ ಬಣ್ಣ

ಬದಾನ್ ಜಿಲ್ಲೆಯ ದುಗ್ರೈಯ್ಯ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪ್ರತಿಮೆ ಭಗ್ನಗೊಳಿಸಿದ್ದರು. ನಂತರ ನಾಗರಿಕರು ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳೀಯಾಡಳಿತ ಆಗ್ರಾದಿಂದ ಹೊಸ ಪ್ರತಿಮೆ ತರಿಸಿ ಸ್ಥಾಪಿಸಿತ್ತು. ಆದರೆ ಹೊಸ ಪ್ರತಿಮೆ ಕೇಸರಿ ಬಣ್ಣ ಹೊಂದಿದ್ದರಿಂದ ಬಿಎಸ್ ಪಿ ಕಾರ್ಯಕರ್ತರು ಅದಕ್ಕೆ ಮೂಲದಲ್ಲಿ ಇದ್ದ ನೀಲಿ ಬಣ್ಣ ಬಳಿದಿದ್ದಾರೆ.

ಗುರಜಾಲಾದಲ್ಲಿ ಗೋವುಗಳ ಸರಣಿ ಸಾವು

ಗುರಜಾಲಾದಲ್ಲಿ ಗೋವುಗಳ ಸರಣಿ ಸಾವು

ಗುರುಜಾಲಾ ಮಂಡಲದ ದೈದಾ ಗ್ರಾಮದಲ್ಲಿ ಜೋಳವನ್ನು ತಿಂದು 56 ಕ್ಕೂ ಹೆಚ್ಚು ಗೋವುಗಳು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಜೋಳದ ಹೊಲದಲ್ಲಿ ಮೃತಪಟ್ಟಿರುವ ಗೋವುಗಳನ್ನು ಈ ಚಿತ್ರದಲ್ಲಿ ವೀಕ್ಷಿಸಬಹುದು.

ಮಹಾರಾಷ್ಟ್ರದಲ್ಲಿ ನಡೆದ ಭೀಕರ ರಸ್ತೆ ಅಪಘಾತ

ಮಹಾರಾಷ್ಟ್ರದಲ್ಲಿ ನಡೆದ ಭೀಕರ ರಸ್ತೆ ಅಪಘಾತ

ಪುಣೆಯ ಖಂಡಾಲ ಘಾಟ್ ಬಳಿ ಮಂಗಳವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವಿಜಯಪುರ ಜಿಲ್ಲೆಯ ತಾಂಡಾದ 21 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 16 ಮಂದಿಗೆ ಗಂಭೀರ ಗಾಯನಗಳಾಗಿವೆ. ಖಂಡಾಲ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನ ಉರುಳಿ ಬಿದ್ದಿದೆ.

ಮುಂಬೈ ಏರ್ ಪೋರ್ಟ್‌ ರನ್‌ ವೇ ಬಂದ್ ಮಾಡಿರುವ ದೃಶ್ಯ

ಮುಂಬೈ ಏರ್ ಪೋರ್ಟ್‌ ರನ್‌ ವೇ ಬಂದ್ ಮಾಡಿರುವ ದೃಶ್ಯ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಗಾರು ಪೂರ್ವ ಸಿದ್ಧತೆಗಳು, ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರನ್‌ ವೇಯನ್ನು ಮುಚ್ಚಿರುವ ದೃಶ್ಯವನ್ನು ಈ ಚಿತ್ರದ ಮೂಲಕ ನೋಡಬಹುದು.

ಬಸ್‌ ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಸಾಮೂಹಿಕ ಅಂತ್ಯ ಸಂಸ್ಕಾರ

ಬಸ್‌ ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಸಾಮೂಹಿಕ ಅಂತ್ಯ ಸಂಸ್ಕಾರ

ಕಾಂಗ್ರಾ ಜಿಲ್ಲೆಯ ನುರ್ ಪುರದ ಬಳಿ ಶಾಲಾ ಬಸ್ಸು ಅಪಘಾತಕ್ಕೀಡಾಗಿತ್ತು. ಬಸ್ಸಿನಲ್ಲಿದ್ದ 27 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಆ ಮಕ್ಕಳ ಪೋಷಕರು ಒಂದೇ ಕಡೆಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸುತ್ತಿರುವ ದೃಶ್ಯವನ್ನು ನೀವು ನೋಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+