ಬಾತ್ ರೂಂಗೆ ಕಳ್ಳನೋಟ ಬೀರುವುದೇ ಮೋದಿಗೆ ಕೆಲಸ: ರಾಹುಲ್ ವಾಗ್ದಾಳಿ
ಇನ್ನೊಬ್ಬರ ಮನೆಯ ಬಾತ್ ರೂಂಗೆ ಕಳ್ಳನೋಟ ಬೀರುವುದೇ ಮೋದಿಗೆ ಕೆಲಸ, ರಾಹುಲ್ ಗಾಂಧಿ ಗಂಭೀರ ಹೇಳಿಕೆ
ಲಕ್ನೋ, ಫೆ 11: ಜಾತಕ, ಜನ್ಮ ಜಾಲಾಡಿಸುತ್ತೇನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ತೀಕ್ಷ್ಣವಾಗಿ ಹರಿಹಾಯ್ದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿಜೀಗೆ ಇನ್ನೊಬ್ಬರ ಮನೆಯ ಬಾತ್ ರೂಂನಲ್ಲಿ ಕಳ್ಳನೋಟ ಬೀರುವುದೇ ಕೆಲಸ ಎಂದಿದ್ದಾರೆ.
ನಗರದಲ್ಲಿ ಶನಿವಾರ (ಫೆ 11) ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ರಾಹುಲ್, ಬಾತ್ ರೂಂನಲ್ಲಿ ಮನಮೋಹನ್ ಸಿಂಗ್ ರೈನ್ ಕೋಟ್ ಹಾಕಿಕೊಂಡು ಸ್ನಾನ ಮಾಡುತ್ತಾರೆ ಎನ್ನುವ ಮೋದಿ ಟೀಕಿಸಿದ್ದನ್ನು ಉಲ್ಲೇಖಿಸಿ ಮೇಲಿನ ಹೇಳಿಕೆ ನೀಡಿದ್ದಾರೆ. (ಜನ್ಮ ಜಾಲಾಡಿಸುತ್ತೇನೆ, ಮೋದಿ ಎಚ್ಚರಿಕೆ)

ಹರಿದ್ವಾರದಲ್ಲಿ ಮೋದಿ ನೀಡಿದ ಭಾಷಣವನ್ನು ಪ್ರಸ್ತಾವಿಸಿದ ರಾಹುಲ್, ನನಗಿರುವ ಮಾಹಿತಿಯ ಪ್ರಕಾರ ಮೋದಿಗೆ ಜಾತಕ, ಭವಿಷ್ಯ ಓದುವುದೆಂದರೆ ಇಷ್ಟ. ಗೂಗಲ್ ಮೂಲಕ ಇನ್ನೊಬ್ಬರ ಮನೆಯ ಬಾತ್ ರೂಂನೊಳಕ್ಕೆ ಕಳ್ಳನೋಟ ಬೀರುತ್ತಾರೆಂದು ರಾಹುಲ್ ಲೇವಡಿ ಮಾಡಿದ್ದಾರೆ.
ಪ್ರಧಾನಿಯಾಗಿ ಮೋದಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಮಯಾವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿ ಮಾಡುವುದು ಇದೇ (ಬಾತ್ ರೂಂಗೆ ಕಳ್ಳನೋಟ) ಕೆಲಸವನ್ನು ಎಂದು ಕಾಂಗ್ರೆಸ್ ಯುವರಾಜರು ವ್ಯಂಗ್ಯವಾಡಿದ್ದಾರೆ.
ಕೆಲವೊಬ್ಬರು ಮನ್ ಕೀ ಬಾತ್ ಮಾಡುತ್ತಾರೆ, ಕಾಮ್ ಕೀ ಬಾತ್ ಮಾಡುವುದಿಲ್ಲ ಎಂದು ಆಕಾಶವಾಣಿಯಲ್ಲಿ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆ ಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ಜನ್ಮ ಜಾಲಾಡಿಸುತ್ತೇನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಅಖಿಲೇಶ್, ಪ್ರಧಾನಿಯಾದವರಿಗೆ ತಾಳ್ಮೆ ಮುಖ್ಯ, ಅವರು ಇಷ್ಟು ನರ್ವಸ್ ಆಗಬಾರದೆಂದು ಪ್ರಧಾನಿ ಮೋದಿಗೆ ವ್ಯಂಗ್ಯ ಮಿಶ್ರಿತ ಸಲಹೆ ನೀಡಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications