Get Updates
Get notified of breaking news, exclusive insights, and must-see stories!
Live

Operation Sindoor Live Updates: ಇಂದು ಸರ್ವ ಪಕ್ಷ ಸಭೆ: ಭಾರತದಾದ್ಯಂತ ಹೈ - ಅಲರ್ಟ್!

ಭಾರತವು ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ) ಮೇ 6ರ ತಡರಾತ್ರಿ ಭಾರೀ ಕ್ಷಿಪಣೆ ದಾಳಿಯನ್ನು ನಡೆಸಿದೆ. ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿಯನ್ನು ಭಾರತೀಯ ಸೇನೆ ನಡೆಸಿದೆ. ಭಾರತೀಯ ಸೇನೆಯು ಇದಕ್ಕೆ "ಆಪರೇಷನ್ ಸಿಂಧೂರ" ಎಂದು ಹೆಸರು ಇರಿಸಿದೆ.

Operation Sindoor Live Updates

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರ: ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್ ಉಗ್ರರ ದಾಳಿಗೆ ಇದೀಗ ಪ್ರತ್ಯುತ್ತರ ನೀಡಿದೆ. ಈ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿಯನ್ನು ಮಾಡಲಾಗಿತ್ತು. ಈ ಉಗ್ರರ ದಾಳಿಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಏಪ್ರಿಲ್‌ 22ಕ್ಕೆ ಉಗ್ರರು ದಾಳಿ ನಡೆಸಿದ್ದರು. 15 ದಿನಗಳ ನಂತರ ಪ್ರತೀಕರ ತೆಗೆದುಕೊಂಡಿದೆ. ಭಾರತವು ಈ ಬಾರಿ ಪಾಕ್‌ ಮುಟ್ಟಿನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದೆ.

May 08, 2025, 1:43 pm IST

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.
May 08, 2025, 8:47 am IST

ಭಾರತದಾದ್ಯಂತ ಹೈ - ಅಲರ್ಟ್!

ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು. ಭಾರತದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
May 08, 2025, 6:53 am IST

ಸೇನಾ ದಾಳಿ: ಹಾನಿಯ ಸ್ಯಾಟಲೈಟ್ ಚಿತ್ರಗಳು ಬಿಡುಗಡೆ‌

ಆಪರೇಷನ್ ಸಿಂದೂರ ದಾಳಿ ಚಿತ್ರಗಳೂ ಬಿಡುಗಡೆ ಮಾಡಲಾಗಿವೆ. ಭಾರತೀಯ ಸೇನೆಯು ಮ್ಯಾಕ್ಸರ್ ಟೆಕ್ನಾಲಜೀಸ್‌ನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಸೇನೆ ದಾಳಿ ಮಾಡಿದ ಉಗ್ರ ನೆಲೆಗಳ , ದಾಳಿಗೆ ಮೊದಲು ಮತ್ತು ನಂತರ ಹೇಗಿತ್ತು ಎಂಬುದು ಗೊತ್ತಾಗುತ್ತದೆ. ಬಹಾವಲ್ಪುರದ ಜಾಮಿಯಾ ಮಸೀದಿ ಮತ್ತು ಪಾಕಿಸ್ತಾನದ ಮುರಿಡ್ಕೆ ನಗರದ ಮೇಲೆ ಭಾರತೀಯ ಕ್ಷಿಪಣಿ ದಾಳಿಯಿಂದ ಉಂಟಾದ ಹಾನಿಯನ್ನು ಈ ಚಿತ್ರಗಳಲ್ಲಿ ನೋಡಬಹುದಾಗಿದೆ.
May 08, 2025, 6:49 am IST

ರಾಜಸ್ಥಾನ: ಶಾಲೆಗಳಿಗೆ ರಜೆ ಘೋಷಣೆ

ರಾಜಸ್ಥಾನ ರಾಜ್ಯದ ಜೋಧಪುರ ಆಡಳಿತವು ಇಂದಿನಿಂದ ಮುಂದಿನ ಆದೇಶದವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದೆ. ರಕ್ಷಣೆ, ಭದ್ರತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಗೌರವ್ ಅಗರ್ವಾಲ್ ಅವರು ಈ ಆದೇಶ ಹೊರಡಿಸಿದ್ದಾರೆ.
May 08, 2025, 6:49 am IST

ಇಂದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಪರೇಷನ್ ಸಿಂದೂರ, ಭಾರತ ಪಾಕಿಸ್ತಾನ ಯುದ್ಧ ವಿಚಾರ ಟ್ರೆಡಿಂಗ್‌ನಲ್ಲಿದೆ. ಕೇಂದ್ರ ಸರ್ಕಾರ, ಭಾರತೀಯ ಸೇನೆ ಪಾಕ್ ವಿರುದ್ಧ ಮತ್ತೆ ಯಾವೆಲ್ಲ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜನರು ಕುತೂಹಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ ಟ್ಯಾಗ್ ಮೂಲಕ ಹೊಸ ಅಪ್ಡೇಟ್‌ಗಾಗಿ ತಡಕಾಡುತ್ತಿದ್ದಾರೆ.
May 08, 2025, 6:40 am IST

ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ. ಕಳೆದ ಎರಡು ದಿನಗಳಿಂದ ನಿಂತರವಾಗಿ ಪಾಕ್‌ ಶೆಲ್‌ ದಾಳಿಗಳನ್ನು ನಡೆಸುತ್ತಿದೆ. ಪಾಕ್‌ ನಡೆಸಿದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.
May 07, 2025, 6:25 pm IST

ದೇಶವೇ ಹೆಮ್ಮೆಪಡುವ ವಿಷಯ

ಪಾಕ್ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ದಾಳಿ ಮಾಡಿದ್ದ ಪಾಕ್ ಪೋಷಿತ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಪ್ರತ್ಯುತ್ತರ ನೀಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
May 07, 2025, 5:39 pm IST

ಭಾರತೀಯ ಸೈನಿಕರು ಇತಿಹಾಸ ನಿರ್ಮಿಸಿದ್ದಾರೆ!

ಭಾರತೀಯ ಸೈನಿಕರು ಇತಿಹಾಸ ನಿರ್ಮಿಸಿದ್ದಾರೆ ಎಂದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್‌ ಹೇಳಿದ್ದಾರೆ. ಭಾರತ್‌ ಮಾತಾ ಕೀ ಜೈ ಎಂದು ಹೇಳುವ ಮೂಲಕ ಅವರು ಭಾಷಣ ಪ್ರಾರಂಭಿಸಿದರು. ಭಾರತೀಯ ಸೇನೆಯು ಪಾಕ್‌ನ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಿದ ಮೇಲೆ ಮೊದಲ ಬಾರಿಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
May 07, 2025, 4:31 pm IST

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ದೇಶದ ವಿವಿಧೆಡೆ ಮಾಕ್ ಡ್ರಿಲ್ ನಡೆಸಲಾಗಿದೆ. ದೇಶದ ವಿವಿಧ ಭಾಗದಲ್ಲಿ ಇಂದು ಮಾಕ್‌ಡ್ರಿಲ್ ನಡೆಸಲಾಗಿದ್ದು. ಬೆಂಗಳೂರು ಹಾಗೂ ಕರ್ನಾಟಕ ಸೇರಿದಂತೆ ವಿವಿಧೆಡೆ ಮಿಸೈಲ್ ದಾಳಿ, ಕ್ಷಿಪಣಿ ದಾಳಿ ಹಾಗೂ ಕಟ್ಟಡ ಧ್ವಂಸ ಸೇರಿದಂತೆ ಹಲವು ಅಣಕು ಪ್ರದರ್ಶನ
May 07, 2025, 3:30 pm IST

ಸರ್ವಪಕ್ಷಗಳ ಸಭೆ

ಪಾಕ್ ಉಗ್ರರ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸರ್ವ ಪಕ್ಷಗಳ ಸಭೆಯನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಬಿಜೆಪಿ ಪ್ರಮುಖ ನಾಯಕರು, ಸಚಿವರು, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಮಹತ್ವದ ಚರ್ಚೆ ನಡೆಯಲಿದೆ.
May 07, 2025, 3:07 pm IST

ದೇಶದ ಗಡಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಮಿತ್‌ ಶಾ ಸಭೆ

ದೇಶದ ಗಡಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಸಭೆ ನಡೆಸಲಿದ್ದಾರೆ. ಆಪರೇಷನ್‌ ಸಿಂಧೂರ ಬೆನ್ನಲ್ಲೇ ಭಾರತ ಹಾಗೂ ಪಾಕ್‌ ನಡುವೆ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗಿದ್ದು ಭಾರತವು, ಮುಂದೆ ಎದುರಾಗಬಹುದಾದ ಎಲ್ಲಾ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿದೆ.
May 07, 2025, 1:35 pm IST

ಭಾರತ ಪ್ರತಿದಾಳಿ: ಬೆಂಗಳೂರು ಏರ್‌ಪೋರ್ಟ್ ಮನವಿ

'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದೆ. ಇದು ನಮ್ಮ ಸಂಪರ್ಕ‌ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮಾಹಿತಿ ನೀಡಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಬೇಕು. ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ಆಯಾ ಸಂಸ್ಥೆಗಳ ಅಧಿಕೃತ ಟ್ವಿಟರ್ (ಎಕ್ಸ್) ಮೂಲಕ ಪಡೆಯವುಂತೆ ಕೋರಿದೆ.
May 07, 2025, 12:41 pm IST

ಭಯೋತ್ಪಾದನೆಯ ಬಗ್ಗೆ ನಮಗೆ ಶೂನ್ಯ ಸಹಿಷ್ಣುತೆ ಇರುವುದರಿಂದ ನಾವು ಆಪರೇಷನ್ ಸಿಂಧೂರ್‌ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ಇದು ನಾವು ಯಾವಾಗಲೂ ಪ್ರಚಾರ ಮಾಡುತ್ತಾ ಬಂದಿರುವ ವಿಷಯ. ನಾವು ಒಂದು ದೇಶವಾಗಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
May 07, 2025, 12:40 pm IST

ಪೆಹಲ್ಗಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್ ' ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
May 07, 2025, 12:40 pm IST

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ. ಈ ಸಭೆಯಲ್ಲಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಹಾಗೂ ಭಾರತ ಮುಂದಿನ ನಡೆಯ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಭಾರತದ ಮುಂದಿನ ಹೆಜ್ಜೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ.
May 07, 2025, 12:03 pm IST

ನಮ್ಮ ನೆಲದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ: ಪ್ರಿಯಾಂಕ್‌ ಖರ್ಗೆ

ಭಯೋತ್ಪಾದನಾ ಶಿಬಿರಗಳ ಮೇಲೆ ದಿಟ್ಟತನ ಮತ್ತು ನಿಖರತೆಯಿಂದ ಪ್ರತಿದಾಳಿ ನಡೆಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾವು ವಂದಿಸುತ್ತೇವೆ. ಪಹಲ್ಗಾಮ್ ದಾಳಿಯ ನಂತರ, ಭಾರತವನ್ನು ರಕ್ಷಿಸುವ ಪ್ರತಿಯೊಂದು ನಿರ್ಣಾಯಕ ಹೆಜ್ಜೆಗೂ ಕಾಂಗ್ರೆಸ್ ಪಕ್ಷವು ನಮ್ಮ ಸೇನಾ ಪಡೆಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಿಂತಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.
May 07, 2025, 12:03 pm IST

26 ಮಂದಿ ಮೃತರಿಗೆ ನ್ಯಾಯ

indiapakistan war updates
ಸಿಂಧೂರ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿದ ರಕ್ಷಣ ಇಲಾಖೆ, ಸೇನಾ ಮುಖ್ಯಸ್ಥರು, ಪಹಲ್ಗಾಮ್‌ ನಲ್ಲಿ ನಡೆದ ದಾಳಿಯಲ್ಲಿ ಮೃತರಾದ ಭಾರತದ 26 ಮಂದಿಗೆ ನ್ಯಾಯ ನೀಡಲಾಗಿದೆ. ಆ ಉದ್ದೇಶದಿಂದ ಏರ್‌ಸ್ಟ್ರೈಕ್ ಮಾಡಿದ್ದೇವೆ ಎಂದು ಸೇನೆ ತಿಳಿಸಿದೆ.
May 07, 2025, 10:45 am IST

ದೆಹಲಿಯಲ್ಲಿ ಸೇನಾಧಿಕಾರಿಯಿಂದ ಸುದ್ದಿಗೋಷ್ಠಿ

ವಿಂಗ್‌ ಕಮಾಂಡರ್‌ ಯೋಮಿಕಾ ಸಿಂಗ್‌ ಅವರಿಂದ ಸುದ್ದಿಗೋಷ್ಠಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಯಾಗುವುದು ಹಾಗೂ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಉಗ್ರರಿಗೆ ಬೇಕಾಗಿರಲಿಲ್ಲ. ಇದೇ ಕಾರಣಕ್ಕಾಗಿ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನವು ಉಗ್ರರ ಭದ್ರ ನೆಲೆಯಾಗಿದೆ. ಅಲ್ಲಿ ವಿಶ್ವದಾದ್ಯಂತ ನಿಷೇಧಿಸಲ್ಪಟ್ಟಿರುವ ಉಗ್ರರು ನೆಲೆಸಿದ್ದಾರೆ. ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ದಾಳಿಯು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.
May 07, 2025, 10:35 am IST

ಸಿಂಧೂರ ಸಂಭ್ರಮಾಚರಣೆ

ಸಿಂಧೂರ ಸಂಭ್ರಮಾಚರಣೆ
ಸಿಂಧೂರ ಕಾರ್ಯಾಚರಣೆ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಶ್ರೀ ಸಾಯಿ ಮಂದಿರದಲ್ಲಿ ಯುವಕರಿಂದ ಪೂಜೆ ಸಲ್ಲಿಸಿ. ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸಾಯಿ ಮಂದಿರಕ್ಕೆ ಬಂದು ವಿಶೇಷ ಪೂಜೆ ಮಾಡಿಸಿ ಜೈಕಾರ ಹಾಕಿದ ಯುವ ಪೀಳಿಗೆ. ನಮ್ಮವರ ಸಿಂಧೂರ ಅಳಿಸಿದ ಪಾಪಿಗಳ ಜೀವ ಕಸಿದಿದ್ದು ಖುಷಿ ತಂದಿದೆ ಎಂದು ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.
May 07, 2025, 10:34 am IST

ಕ್ಷಿಪಣಿ ದಾಳಿಗೆ ಪಾಕ್ ಮಸೀದಿ ದ್ವಂಸ

ಭಾರತದ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಮಸೀದಿ ಧ್ವಂಸಗೊಂಡಿದೆ. ಮಸೀದಿ ಬೃಹತ್ ಕಟ್ಟಡ ಧ್ವಂಸಗೊಂಡಿದೆ. ಇದೆಲ್ಲ ಘಟನೆಗಳಿಂದ ಪಾಕಿಸ್ಥಾನ ತಬ್ಬಿಬ್ಬಾಗಿದೆ.
May 07, 2025, 10:20 am IST

ಭಾರತೀಯ ಸೇನೆಯಿಂದ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ 10.30ಕ್ಕೆ ಮಹತ್ವದ ಪತ್ರಿಕಾಗೋಷ್ಠಿ ನಡೆಯಲಿದೆ.
May 07, 2025, 10:16 am IST

ಭಯೋತ್ಪಾದಕ ವಿರುದ್ಧದ ಪ್ರತಿಕಾರ 'ಆಪರೇಷನ್ ಸಿಂಧೂರ್': ವಿಜಯೇಂದ್ರ

ಭಯೋತ್ಪಾದಕ ವಿರುದ್ಧದ ಪ್ರತಿಕಾರ 'ಆಪರೇಷನ್ ಸಿಂಧೂರ್': ವಿಜಯೇಂದ್ರ
26 ಅಮಾಯಕ ಭಾರತೀಯ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಭಯೋತ್ಪಾದಕ ರಕ್ಕಸರ ವಿರುದ್ಧದ ಪ್ರತಿಕಾರ 'ಆಪರೇಷನ್ ಸಿಂಧೂರ್' ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು.
May 07, 2025, 10:10 am IST

ಉಗ್ರರ ಸಂಹಾರ.. ಪಾಕ್‌ ದಾಳಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಅಮಿತ್‌ ಶಾ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಿಂಧೂರ ಆಪರೇಷನ್‌ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ಈ ದಾಳಿಯ ನಂತರ ಜಗತ್ತು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ.
May 07, 2025, 10:08 am IST

ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ!

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಿಂಧೂರ ಆಪರೇಷನ್‌ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ಈ ದಾಳಿಯ ನಂತರ ಜಗತ್ತು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ.
May 07, 2025, 9:35 am IST

ಪಾಕ್‌ ಮೇಲೆ ದಾಳಿಗೆ ಕಾಂಗ್ರೆಸ್ ಮರುಕ: ಜನಾಕ್ರೋಶ

ಭಾರತ-ಪಾಕಿಸ್ತಾನ ಮಧ್ಯದ ಯುದ್ಧದ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಮಾಡಿರುವ ಟ್ವಿಟ್‌ಗೆ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪಾಕಿಸ್ತಾನದಲ್ಲಿ ಮಿಸೈಲ್ ಬಿದ್ದರೆ, ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷ ಯಾಕೆ ಮರಗುತ್ತಿದೆ?.ಅಪರೇಷನ್ ಸಿಂಧೂರ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದಂತಿದೆ' ಎಂದು ಹೇಳಿದ್ದಾರೆ. ಕಾಂಗ್ರೆಸ್ ಮನುಕುಲದ ಅತ್ಯಂತ ಶಕ್ತಿಯು ಶಸ್ತ್ರ ಎಂದರೆ ಶಾಂತಿ-ಮಹಾತ್ಮಾ ಗಾಂಧಿ ಎಂದು ಕಾಂಗ್ರೆಸ್ ಹೇಳಿದ್ದಕ್ಕೆ ಬಿಜೆಪಿ ಮಾತ್ರವಲ್ಲದೇ ರಾಜ್ಯದ ಜನರು ಸಹ ಆಕ್ರೋಶ ಹೊರ ಹಾಕಿದ್ದಾರೆ.
May 07, 2025, 9:28 am IST

ಉಗ್ರರ ಮನೆಗಳು ಛಿದ್ರ.. ಛಿದ್ರ

indopak war live updates
ಭಾರತವು ಪಾಕಿಸ್ತಾನದ ಉಗ್ರರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ದಾಳಿಯಲ್ಲಿ ಉಗ್ರರ ಮನೆಗಳು ಛಿದ್ರ ಛಿದ್ರವಾಗಿವೆ. ಕ್ಷಿಪಣಿ ದಾಳಿಯ ನಂತರ ಅಲ್ಲಿದ್ದವರು ಅಲ್ಲಾಹು ಅಕ್ಬರ್‌ ಅಂತ ಕೂಗುತ್ತಿರುವುದು ವಿಡಿಯೋದಲ್ಲಿ ಇದೆ.
May 07, 2025, 9:12 am IST

ದಾಳಿ ಗಾಯಳು ಆಸ್ಪತ್ರೆಗೆ

Sindoor operation live
ಭಾರತದ ಸೇನೆಯು ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೆ ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಈ ಮೂಲಕ ಭಾರತ ಪಾಕ್‌ಗೆ ತಕ್ಕ ಉತ್ತರ ಕೊಟ್ಟಿದೆ.
May 07, 2025, 9:04 am IST

ಜಿಹಾದಿ ಉಗ್ರರಿಗೆ ತಕ್ಕ ಉತ್ತರ: ಬಿಜೆಪಿ

ಆಪರೇಶನ್ ಸಿಂಧೂರ ಅಡಿಯಲ್ಲಿ ಪಾಕಿಸ್ಥಾನ ಪ್ರೇರಿತ ಜಿಹಾದಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಪ್ರಾರಂಭಿಸಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ಥಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ. ಭಾರತವೆಂದೂ ಜಗ್ಗದು, ಬಗ್ಗದು ಎಂಬುದನ್ನು ಸಾರಿಗೆ ಎಂದು ಕರ್ನಾಟಕ ಬಿಜೆಪಿ ಟ್ವಿಟ್ ಮಾಡಿದೆ.
May 07, 2025, 8:58 am IST

ದಾಳಿ ನಡೆದ 9 ಪ್ರದೇಶಗಳು

ಭಾರತೀಯ ಸೇನೆ "ಆಪರೇಷನ್‌ ಸಿಂಧೂರ್‌"ನಡಿ ಪಾಕಿಸ್ತಾನದ 9 ಸ್ಥಳಗಳಲ್ಲಿ ದಾಳಿ ನಡೆಸಿದೆ. ಮರ್ಕಝ್ ಸುಭಾನ್ ಅಲ್ಲಾ ಬಹವಲ್ಪುರ್, ಮುರಿಡ್ಕೆ ಮರ್ಕಝ್ ತೈಬಾ, ತೆಹ್ರಾ ಕಲಾನ್ ಸಿಯಾಲ್‌ಕೋಟ್, ಮರ್ಕಜ್ ಅಹ್ಲೆ ಹದಿತ್ ಬರ್ನಾಲಾ, ಕೋಟ್ಲಿ, ಮಸ್ಕರ್ ರಹೀಲ್ ಶಾಹಿದ್,ಜಫರಾಬಾದ್‌ನಲ್ಲಿರುವ ಶವಾಯಿ ನಲ್ಲ ಕ್ಯಾಮ್, ಮರ್ಕಝ್ ಸೈಯದ್ನಾ ಬಿಲಾಲ್ ಎಂಬ ಒಂಬತ್ತು ಸ್ಥಳಗಳಲ್ಲಿ ದಾಳಿ ಮಾಡಿರುವುದಾಗಿ ತಿಳಿಸಿದೆ.
May 07, 2025, 8:53 am IST

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿ ಬಗ್ಗೆ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ "ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ. ಜೈ ಹಿಂದ್!" ಎಂದು ಹೇಳಿದ್ದಾರೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+