Ram Mandira: ರಾಮಮಂದಿರ ಉದ್ಘಾಟನೆಯಂದು ದೇಶ ವಿದೇಶದಿಂದ ರಾಮ್ ಲಲ್ಲಾಗೆ ಉಡುಗೊರೆಗಳ ಮಹಾಪೂರ
ಅಯೋಧ್ಯೆ ಡಿಸೆಂಬರ್ 28: ಅಯೋಧ್ಯೆಯಲ್ಲಿ ರಾಮ ಮಂದಿರ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಭಾರತದಾದ್ಯಂತ ಹಿಂದೂ ದೇವಾಲಯಗಳು ಮತ್ತು ವ್ಯಕ್ತಿಗಳು ಸಹ ಈ ವಿಶೇಷ ದಿನಕ್ಕಾಗಿ ಎದುರುನೋಡುತ್ತಿದ್ದಾರೆ. ಜೊತೆಗೆ ರಾಮ ಲಲ್ಲಾಗೆ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಹೌದು.. ರಾಮಮಂದಿರ ಉದ್ಘಾಟನೆಗೂ ಮುಂಚಿತವಾಗಿ ರಾಮನಿಗೆ ಉಡುಗೊರೆಗಳು ದೇಶದೆಲ್ಲೆಡೆಯ ದೇವಸ್ಥಾನಗಳಿಂದ ಹಾಗೂ ವ್ಯಕ್ತಿಗಳಿಂದ ಬರುವ ಸಾಧ್ಯತೆ ಇದೆ. ಈ ಸುಸಂದರ್ಭದಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 30 ರಂದೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮದ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಇಂದು ದೇವಾಲಯದ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.

ರಾಮನಿಗಾಗಿ ಭಾರತ ಮತ್ತು ಪ್ರಪಂಚದಾದ್ಯಂತದ ಕೊಡುಗೆಗಳು
ದೇವಾಲಯ ಉದ್ಘಾಟನೆಗೂ ಮುನ್ನ ಭಾರತದಾದ್ಯಂತ ಇರುವ ದೇವಾಲಯಗಳು ಮತ್ತು ಟ್ರಸ್ಟ್ಗಳು ರಾಮ್ ಲಲ್ಲಾಗೆ ಉಡುಗೊರೆಗಳನ್ನು ಕಳುಹಿಸುತ್ತಿವೆ. ದೇವರಿಗೆ ಬಡಿಸುವ ಪ್ರಸಾದದ ಪದಾರ್ಥಗಳಿಂದ ಹಿಡಿದು ವಿಗ್ರಹವನ್ನು ಅಲಂಕರಿಸುವ ಬಟ್ಟೆಗಳವರೆಗೆ ಎಲ್ಲವನ್ನೂ ದೇಶಾದ್ಯಂತ ಮತ್ತು ನೆರೆಯ ನೇಪಾಳದಿಂದ ಅಯೋಧ್ಯೆಗೆ ಕಳುಹಿಸಲು ಸಿದ್ಧತೆಗಳು ನಡೆದಿವೆ.
ಛತ್ತೀಸ್ಗಢದಿಂದ 3,000 ಕ್ವಿಂಟಾಲ್ ಅಕ್ಕಿ
ಕೆಲ ಮಾಹಿತಿ ಪ್ರಕಾರ, ಈ ವಿಶೇಷ ದಿನದಂದು ಪ್ರಸಾದವನ್ನು ತಯಾರಿಸಲು 3,000 ಕ್ವಿಂಟಾಲ್ ಅಕ್ಕಿಯನ್ನು ಛತ್ತೀಸ್ಗಢದಿಂದ ಕಳುಹಿಸಲಾಗುತ್ತಿದೆ. ಇದನ್ನು ಭಗವಾನ್ ರಾಮನ ತಾಯಿಯ ಮನೆ ಎಂದು ನಂಬಲಾಗಿದೆ. ಜೊತೆಗೆ ದೇವಾಲಯದಲ್ಲಿ ರಾಮನ ಮೂರ್ತಿಗೆ ಬೇಕಾದ ಅಲಂಕರಿಸುವ ಬಟ್ಟೆಗಳು ನೇಪಾಳದ ಜನಕ್ಪುರದಿಂದ ಬರಲಿವೆ. ಹಾಗೆಯೇ ಉದ್ಘಾಟನೆಯ ದಿನದಂದು ನೀಡಲಾಗುವ ಒಣ ಹಣ್ಣುಗಳು ಮತ್ತು ಹಣ್ಣುಗಳು ಕೂಡ ಇಲ್ಲಿಂದಲೇ ಬರಲಿವೆ.
ಜನಕ್ಪುರದಿಂದ 51 ಬಗೆಯ ಸಿಹಿತಿಂಡಿಗಳು
ಧಾರ್ಮಿಕ ನಂಬಿಕೆಗಳ ಪ್ರಕಾರ, ಜನಕಪುರವು ಮಾತಾ ಸೀತೆಯ ಸ್ಥಳವಾಗಿದೆ. ಆದ್ದರಿಂದ ಈ ಉಡುಗೊರೆಗಳನ್ನು ಭಗವಾನ್ ರಾಮನ ಅತ್ತೆಯ ಪರವಾಗಿ ನೀಡಲಾಗುತ್ತಿದೆ. ಹಣ್ಣುಗಳು ಮತ್ತು ಬಟ್ಟೆಗಳನ್ನು ಹೊರತುಪಡಿಸಿ, 1,100 ತಟ್ಟೆಗಳನ್ನು ಸಹ ಜನಕಪುರದಿಂದ ಭಗವಂತನಿಗೆ ಉಡುಗೊರೆಯಾಗಿ ನೀಡಲಾಗುವುದು. ನೇಪಾಳವು ಆಭರಣಗಳು, ಪಾತ್ರೆಗಳು, ಬಟ್ಟೆಗಳು, 51 ಬಗೆಯ ಸಿಹಿತಿಂಡಿಗಳು, ಮೊಸರು, ಬೆಣ್ಣೆ ಮತ್ತು ಬೆಳ್ಳಿ ಪಾತ್ರೆಗಳನ್ನು ರಾಮ್ ಲಲ್ಲಾಗೆ ವಿಶೇಷ ಉಡುಗೊರೆಯಾಗಿ ಕಳುಹಿಸುವ ಸಿದ್ಧತೆ ಮಾಡಿಕೊಂಡಿದೆ.

ಎತಾಹ್ನಿಂದ ಅಷ್ಟಧಾತುಗಳಿಂದ ಮಾಡಿದ ದೇವಾಲಯದ ಗಂಟೆ
ಜೊತೆಗೆ ಉತ್ತರ ಪ್ರದೇಶದ ಎತಾಹ್ ಜಿಲ್ಲೆಯಿಂದ ಅಷ್ಟಧಾತುಗಳಿಂದ ಮಾಡಿದ ದೇವಾಲಯದ ಗಂಟೆಯನ್ನು ಕಳುಹಿಸಲಾಗುತ್ತಿದೆ. ದೇವಾಲಯದ ಉದ್ಘಾಟನೆಯ ನಂತರ 21 ಕೆಜಿ ತೂಕದ ಗಂಟೆ ರಾಮ್ ಲಲ್ಲಾನ ಅಂಗಳವನ್ನು ಅಲಂಕರಿಸುತ್ತದೆ. 108 ಅಡಿ ಉದ್ದದ ಅಗರಬತ್ತಿ, ಪಂಚಗವ್ಯ, ಹವನ ಸಾಮಗ್ರಿ ಮತ್ತು ಪ್ರಾರ್ಥನೆಯ ವೇಳೆ ಬಳಸುವ ಗೋಮಯವನ್ನು ಗುಜರಾತ್ನ ವಡೋದರಾದಿಂದ ಕಳುಹಿಸಲಾಗುತ್ತಿದೆ.
ಪಾಟ್ನಾದಿಂದ ಚಿನ್ನದಿಂದ ಮಾಡಿದ ಬಿಲ್ಲು ಬಾಣ
ಇನ್ನೂ ದೇವಸ್ಥಾನದ ಉದ್ಘಾಟನೆಯ ವೇಳೆ ಹೈದರಾಬಾದ್ನ ಶ್ರೀಚಿಲ್ಲಾ ಶ್ರೀನಿವಾಸ ಶಾಸ್ತ್ರಿ ಅವರು ಪರಿಕ್ರಮದ ವೇಳೆ ಕೈಯಲ್ಲಿ ಹಿಡಿದಿದ್ದ 'ಚರಣ ಪಾದ' ಎಂಬ ಭಗವಂತನ ಚಪ್ಪಲಿಯನ್ನೂ ಅಯೋಧ್ಯೆಗೆ ತರಲಾಗುವುದು. ಮಾತ್ರವಲ್ಲದೆ ಪಾಟ್ನಾದ ಮಹಾವೀರ ಟ್ರಸ್ಟ್ 2 ಕೋಟಿ ನಗದು ಮತ್ತು 5 ಲಕ್ಷ ಮೌಲ್ಯದ ಚಿನ್ನದಿಂದ ಮಾಡಿದ ಬಿಲ್ಲು ಬಾಣವನ್ನು ಉಡುಗೊರೆಯಾಗಿ ಕಳುಹಿಸುತ್ತಿದೆ.
ರಾಮಮಂದಿರ ಉದ್ಘಾಟನೆ
ಜನವರಿ 22 ರಂದು ದೇವಸ್ಥಾನದ ಉದ್ಘಾಟನೆ ನಡೆಯಲಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ದೇಶದಾದ್ಯಂತ ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ 8,000 ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. ದೇವಾಲಯದ ನಿರ್ಮಾಣದ ಸ್ಥಳದಲ್ಲಿ ಕೆಲಸ ಮಾಡುವವರನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಅತಿಥಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರಕಾರ, ರಾಮಮಂದಿರ ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ದೇವಾಲಯದ ಅಲಂಕಾರವನ್ನು ಪ್ರಾರಂಭಿಸಲಾಗುವುದು. ರಾಜಸ್ಥಾನದ ಭರತ್ಪುರ ಜಿಲ್ಲೆಯಿಂದ ತಂದ ಮಕ್ರಾನಾ ಮಾರ್ಬಲ್ ಅನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. ಇದಲ್ಲದೆ, ದೇವಾಲಯದ ನಿರ್ಮಾಣಕ್ಕೆ ಬಳಸಲು ಭಾರತದಾದ್ಯಂತ ಕಲ್ಲುಗಳನ್ನು ತರಲಾಗಿದೆ. ದೇವಾಲಯದ ಉದ್ಘಾಟನೆಯು ಅದ್ಧೂರಿಯಾಗಿ ನಡೆಯುವ ನಿರೀಕ್ಷೆಯಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ಗಣ್ಯರು ಈ ಸಂದರ್ಭವನ್ನು ಅಲಂಕರಿಸುತ್ತಾರೆ ಎಂದು ಅವರು ಹೇಳಿದರು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications