ಅರುಣ್ ಜೇಟ್ಲಿರಿಂದ ಪೂರ್ಣ ಪ್ರಮಾಣದ ಬಜೆಟ್
ನವದೆಹಲಿ, ಫೆ.28: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎನ್ ಡಿಎ ಸರ್ಕಾರದ ಮೊಟ್ಟ ಮೊದಲ ಪೂರ್ಣ ಬಜೆಟ್ ಮಂಡಿಸುತ್ತಿದ್ದಾರೆ. ಸುಮಾರು 10 ವರ್ಷಗಳ ನಂತರ ಬಿಜೆಪಿ ಸರ್ಕಾರ ಮತ್ತೆ ಪೂರ್ಣ ಪ್ರಮಾಣದ ಆಯವ್ಯಯ ಮಂಡನೆಯಾಗುತ್ತಿದೆ.
ಜನ ಪರ, ಅಭಿವೃದ್ಧಿ ಪರ, ಉದ್ಯಮಿಗಳ ಸ್ನೇಹಿ ಬಜೆಟ್ ಇದಾಗಲಿದೆ ಎಂಬ ನಿರೀಕ್ಷೆಯಿದೆ. ಜನಸಾಮಾನ್ಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. 2015-16ರ ಬಜೆಟ್ ಮಂಡನೆ ವಿವರ, ಮುಖ್ಯಾಂಶಗಳು ಅಪ್ಡೇಟ್ ಈ ಪುಟದಲ್ಲಿದೆ..[ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]

ಎನ್ಡಿಎ ಸರ್ಕಾರದ 2015-16ರ ಕೇಂದ್ರ ಬಜೆಟ್ ಮುಖ್ಯಾಂಶಗಳು:
ಸರ್ವೇ ಜನಾಃ ಸುಖೀನೋ ಭವಂತು... ಸರ್ವೇ ಸಂತು ನಿರಾಮಯಃ' ಉಪನಿಷತ್ವಾಣಿಯೊಂದಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಭಾಷಣ ಮುಕ್ತಾಯ.
12.43: ಆರೋಗ್ಯ ವಿಮೆ ಪ್ರೀಮಿಯಂ 15,000 ರು ನಿಂದ 25,000 ರು ಗೆ ಏರಿಕೆ.
12.42: ಟಿಎ ದರ ಹೆಚ್ಚಳ:
Transport allowance, which is currently 800 per month, has been increased to 1600 per month: Arun Jaitley #Budget2015
— ANI (@ANI_news) February 28, 2015 12.41: ಸ್ವಚ್ಛ ಗಂಗಾ ಯೋಜನೆ ಸ್ವಚ್ಛ ಭಾರತ್ ಕೋಶ್ ಗೆ ಹಣ ನೀಡಿದರೆ ಶೇ 100ರಷ್ಟು ತೆರಿಗೆ ವಿನಾಯತಿ.
12.40: ಕಪ್ಪು ಹಣ ವಾಪಸ್ ತರಲು ಹೊಸ ಕಾಯ್ದೆ, ವಿದೇಶದಲ್ಲಿ ಕಪ್ಪು ಹಣ ಇರಿಸಿ ತೆರಿಗೆ ವಂಚಿಸಿದರೆ 10 ವರ್ಷ ಕಠಿಣ ಜೈಲು ಶಿಕ್ಷೆ.
12.35: ಹೋಟೆಲ್, ಶಿಕ್ಷಣ, ಕ್ಲಬ್, ಸೇವಾ ತೆರಿಗೆ ಏರಿಕೆ (ಶೇ14)
* ಚರ್ಮೋದ್ಯಮಕ್ಕೆ ಉತ್ತೇಜನ ಚರ್ಮ ಉತ್ಪನ್ನ ರೀಟೈಲ್ ದರ ಶೇ6ರಷ್ಟು ಇಳಿಕೆ.
12.30: ಕಾರ್ಪೊರೇಟ್ ತೆರಿಗೆ ಶೇ 30 ರಿಂದ 25ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳ ಗುರಿ.
12.25: ಬಜೆಟ್ ಒಟ್ಟಾರೆ ಖರ್ಚು ಲೆಕ್ಕಾಚಾರ ಹೀಗಿದೆ: 17.77 ಲಕ್ಷ ಕೋಟಿ ರು.
Budget Estimates of Expenditure: 17 .77 lakh cr, of which Non Plan is 13.12 lakh cr, and Plan is 4.65 lakh crores: Arun Jaitley #Budget2015
— ANI (@ANI_news) February 28, 2015 12.23: ಸೂಪರ್ ರಿಚ್ ಜನರಿಗೆ ಆಸ್ತಿ ತೆರಿಗೆ ಬದಲಿಗೆ 1ಕೋಟಿ ರು.ಗೂ ಅಧಿಕ ಆದಾಯ ವುಳ್ಳವರಿಗೆ ಹೆಚ್ಚಿನ ಶೇ2ರಷ್ಟು ತೆರಿಗೆ.
12.22: ತಾಂತ್ರಿಕ ಸೇವಾ ತೆರಿಗೆ ಶೇ 25ರಿಂದ 10ಕ್ಕೆ ಇಳಿಕೆ.
12.20: 1 ಲಕ್ಷ ರು.ಗೂ ಅಧಿಕ ವ್ಯವಹಾರಕ್ಕೆ PAN ನಂಬರ್ ಕಡ್ಡಾಯ.
12.07: ರಕ್ಷಣಾ ಇಲಾಖೆಗೆ ಈ ಆರ್ಥಿಕ ವರ್ಷದಲ್ಲಿ 2,46,727 ಕೋಟಿ ರು
[ಜೇಟ್ಲಿ ಬಜೆಟ್ : ಯಾರು, ಏನು ಹೇಳಿದರು?]
12.05: ಕರ್ನಾಟಕದ ಹಂಪಿ, ಮಹಾರಾಷ್ಟ್ರದ ಎಲಿಫೆಂಟಾ ಗುಹೆಗಳು, ಗೋವಾದ ಚರ್ಚುಗಳು, ಉತ್ತರ ಪ್ರದೇಶದ ವಾರಾಣಸಿ ಮಂದಿರ ನಗರಿ, ಪಂಜಾಬಿನ ಜಲಿಯನ್ ವಾಲಾಬಾಗ್, ತೆಲಂಗಾಣದಲ್ಲಿರುವ ವಿಶ್ವಪರಂಪರೆ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು.
12.03: ಅರುಣಾಚಲ ಪ್ರದೇಶದಲ್ಲಿ ಫಿಲಂ ಸ್ಕೂಲ್, ಬಿಹಾರದಲ್ಲಿ ಏಮ್ಸ್
12.02: ಬಿಸಿಯೂಟ ಯೋಜನೆ ಜಾರಿಗೆ 69 ಸಾವಿರ ಕೋಟಿ ರು.
12.00: ಕರ್ನಾಟಕದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು, ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಜಾರಿ.
I propose to set up All India Institute of Medical Sciences (AIIMS) in J&K, Punjab, Tamil Nadu, Himachal and Assam: Arun Jaitley #Budget2015
— ANI (@ANI_news) February 28, 2015 11.56: Employees contribution to the EPF should be optional
11.55: ಮಕ್ಕಳ ಅಭಿವೃದ್ಧಿ ಕ್ಷೇತ್ರಕ್ಕೆ 1,500 ಕೋಟಿ, ಮಕ್ಕಳ ಸುರಕ್ಷತೆಗಾಗಿ 500 ಕೋಟಿ ರು
11.52: 150 ದೇಶಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ ವಿಸ್ತರಣೆ
11.50:ನಮ್ಮ ದೇಶದಲ್ಲಿ ಚಿನ್ನದ ಬಳಕೆ ಅತಿಯಾಗಿದೆ. ಪ್ರತೀ ವರ್ಷ ನಾವು 800-1000 ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅಶೋಕ ಚಕ್ರ ರೂಪವುಳ್ಳ ಚಿನ್ನದ ನಾಣ್ಯ ಬಿಡುಗಡೆ.
11.47: ನಿರ್ಭಯಾ ಫಂಡ್ ಗೆ 1000 ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ.
11.48: 20 ಸಾವಿರ ಮೆಗಾ ವ್ಯಾ ವಿದ್ಯುತ್ ಉತ್ಪಾದನೆ ಗುರಿ
11.45: ದೇಶದಲ್ಲಿ ನಾಲ್ಕು ಅಲ್ಟ್ರಾ ಪವರ್ ಪ್ರಾಜೆಕ್ಟ್ ಯೋಜನೆ ಜಾರಿ. ಕೂಡುಕೂಳಂ ಘಟಕ 2016ಕ್ಕೆ ಪೂರ್ಣ.
11.40: ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ 1580 ಕೋಟಿ ರು
11.37: ಅಂಚೆ ಕಚೇರಿಗಳ ಮೂಲಕ ಜನ ಧನ ಯೋಜನೆ ಜಾರಿ
11.35: ಬಿಪಿಎಲ್ ಕಾರ್ಡ್ ವಯೋವೃದ್ಧರಿಗೆ ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ.
Govt proposes to set up 5 ultra mega power projects, each of 4000 MW, will be plug and play projects: Arun Jaitley #Budget2015
— ANI (@ANI_news) February 28, 2015 11.33: ಪರಿಶಿಷ್ಟ ಜಾತಿಗೆ 30,858 ಕೋಟಿ ರು ಮೀಸಲು. ಪರಿಶಿಷ್ಟ ಪಂಗಡಕ್ಕೆ 18 ಸಾವಿರ ಕೋಟಿ ರು.
* ಅಲ್ಪಸಂಖ್ಯಾತ ಪಂಗಡದ ಯುವಕರಿಗೆ ನಯೀ ಮಂಜೀಲ್ ಯೋಜನೆ
11.32: ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ 12 ರು ವಾರ್ಷಿಕ ಪಾವತಿಗೆ 2 ಲಕ್ಷ ರು ಸಿಗಲಿದೆ.
* ಎಸ್ ಸಿ ಎಸ್ಟಿ ಗಳ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ.
* ನರೇಗಾ ಯೋಜನೆಗೆ 34 ಸಾವಿರ ಕೋಟಿ ರು ಮೀಸಲು
FM Arun Jaitley's Fiscal Deficit targets: FY15-16 3.9%, FY16-17 3.5%, FY 17-18 3% #Budget2015
— ANI (@ANI_news) February 28, 2015 11.30: ಅಟಲ್ ಪಿಂಚಣಿ ಯೋಜನೆ, ಮೋದಿ ಆರೋಗ್ಯ ಯೋಜನೆ ಜಾರಿ.
11.20: ಪ್ರತಿ 5 ಕಿ.ಮೀ.ಗೆ ಶಾಲೆಗಳ ನಿರ್ಮಾಣ - 75 ಸಾವಿರ ಪ್ರಾಥಮಿಕ ಶಾಲೆಗಳ ನಿರ್ಮಾಣ - ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಿಸುತ್ತೇವೆ.
11.18: ಪ್ರತಿ ಕುಟುಂಬಕ್ಕೂ 24 ಗಂಟೆ ವಿದ್ಯುತ್, ಕುಡಿಯುವ ನೀರು ಒದಗಿಸುವುದು ನಮ್ಮ ಗುರಿ
11.17: 2020ರೊಳಗೆ 20 ಸಾವಿರ ಹಳ್ಳಿಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಒದಗಿಸುತ್ತೇವೆ.
11.15: ಮೇಕ್ ಇನ್ ಇಂಡಿಯಾ ನನಸಾಗಲು ಯುವ ಭಾರತದ ನೆರವು ಬೇಕಿದೆ.
Arun Jaitley,FM #Budget2015 : 2/3 rd of our population is below 35,to ensure employment we have to aim to make India the manufacturing hub
— ANI (@ANI_news) February 28, 2015 11.12: 2022ರೊಳಗೆ ಭಾರತದ ನಿವಾಸಿಗಳಿಗೆ ಸೂರು ಸಿಗಲಿದೆ. 2 ಕೋಟಿ ಮನೆ ಗ್ರಾಮೀಣದಲ್ಲಿ 4 ಕೋಟಿ ನಗರ ಪ್ರದೇಶದಲ್ಲಿ
11.10: 50 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ. 6 ಕೋಟಿ ಶೌಚಾಲಯ ನಿರ್ಮಾಣ ನಮ್ಮ ಗುರಿ
11.08: ಸಿಪಿಐ ದುಬ್ಬರ ಶೇ 5ರಷ್ಟಿದೆ, ಜಿಡಿಪಿ ಅಂದಾಜು ಎಷ್ಟು? ಜಿಎಸ್ ಟಿ ಜಾರಿಗೆ ತರಲಾಗುತ್ತದೆ.
Estimated GDP is 7.4 %: Finance Minister Arun Jaitley speaking in LS #Budget2015
— ANI (@ANI_news) February 28, 2015 11.06: ದೇಶದ ಆರ್ಥಿಕ ವಾತಾವರಣಕ್ಕೆ ಪೂರಕ ಬಜೆಟ್ ಇದಾಗಲಿದೆ. ಉದ್ಯೋಗ ಸೃಷ್ಟಿ, ಹೂಡಿಕೆ, ಬಡತನ ನಿರ್ಮೂಲನೆ, ಆರ್ಥಿಕ ಪ್ರಗತಿಗೆ ಸಾಕಷ್ಟು ಅನುಕೂಲ ಒದಗಿಸಲಾಗಿದೆ.
11.05; ಎನ್ಡಿಎ ಸರ್ಕಾರದ ಪೂರ್ಣ ಪ್ರಮಾಣ ಬಜೆಟ್ ಮಂಡನೆ ಆರಂಭ.. ಜೇಟ್ಲಿ ಭಾಷಣ ವಿಡಿಯೋ ನೋಡಿ
10.45: ಸಂಸತ್ತಿಗೆ ಆಗಮಿಸಿದ ಕೇಂದ್ರ ಬಜೆಟ್ 2015-16 ಪ್ರತಿಗಳು
Union Budget papers arrive in Parliament #Budget2015 pic.twitter.com/fhAXBcEd52
— ANI (@ANI_news) February 28, 2015 10.30: ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಎಫ್ ಡಿಐ, ಸ್ವಚ್ಛ ಭಾರತ್, ಗಂಗಾ ಶುದ್ಧೀಕರಣ, ಬುಲೆಟ್ ಟ್ರೈನ್ ಗೆ ಪೂರಕ ಅನುದಾನ, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ, ರಕ್ಷಣಾ ಕ್ಷೇತ್ರ ಕೊನೆಯದಾಗಿ ರೈತರಿಗೆ ಏನು ನೀಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
10.05: ಕಾನ್ ಪುರದ ದೇಗುಲ, ಲಕ್ನೋದ ಗುರುದ್ವಾರ ಸೇರಿದಂತೆ ವಿವಿಧೆಡೆ ಒಳ್ಳೆಯ ಬಜೆಟ್ ನಮಗೆ ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
Kanpur : People conduct 'hawan' ahead of the Union Budget #Budegt2015 pic.twitter.com/RFXJ5PTB3y
— ANI (@ANI_news) February 28, 2015 9.35: ಕೇಂದ್ರ ಸಚಿವ ಸಂಪುಟದ ಸಭೆ 10.15ಕ್ಕೆ ಆರಂಭ 11ರ ಸುಮಾರಿಗೆ ಬಜೆಟ್ ಅಧಿವೇಶನ ಶುರು.
9.30: ಎನ್ಡಿಎಗೆ ಶುಭ ಸೂಚನೆ, ಬಜೆಟ್ ಆರಂಭಕ್ಕೂ ಮುನ್ನ ಸೆನ್ಸೆಕ್ಸ್ ನಲ್ಲಿ ಜಿಗಿತ, 200 ಅಂಶ ಹಾಗೂ ನಿಫ್ಟಿ 70 ಅಂಶ ಏರಿಕೆ.
Sensex up 250 points at 29476 ; Nifty up 70 points at 8916 #Budegt2015
— ANI (@ANI_news) February 28, 2015 9.15: ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಸಮೇತ ಸಂಸತ್ ತಲುಪಿದ ವಿತ್ತ ಸಚಿವ ಅರುಣ್ ಜೇಟ್ಲಿ.

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು. [ಹಲವು ನಿರೀಕ್ಷೆಗಳ ಕನಸಿನಲ್ಲಿ ಬಜೆಟ್ 2015]
ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು ಎಂಬ ನಿರೀಕ್ಷೆಯಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications