Get Updates
Get notified of breaking news, exclusive insights, and must-see stories!

ತ್ರಿವಳಿ ತಲಾಖ್ ಬಗ್ಗೆ ಮೋದಿ, ಚುನಾವಣೆಗಿಂತ ಮಾನವೀಯತೆ ಮುಖ್ಯ

ಅಹಮದಾಬಾದ್, ಡಿಸೆಂಬರ್ 06: ಗುಜರಾತಿನಲ್ಲಿ ಚುನಾವಣಾ ಪ್ರಚಾರ ನಿರತ ಪ್ರಧಾನಿ ಮೋದಿ ಅವರು ತ್ರಿವಳಿ ತಲಾಖ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತ್ರಿವಳಿ ತಲಾಖ್ ಬಗ್ಗೆ ಚರ್ಚೆ ತಣ್ಣಗಾಗುವುದಿಲ್ಲ, ಎಲ್ಲವೂ ಚುನಾವಣೆ ಜತೆ ತಗುಲಿ ಹಾಕುವುದು ಸರಿಯಲ್ಲ. ಇದು ಮಹಿಳೆಯರ ಹಕ್ಕಿಗೆ ಸಂಬಂಧಿಸಿದ್ದು, ಚುನಾವಣೆಗಿಂತ ಮಾನವೀಯತೆ ಮುಖ್ಯ ಎಂದು ಧನ್ಧುಕದಲ್ಲಿ ಮೋದಿ ಅವರು ಹೇಳಿದರು.

Modi on Triple Talaq: Elections come later humanity comes first

ತ್ರಿವಳಿ ತಲಾಖ್ ಪ್ರಕರಣ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯಲ್ಲಿರುವಾಗ ಎಲ್ಲಾ ಮಾಧ್ಯಮಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು, ಮೋದಿ ಅವರು ತಲಾಖ್ ಬಗ್ಗೆ ಮಾತನಾಡುವುದಿಲ್ಲ, ಉತ್ತರಪ್ರದೇಶದ ಚುನಾವಣೆ ಮುಂದಿಟ್ಟುಕೊಂಡು ಮೋದಿ ಹೇಳಿಕೆ ನೀಡುವುದಿಲ್ಲ ಎಂದಿದ್ದರು. ಅನೇಕ ಮಂದಿ ಕೂಡಾ ಈ ಬಗ್ಗೆ ಮಾತನಾಡಬೇಡಿ, ಇದರಿಂದ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದರು.

ಅಯೋಧ್ಯಾ ರಾಮಮಂದಿರ -ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಪಿಲ್ ಸಿಬಲ್ ಅವರು ಮುಸ್ಲಿಮರ(ಸುನ್ನಿ) ಪರ ವಾದಿಸುತ್ತಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಮುಂದಿನ ಚುನಾವಣೆ (2019ರ ಲೋಕಸಭೆ) ತನಕ ಈ ಪ್ರಕರಣ ಇತ್ಯರ್ಥವಾಗುವುದು ಬೇಡ ಎಂದು ಅವರು ವಾದದ ದಿಕ್ಕನ್ನು ಬದಲಿಸುವುದು ಎಷ್ಟು ಸರಿ? ಲೋಕಸಭೆ ಚುನಾವಣೆಗೆ ಹೇಗೆ ಇದನ್ನು ಜೋಡಿಸುತ್ತಾರೆ? ಎಂದು ಮೋದಿ ಪ್ರಶ್ನಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+