ಕಡು ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದ್ದು ಹೀಗೆ
ಅಹಮದಾಬಾದ್, ಅ 24: ಸೂಕ್ತ ಸಮಯದಲ್ಲಿ ಬುದ್ದಿವಂತಿಕೆಯಿಂದ ಹೆಜ್ಜೆ ಇಟ್ಟು ರಾಜಕಾರಣ ಮಾಡುವುದೂ ಒಂದು ಕಲೆ. ತನ್ನ ರಾಜಕೀಯ ಜೀವನದ ಪ್ರತಿ ನಡೆಯನ್ನು ಟೀಕಿಸುತ್ತಿದ್ದ ಕಟ್ಟಾ ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದರ ಹಿಂದಿನ ಮರ್ಮ ಬಹುಷಃ ಮೋದಿ ಮಾತ್ರ ಬಲ್ಲರು.
ಕಾಂಗ್ರೆಸ್ ಪಕ್ಷದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಹುವಾಗಿ ಟೀಕಿಸುವವರನ್ನು ಪಟ್ಟಿ ಮಾಡಿದರೆ ಮೊದಲಿಗೆ ನಿಲ್ಲುವವರು ದಿಗ್ವಿಜಯ್ ಸಿಂಗ್ ನಂತರದ ಸ್ಥಾನ ಜೈರಾಮ್ ರಮೇಶ್ .
ಇದೇ ಅಕ್ಟೋಬರ್ 31ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಬೃಹತ್ ಪುಥ್ಥಳಿ ಸ್ಥಾಪನೆಯ ಭೂಮಿಪೂಜೆ ಕಾರ್ಯಕ್ರಮವನ್ನು ಗುಜರಾತ್ ಸರಕಾರ ಹಮ್ಮಿ ಕೊಂಡಿದೆ.
ಅಹಮದಾಬಾದ್ ನಗರಕ್ಕೆ ಸಮೀಪದಲ್ಲಿರುವ ನರ್ಮಾದಾ ಜಿಲ್ಲೆಯ ಕೇವಡಿಯಾದಲ್ಲಿ ಈ ಪುಥ್ಥಳಿಯ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ.
ಕಡು ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದ್ದು ಹೀಗೆ..

ಜೈರಾಮ್ ರಮೇಶ್
ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಜೈರಾಮ್ ರಮೇಶ್, ನರೇಂದ್ರ ಮೋದಿಯನ್ನು 'ಭಸ್ಮಾಸುರ' ಎಂದೇ ಟೀಕಿಸುತ್ತಿದ್ದವರು. ವಲ್ಲಭಭಾಯ್ ಪಟೇಲ್ ಪುಥ್ಥಳಿ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪತ್ರದಲ್ಲಿ ಜೈರಾಮ್ ರಮೇಶ್ ಅವರ ಹೆಸರನ್ನು cut and sweet ಆಗಿ 'Dear Jairam Jii' ಎಂದು ಸಂಭೋದಿಸಿ ಪತ್ರವನ್ನು ಮೋದಿ ಆರಂಭಿಸಿದ್ದಾರೆ.

ಪತ್ರದಲ್ಲಿ ಏನಿದೆ
ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟೀಯ ಏಕತಾ ಟ್ರಸ್ಟ್ ಹೆಸರಿನಲ್ಲಿ ಈ ಪುಥ್ಥಳಿ ನಿರ್ಮಾಣವಾಗಲಿದೆ. ಈ ಪುಥ್ಥಳಿ 'statue of unity' ಆಗಲಿದೆ ಎಂದು ಮೋದಿ ಜೈರಾಮ್ ರಮೇಶ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ
ಇಂಗ್ಲಿಷ್ ನಲ್ಲಿ ಬರೆದ ಪತ್ರದಲ್ಲಿ ಮೋದಿ "It is our belief that the monument will become an important cornerstone in the cultural and social life of our great nation, and hence we have kept this entity at an arms' length from government to enable co-option of eminent persons from all walks of life" ಎಂದು ಬರೆದಿದ್ದಾರೆ.

ಪತ್ರದ ಕೊನೆಯಲ್ಲಿ
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಪತ್ರದ ಕೊನೆಯ ಒಕ್ಕಣೆಯನ್ನು "with warm personal regard" ಎಂದು ಬರೆದು ಮುಗಿಸಿದ್ದಾರೆ. ಜೈರಾಮ್ ರಮೇಶ್ ಹಿಂದೊಮ್ಮೆ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲಾ ಒಂದು ದಿನ ಆಡಳಿತಾತ್ಮಕವಾಗಿ ಸವಾಲಾಗುತ್ತಾರೆ ಎಂದಿದ್ದರು. ಮೋದಿ ಅವರ ಈ ಆಹ್ವಾನಕ್ಕೆ ಜೈರಾಮ್ ರಮೇಶ್ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ.

ಪಟೇಲ್ ಪುಥ್ಥಳಿ
ನರ್ಮಾದ ನದಿಯ ಮಧ್ಯ ಭಾಗದಲ್ಲಿ ಮತ್ತು ಸರ್ದಾರ್ ಸರೋವರಿಗೆ ದಕ್ಷಿಣಕ್ಕೆ ಮೂರುವರೆ ಕಿಲೋಮೀಟರ್ ದೂರದಲ್ಲಿ, 182 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ಪುಥ್ಥಳಿ ಅಮೆರಿಕಾದ ಲಿಬರ್ಟಿ ಪುಥ್ಥಳಿಗಿಂತ ಎತ್ತರದ್ದು.
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್












Click it and Unblock the Notifications