ಛತ್ತೀಸ್ಗಢದಲ್ಲಿ ತಮ್ಮ ಮುಖಂಡನನ್ನೇ ಹತ್ಯೆ ಮಾಡಿದ ನಕ್ಸಲರು
ಬಿಜಾಪುರ್, ಅಕ್ಟೋಬರ್ 03: ಸಾಕಷ್ಟು ಹತ್ಯೆ ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಾಡುತ್ತಿದ್ದ ನಕ್ಸಲ್ ಹಿರಿಯ ಮುಖಂಡರನ್ನು ಅವರ ಅನುಯಾಯಿಗಳೇ ಕೊಲೆ
ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಮುಖಂಡನ ಹತ್ಯೆ ನಡೆದಿದೆ. ಅವರನನ್ನು ಹಿಡಿದುಕೊಟ್ಟವರಿಗೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಗಂಗಾಲೂರ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ಹುಡುಕುತ್ತಿದ್ದರು.
ಬಿಜಾಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಡಿವಿಷನಲ್ ಕಮಿಟಿ ಮೆಂಬರ್ ಮೋದಿಯಮ್ ವಿಜ್ಜ ಅವರ ಜೊತೆ ಇರುವವರೇ ಹತ್ಯೆ ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ಪಿ ಸುಂದರ್ರಾಜ್ ತಿಳಿಸಿದ್ದಾರೆ.

ವಿಜ್ಜ ಸಾಕಷ್ಟು ಮಂದಿ ಸ್ಥಳೀಯರನ್ನು ಹತ್ಯೆ ಮಾಡಿದ್ದ, ಘಟನೆ ಕುರಿತು ತನಿಖೆ ನಡೆಯುತ್ತಿದೆ.












Click it and Unblock the Notifications