ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಮೇಘಾಲಯದ ರಾಜ್ಯಪಾಲ ಮಲಿಕ್

ನವದೆಹಲಿ ಜನವರಿ 5: ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅವರ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಬಿಜೆಪಿ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ನೀಡಿದ ಹೇಳಿಕೆ ಭಾರೀ ವಿವಾದವನ್ನೇ ಸೃಷ್ಟಿ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೃಷಿ ಕಾನೂನುಗಳ ಬಗ್ಗೆ ಚರ್ಚೆಗೆ ಹೋದಾಗ ಮೋದಿ ತಮಗೆ ಅಹಂಕಾರದಿಂದ ಪ್ರತಿಕ್ರಿಯೆ ನೀಡಿದ್ದಾರೆಂದು ಮಲಿಕ್ ಹೇಳಿದ್ದರು. ಜೊತೆಗೆ ಮೋದಿ ಅವರು ರೈತರು ನನಗಾಗಿ ಸತ್ತರೇ ಎಂದು ಮರು ಪ್ರಶ್ನೆ ಮಾಡಿದ್ದರು ಎಂದು ಮಲಿಕ್ ಹೇಳಿಕೊಂಡಿದ್ದರು. ಈ ಹೇಳಿಕೆ ಬಿಜೆಪಿ ವಿರುದ್ಧ ಮತ್ತೆ ರೈತರು ಸಿಡಿದೇಳುವಂತೆ ಮಾಡಿತ್ತು. ಅದರೊಂದಿಗೆ ಮೇಘಾಲಯ ರಾಜ್ಯಪಾಲರ ವಿರುದ್ಧ ಬಿಜೆಪಿ ಕೂಡ ಬೂದಿಮುಚ್ಚಿದ ಕೆಂಡದಂತೆ ದ್ವೇಷಕಾರುತ್ತಿದೆ.

ಆಡಳಿತ ಪಕ್ಷದ ನಾಯಕರು ಅವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಅವರನ್ನು ರಾಜಭವನದಿಂದ ಹೊರಗೆ ಇಡಲು ನೋಡುತ್ತಿದ್ದಾರೆ. ಆದರೆ ಇನ್ನೂ ಕೆಲ ವಾರಗಳಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಇರುವುದರಿಂದ ಅವರನ್ನು ಸಹಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ಅನೇಕ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ThePrint ಗೆ ತಿಳಿಸಿದ್ದಾರೆ.

ಭಾನುವಾರದಂದು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರೈತರ ಪ್ರತಿಭಟನೆಗಳ ಕುರಿತು ಚರ್ಚಿಸಲು ಭೇಟಿ ಮಾಡಲು ಹೋದಾಗ ಮೋದಿ ಅವರು 'ದುರಹಂಕಾರ'ವನ್ನು ಪ್ರದರ್ಶಿಸಿದರು. ಹೀಗಾಗಿ ತಾವು ಮೋದಿ ಅವರೊಂದಿಗೆ ವಾಗ್ವಾದಕ್ಕೆ ಇಳಿದರು ಎಂದು ಮಲಿಕ್ ಆರೋಪಿಸಿದ್ದರು.

Many in BJP want Meghalaya Governor Malik out, but will ‘bear with him at least till’ UP polls
ಹರಿಯಾಣದ ದಾದ್ರಿಯಲ್ಲಿ ಭಾನುವಾರ ಸಾಮಾಜಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಲಿಕ್, ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿಯವರನ್ನು ಭೇಟಿ ಮಾಡಲು ಹೋದಾಗ ಐದೇ ನಿಮಿಷದಲ್ಲಿ ಅವರ ಜತೆ ಜಗಳ ಮಾಡಿ ಮುಗಿಸಿದೆ. ಅವರು ಬಹಳ ಸೊಕ್ಕು ತೋರಿಸಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದಾಗ, 'ಅವರು ನನಗಾಗಿ ಸತ್ತರೇ?' ಎಂದು ಕೇಳಿದರು. ಅದಕ್ಕೆ ನಾನು ಹೌದು, ನಿಮಗಾಗಿ ಸತ್ತರು, ಏಕೆಂದರೆ ನೀವು ರಾಜರಾಗಿದ್ದೀರಿ. ನಾನು ಅವರೊಂದಿಗೆ ಜಗಳವಾಡಿದ್ದೇನೆ. ಅವರು ಅಮಿತ್ ಶಾರನ್ನು ಭೇಟಿಯಾಗುವಂತೆ ಹೇಳಿದ್ದರು. ನಾನು ಭೇಟಿ ಮಾಡಿದ್ದೇನೆ ಎಂದಿದ್ದರು. "ದೇಶದ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಈ ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಂತಹ ಮಾತುಗಳನ್ನು ಹೇಳುವ ಧೈರ್ಯ ಮಾಡಿಲ್ಲ"

ಪ್ರಧಾನಮಂತ್ರಿಗಳೇ, ರೈತರು ಮತ್ತು ರೈತ ಕಾರ್ಮಿಕರಿಂದ ಚುನಾಯಿತರಾದವರು, ಅತ್ಯುನ್ನತ ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ನೀವು ಬಳಸುವ ಭಾಷೆಯೇ ಇದು. ಆ ರೈತರು ಬಿಜೆಪಿಗಾಗಿ ಸಾಯಲಿಲ್ಲ, ಪ್ರಧಾನಿ ಮೋದಿಗಾಗಿ ಸಾಯಲಿಲ್ಲ. ಅವರು ಈ ದೇಶದ ಆಹಾರ ಭದ್ರತೆಯನ್ನು ರಕ್ಷಿಸಲು ಸತ್ತರು. ಈ ದೇಶದ 62 ಕೋಟಿ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ನ್ಯಾಯ ಸಿಗಲಿ ಎಂದು ಅವರು ಸತ್ತರು. ಅವರ ಸ್ಮರಣೆಯನ್ನು ಪ್ರಧಾನ ಮಂತ್ರಿ ಅವಮಾನಿಸುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ ಎಂದು ಸುರ್ಜೇವಾಲಾ ಹೇಳಿದ್ದಾರೆ. ಒಂದು ವರ್ಷದ ರೈತರ ಆಂದೋಲನದಲ್ಲಿ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

"ಸರ್ಕಾರವು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಬೇಕು ಮತ್ತು ಉತ್ತರ ಪ್ರದೇಶದಿಂದ ಹರ್ಯಾಣದವರೆಗೆ ರೈತರ ವಿರುದ್ಧ ಸುಳ್ಳು ದಾಖಲಿಸಿದ ಪ್ರತಿಯೊಂದು ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯುವಂತೆ ಘೋಷಿಸಬೇಕು. ಕಡ್ಡಾಯ ಎಂಎಸ್‌ಪಿ ಆರ್ಕಿಟೆಕ್ಚರ್ ಕುರಿತು ನಿರ್ಧರಿಸಲು ಸಮಿತಿಯ ಸಂವಿಧಾನವನ್ನು ಪ್ರಕಟಿಸಬೇಕು ಮತ್ತು ಸಮಿತಿಯು ಮುಂದಿನ 30 ದಿನಗಳಲ್ಲಿ ವರದಿಯನ್ನು ತಲುಪಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸುರ್ಜೇವಾಲಾ ಹೇಳಿದರು.

ಬಿಜೆಪಿ ನಾಯಕರ ಪ್ರಕಾರ, ಮಲಿಕ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸುವ ಮೂಲಕ ಪಕ್ಷವು ಅನಗತ್ಯ ಪ್ರಾಮುಖ್ಯತೆಯನ್ನು ನೀಡಲು ಬಯಸುವುದಿಲ್ಲ, ಆದರೆ ಪಕ್ಷದ ಅನೇಕರು ಈಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ಮುಂಬರುವ ವಿಧಾನಸಭಾ ಚುನಾವಣೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂದು ಭಾವಿಸುತ್ತಾರೆ. ಆಡಳಿತಾರೂಢ ಪಕ್ಷ ಮತ್ತು ಮೋದಿ ಸರ್ಕಾರದ ವಿರುದ್ಧ ಕಾಮೆಂಟ್ ಮಾಡುವ ಮೂಲಕ ವಿವಾದವನ್ನು ಎಬ್ಬಿಸಿದ ಇತಿಹಾಸವನ್ನು ಮಲಿಕ್ ಹೊಂದಿದ್ದರೂ, ಅವರು ಪ್ರಧಾನಿಯ ವಿರುದ್ಧ ಟೀಕೆ ಮಾಡಿರುವುದು ಬಹುಶಃ ಇದೇ ಮೊದಲು. ಇಷ್ಟಾದರೂ ಬಿಜೆಪಿಯ ಯಾವ ನಾಯಕರೂ ಅವರ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+