ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು
ನವದೆಹಲಿ, ನ.15: ವಾರ್ಷಿಕ 10 ಲಕ್ಷ ರು.ಗಿಂತಲೂ ಅಧಿಕ ಆದಾಯ ಹೊಂದಿರುವವರಿಗೆ ಎಲ್ಪಿಜಿ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸುಳಿವು ನೀಡಿದ್ದಾರೆ.
ಹೈದರಾಬಾದ್ನಲ್ಲಿ
ಹಮ್ಮಿಕೊಂಡಿದ್ದ
ಪ್ರಶಸ್ತಿ
ಪ್ರದಾನ
ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದ
ಸಂದರ್ಭದಲ್ಲಿ
ಎಲ್
ಪಿಜಿ
ಸಬ್ಸಿಡಿ
ಬಗ್ಗೆ
ಕೇಳಲಾದ
ಪ್ರಶ್ನೆಗೆ
ಉತ್ತರಿಸಿದ
ವೆಂಕಯ್ಯ
ನಾಯ್ಡು
ಅವರು,
ಸ್ಥಿತಿವಂತರಿಗೆ
ಏಕೆ
ಸಬ್ಸಿಡಿ?
ಸಚಿವರುಗಳಿಗೆ
ಏಕೆ
ಸಬ್ಸಿಡಿ?
ಎಂದು
ಮರು
ಪ್ರಶ್ನಿಸಿದರು.
ದೇಶದೆಲ್ಲೆಡೆ ಅಕ್ರಮವಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿರುವುದನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿರುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ .
ಇದಕ್ಕೆ ಪೂರಕವಾಗಿ ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಸಬ್ಸಿಡಿ ಸಿಲಿಂಡರ್ಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ದೇಶಾದ್ಯಂತ 30 ಲಕ್ಷ ಜನರು ಸಬ್ಸಿಡಿ ವಾಪಸ್ ಮಾಡಿದ್ದಾರೆ. ಬಡವರಿಗಾಗಿಯೇ ಸಬ್ಸಿಡಿ ಸಿಲಿಂಡರ್ ನೀಡುತ್ತಿರುವುದು, ಹೀಗಿರುವಾಗ 10 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಸಬ್ಸಿಡಿ ಅಗತ್ಯವಿಲ್ಲ ಎಂದು ಸಚಿವ ನಾಯ್ಡು ಅಭಿಪ್ರಾಯಪಟ್ಟರು.(ಐಎಎನ್ಎಸ್)