ರೂ. 2,500 ಕೋಟಿಗೆ ಶಿವಾಜಿ ಪ್ರತಿಮೆಯ ಗುತ್ತಿಗೆ ಪಡೆದ ಎಲ್&ಟಿ
ಮುಂಬೈ, ಮಾರ್ಚ್ 2: ಮರಾಠ ದೊರೆ ಶಿವಾಜಿ ಮಹಾರಾಜ ಪ್ರತಿಮೆ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. 210 ಮೀಟರ್ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಎಲ್ ಆ್ಯಂಡ್ ಟಿ' ಪಡೆದುಕೊಂಡಿದೆ.
ರೂ. 2500 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದುಕೊಂಡಿದ್ದು, ಇದಕ್ಕೆ ಗುರುವಾರ ಮಹಾರಾಷ್ಟ್ರ ಸರಕಾರ ಅಂಗೀಕಾರ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ಬೃಹತ್ ಶಿವಾಜಿ ಪ್ರತಿಮೆ ನಿರ್ಮಿಸಲಾಗುವುದು ಎಂದು 8 ವರ್ಷಗಳ ಹಿಂದೆಯೇ ಮಹಾರಾಷ್ಟ್ರ ಸರಕಾರ ಘೋಷಿಸಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಟೆಂಡರ್ ಪಡೆಯಲು 3 ಕಂಪನಿಗಳ ಆಸಕ್ತಿ
ಈ ಪ್ರತಿಮೆ ನಿರ್ಮಾಣಕ್ಕಾಗಿ ಇತ್ತೀಚೆಗೆ ಮಹಾರಾಷ್ಟ್ರ ಸರಕಾರ ಟೆಂಡರ್ ಕರೆದಿತ್ತು. ಇದನ್ನು ಪಡೆದುಕೊಳ್ಳಲು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್, ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಎಲ್ ಆ್ಯಂಡ್ ಟಿ ಮುಂದೆ ಬಂದಿದ್ದವು. ಇದೀಗ ಎಲ್ ಆ್ಯಂಡ್ ಟಿ ಇದರ ಗುತ್ತಿಗೆಯನ್ನು ಪಡೆದುಕೊಂಡಿದೆ.

2500 ಕೋಟಿ ರೂ. ಗೆ ಗುತ್ತಿಗೆ
ಈ ಹಿಂದೆ 3,826 ಕೋಟಿ ರೂಪಾಯಿಗೆ ಈ ಯೋಜನೆಯನ್ನು 'ಎಲ್ ಆ್ಯಂಡ್ ಟಿ' ಕೇಳಿತ್ತು. ಆದರೆ ಇಷ್ಟು ಮೊತ್ತಕ್ಕೆ ಗುತ್ತಿಗೆ ನೀಡಲು ಸರಕಾರ ನಿರಾಕರಿಸಿತ್ತು. ಇದೀಗ ರೂ. 2,500 ಕೋಟಿಗೆ ಯೋಜನೆಯ ಗುತ್ತಿಗೆ ನೀಡಲಾಗಿದೆ.

3,600 ಕೋಟಿ ರೂ. ಯೋಜನೆ
ಒಟ್ಟಾರೆ 3,600 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಇದರಲ್ಲಿ 1,100 ಕೋಟಿ ರೂಪಾಯಿಗಳನ್ನು ಎರಡನೇ ಹಂತದ ಯೋಜನೆಗೆ ಬಳಸಲಾಗುತ್ತದೆ. ತಾಂತ್ರಿಕ ಕಾರಣಗಳಿಗೆ ರಿಲಾಯನ್ಸ್ ಗುತ್ತಿಗೆ ಕಳೆದುಕೊಂಡಿದ್ದರೆ, ಆಫ್ಕಾನ್ಸ್ ಬರೋಬ್ಬರಿ ರೂ. 4779 ಕೋರಿ ರೂಪಾಯಿ ಬಿಡ್ ಮಾಡಿತ್ತು.

6.8 ಹೆಕ್ಟೇರ್ ಜಾಗದಲ್ಲಿ ಸ್ಮಾರಕ
ಯೋಜನೆ ಅನ್ವಯ ಮುಂಬೈನ ಮಲಬಾರ್ ಹಿಲ್ ಸಮೀಪ ಅರಬ್ಬೀ ಸಮುದ್ರದಲ್ಲಿ 6.8 ಹೆಕ್ಟೇರ್ ಜಾಗ ಸೃಷ್ಟಿಸಿ ಅಲ್ಲಿ ಪ್ರತಿಮೆ ಸ್ಥಾಪನೆ ಮಾಡಬೇಕಾಗಿದೆ. ಆರಂಭದಲ್ಲಿ 192 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ಮೀರಿಸಲು ಎತ್ತರವನ್ನು 210 ಅಡಿಗೆ ಏರಿಕೆ ಮಾಡಲಾಗಿದೆ.

ಅಪ್ರತಿಮ ಶಿವಾಜಿ ಸ್ಮಾರಕ
ಈ ಶಿವಾಜಿ ಸ್ಮಾರಕದಲ್ಲಿ ದೇವಸ್ಥಾನ, ವಸ್ತು ಸಂಗ್ರಹಾಲಯ, ಆಸ್ಪತ್ರೆ ಮತ್ರು ರಾಯಗಢ ಕೋಟೆ ಮಾದರಿಯ ಪ್ರವೇಶ ದ್ವಾರ ಮತ್ತು ಶಿವಾಜಿಯ ಜೀವನದ ಮುಖ್ಯ ಘಟ್ಟಗಳನ್ನು ತೋರಿಸುವ ಥಿಯೇಟರ್ ನಿರ್ಮಾಣವಾಗಲಿದೆ.
ಸ್ಮಾರಕದ ಇನ್ನೊಂದು ವಿಶೇಷವೆಂದರೆ 180 ಮೀಟರ್ ಎತ್ತರದವರೆಗೆ ಸ್ಮಾರಕದಲ್ಲಿ ಲಿಫ್ಟ್ ಕೂಡ ಅಳವಡಿಸಲಾಗುತ್ತದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications