ರೂ. 2,500 ಕೋಟಿಗೆ ಶಿವಾಜಿ ಪ್ರತಿಮೆಯ ಗುತ್ತಿಗೆ ಪಡೆದ ಎಲ್&ಟಿ
ಮುಂಬೈ, ಮಾರ್ಚ್ 2: ಮರಾಠ ದೊರೆ ಶಿವಾಜಿ ಮಹಾರಾಜ ಪ್ರತಿಮೆ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. 210 ಮೀಟರ್ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಎಲ್ ಆ್ಯಂಡ್ ಟಿ' ಪಡೆದುಕೊಂಡಿದೆ.
ರೂ. 2500 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದುಕೊಂಡಿದ್ದು, ಇದಕ್ಕೆ ಗುರುವಾರ ಮಹಾರಾಷ್ಟ್ರ ಸರಕಾರ ಅಂಗೀಕಾರ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ಬೃಹತ್ ಶಿವಾಜಿ ಪ್ರತಿಮೆ ನಿರ್ಮಿಸಲಾಗುವುದು ಎಂದು 8 ವರ್ಷಗಳ ಹಿಂದೆಯೇ ಮಹಾರಾಷ್ಟ್ರ ಸರಕಾರ ಘೋಷಿಸಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಟೆಂಡರ್ ಪಡೆಯಲು 3 ಕಂಪನಿಗಳ ಆಸಕ್ತಿ
ಈ ಪ್ರತಿಮೆ ನಿರ್ಮಾಣಕ್ಕಾಗಿ ಇತ್ತೀಚೆಗೆ ಮಹಾರಾಷ್ಟ್ರ ಸರಕಾರ ಟೆಂಡರ್ ಕರೆದಿತ್ತು. ಇದನ್ನು ಪಡೆದುಕೊಳ್ಳಲು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್, ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಎಲ್ ಆ್ಯಂಡ್ ಟಿ ಮುಂದೆ ಬಂದಿದ್ದವು. ಇದೀಗ ಎಲ್ ಆ್ಯಂಡ್ ಟಿ ಇದರ ಗುತ್ತಿಗೆಯನ್ನು ಪಡೆದುಕೊಂಡಿದೆ.

2500 ಕೋಟಿ ರೂ. ಗೆ ಗುತ್ತಿಗೆ
ಈ ಹಿಂದೆ 3,826 ಕೋಟಿ ರೂಪಾಯಿಗೆ ಈ ಯೋಜನೆಯನ್ನು 'ಎಲ್ ಆ್ಯಂಡ್ ಟಿ' ಕೇಳಿತ್ತು. ಆದರೆ ಇಷ್ಟು ಮೊತ್ತಕ್ಕೆ ಗುತ್ತಿಗೆ ನೀಡಲು ಸರಕಾರ ನಿರಾಕರಿಸಿತ್ತು. ಇದೀಗ ರೂ. 2,500 ಕೋಟಿಗೆ ಯೋಜನೆಯ ಗುತ್ತಿಗೆ ನೀಡಲಾಗಿದೆ.

3,600 ಕೋಟಿ ರೂ. ಯೋಜನೆ
ಒಟ್ಟಾರೆ 3,600 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಇದರಲ್ಲಿ 1,100 ಕೋಟಿ ರೂಪಾಯಿಗಳನ್ನು ಎರಡನೇ ಹಂತದ ಯೋಜನೆಗೆ ಬಳಸಲಾಗುತ್ತದೆ. ತಾಂತ್ರಿಕ ಕಾರಣಗಳಿಗೆ ರಿಲಾಯನ್ಸ್ ಗುತ್ತಿಗೆ ಕಳೆದುಕೊಂಡಿದ್ದರೆ, ಆಫ್ಕಾನ್ಸ್ ಬರೋಬ್ಬರಿ ರೂ. 4779 ಕೋರಿ ರೂಪಾಯಿ ಬಿಡ್ ಮಾಡಿತ್ತು.

6.8 ಹೆಕ್ಟೇರ್ ಜಾಗದಲ್ಲಿ ಸ್ಮಾರಕ
ಯೋಜನೆ ಅನ್ವಯ ಮುಂಬೈನ ಮಲಬಾರ್ ಹಿಲ್ ಸಮೀಪ ಅರಬ್ಬೀ ಸಮುದ್ರದಲ್ಲಿ 6.8 ಹೆಕ್ಟೇರ್ ಜಾಗ ಸೃಷ್ಟಿಸಿ ಅಲ್ಲಿ ಪ್ರತಿಮೆ ಸ್ಥಾಪನೆ ಮಾಡಬೇಕಾಗಿದೆ. ಆರಂಭದಲ್ಲಿ 192 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ಮೀರಿಸಲು ಎತ್ತರವನ್ನು 210 ಅಡಿಗೆ ಏರಿಕೆ ಮಾಡಲಾಗಿದೆ.

ಅಪ್ರತಿಮ ಶಿವಾಜಿ ಸ್ಮಾರಕ
ಈ ಶಿವಾಜಿ ಸ್ಮಾರಕದಲ್ಲಿ ದೇವಸ್ಥಾನ, ವಸ್ತು ಸಂಗ್ರಹಾಲಯ, ಆಸ್ಪತ್ರೆ ಮತ್ರು ರಾಯಗಢ ಕೋಟೆ ಮಾದರಿಯ ಪ್ರವೇಶ ದ್ವಾರ ಮತ್ತು ಶಿವಾಜಿಯ ಜೀವನದ ಮುಖ್ಯ ಘಟ್ಟಗಳನ್ನು ತೋರಿಸುವ ಥಿಯೇಟರ್ ನಿರ್ಮಾಣವಾಗಲಿದೆ.
ಸ್ಮಾರಕದ ಇನ್ನೊಂದು ವಿಶೇಷವೆಂದರೆ 180 ಮೀಟರ್ ಎತ್ತರದವರೆಗೆ ಸ್ಮಾರಕದಲ್ಲಿ ಲಿಫ್ಟ್ ಕೂಡ ಅಳವಡಿಸಲಾಗುತ್ತದೆ.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications