Kolkata Earthquake: ಕೋಲ್ಕತ್ತಾದಲ್ಲಿ ಭೂಕಂಪನ: ಕಚೇರಿ, ಶಾಲೆಗಳಿಂದ ಹೊರಗೆ ಓಡಿಬಂದ ಜನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಭೂಕಂಪದ ತೀವ್ರ ಅನುಭವವಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದ್ದು, ನೆರೆಯ ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪದ ಕಂಪನಗಳು ನಗರವನ್ನು ಬೆಚ್ಚಿಬೀಳಿಸಿವೆ. ಭೂಮಿ ಕಂಪಿಸುತ್ತಿದ್ದಂತೆಯೇ ನಗರದ ಎತ್ತರದ ಕಟ್ಟಡಗಳು, ಐಟಿ ಕಚೇರಿಗಳು, ಮನೆಗಳು ಮತ್ತು ಶಾಲೆಗಳಿಂದ ಜನರು ಭಯಭೀತರಾಗಿ ಬೀದಿಗಿಳಿದರು. ಹಳೆಯ ಕಟ್ಟಡಗಳು ಹೆಚ್ಚಿರುವ ಪ್ರದೇಶಗಳಲ್ಲಿ ಜನದಟ್ಟಣೆ ಅಧಿಕವಾಗಿದ್ದು, ಸುರಕ್ಷಿತ ಸ್ಥಳಗಳಿಗಾಗಿ ಜನರು ತೆರೆದ ಮೈದಾನಗಳತ್ತ ಧಾವಿಸಿದರು.
ಮೊಬೈಲ್ಗಳಲ್ಲಿ ಕಂಪನದ ಅಲರ್ಟ್
ಭೂಕಂಪ ಸಂಭವಿಸುವ ಮುನ್ನವೇ ಹಲವರ ಮೊಬೈಲ್ ಫೋನ್ಗಳಿಗೆ 'ಅರ್ಥ್ಕ್ವೇಕ್ ಅಲರ್ಟ್' ಬಂದಿದ್ದು, ಜನರು ಈ ಸ್ಕ್ರೀನ್ಶಾಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆಯ ಮೇಲೆಯೇ ಕಂಪನದ ಅನುಭವವಾಗಿದೆ. ಇದರಿಂದ ಅವರು ಕೆಲಕಾಲ ಭಾಷಣ ನಿಲ್ಲಿಸಬೇಕಾಯಿತು.

ವೃದ್ಧೆಯೊಬ್ಬರು ಮಾತನಾಡಿ, "ಫ್ಯಾನ್ ಆಫ್ ಆಗಿದ್ದರೂ ಅದು ತಾನಾಗಿಯೇ ಜೋರಾಗಿ ಆಡಲು ಶುರು ಮಾಡಿತು, ಕುಳಿತಿದ್ದ ಚೇರ್ ಕೂಡ ಅಲುಗಾಡುತ್ತಿತ್ತು" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗಗನಚುಂಬಿ ಕಟ್ಟಡಗಳಲ್ಲಿ ಕಂಪನದ ತೀವ್ರತೆ ಹೆಚ್ಚಾಗಿ ಕಂಡುಬಂದಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಭೂಕಂಪ ನೋಡುತ್ತಿದ್ದೇನೆ, ಇಡೀ ನೆಲವೇ ಅಲುಗಾಡಿದಂತಾಯಿತು ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಭೂಕಂಪವು ಕೇವಲ ಕೆಲವು ಸೆಕೆಂಡುಗಳ ಕಾಲ ನಡೆದಿದ್ದರೂ, ಅದರ ಪ್ರಭಾವದಿಂದಾಗಿ ಪೀಠೋಪಕರಣಗಳು ಅಲುಗಾಡಿವೆ ಮತ್ತು ಕಿಟಕಿ ಗಾಜುಗಳು ಪಟಪಟನೆ ಸದ್ದು ಮಾಡಿವೆ. ಪ್ರಸ್ತುತ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಹಲವು ಬಹುಮಹಡಿ ಕಟ್ಟಡಗಳಿಂದ ಜನ ಹೊರಗೆ ಬಂದಿದ್ದಾರೆ.
ಭೂಕಂಪದ ತೀವ್ರತೆ 5.5 ದಾಖಲು
ಭೂಮಿಯ ಆಳದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಇಡೀ ನಗರವು ಕೆಲವು ಸೆಕೆಂಡುಗಳ ಕಾಲ ತಲ್ಲಣಿಸಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (NCS) ಪ್ರಕಾರ ಭೂಕಂಪದ ತೀವ್ರತೆ 5.5 ದಾಖಲಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಇದನ್ನು 5.3 ಎಂದು ದಾಖಲಿಸಿದೆ. ಪಶ್ಚಿಮ ಬಂಗಾಳದ ಟಾಕಿ (Taki) ನಗರದಿಂದ ಆಗ್ನೇಯಕ್ಕೆ ಸುಮಾರು 26 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪವು ಕೇವಲ 9.8 ಕಿ.ಮೀ ನಷ್ಟು ಆಳವಿಲ್ಲದ ಪ್ರದೇಶದಲ್ಲಿ ಸಂಭವಿಸಿದೆ. ಭೂಮಿಯ ಮೇಲ್ಪದರಕ್ಕೆ ಹತ್ತಿರದಲ್ಲಿ ಕಂಪನ ಉಂಟಾದ ಕಾರಣ, ಕೋಲ್ಕತ್ತಾ ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಇದರ ತೀವ್ರತೆ ಮತ್ತು ನಡುಕ ಅತಿ ಹೆಚ್ಚಾಗಿ ಕಂಡುಬಂದಿದೆ.
ಕಚೇರಿ ಮತ್ತು ಮನೆಗಳಲ್ಲಿದ್ದ ಜನರು ಬಲವಾದ ನಡುಕವನ್ನು ಅನುಭವಿಸುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡಗಳಿಂದ ಹೊರಬಂದು ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಯಾವುದೇ ಪ್ರಾಣಾಪಾಯ ಅಥವಾ ಕಟ್ಟಡಗಳು ಕುಸಿದಿರುವ ಬಗ್ಗೆ ಅಧಿಕೃತ ವರದಿಗಳು ಬಂದಿಲ್ಲ. ಆದರೆ ಹಳೆಯ ಕಟ್ಟಡಗಳ ಬಗ್ಗೆ ಆತಂಕ ಮುಂದುವರಿದಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications