'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?
ನವದೆಹಲಿ, ಮೇ 28: ವಿಶ್ವದ ಉದ್ಯಮ ಸಾಹಸಿ ಹಾಗೂ ಅತಿಶ್ರೀಮಂತ ವ್ಯಕ್ತಿ ಎನಿಸಿರುವ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ತಯಾರಿಸುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ತನ್ನ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಸರ್ವಿಸ್ಗೆ ಅವಕಾಶ ನೀಡುವವರೆಗೂ ಭಾರತದಲ್ಲಿ ಕಾರುಗಳ ತಯಾರಿಕೆ ಸಾಧ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಆಮದು ಕಾರುಗಳಿಗೆ ದುಬಾರಿ ಸುಂಕ ವಿಧಿಸಲಾಗುತ್ತದೆ. ಟೆಸ್ಲಾ ಕಾರುಗಳಿಗೂ ಅದೇ ಮಾದರಿಯಲ್ಲಿ ದುಬಾರಿ ತೆರಿಗೆ ಹಾಕಲಾಗುತ್ತಿದೆ. ಈ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಇಲಾನ್ ಮಸ್ಕ್ ಕೆಲ ಬಾರಿ ಮನವಿ ಮಾಡಿದ್ದರು. ಆದರೆ, ಭಾರತ ಸರಕಾರ ಇದಕ್ಕೆ ಒಪ್ಪಿಲ್ಲ. ಭಾರತದಲ್ಲಿ ನೀವು ವಾಹನ ತಯಾರಿಸಿದರೆ ತೆರಿಗೆ ರಹಿತವಾಗಿ ಮಾರಾಟ ಮಾಡಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
"ಚೀನಾದಲ್ಲಿ ತಯಾರಿಸಿದ ಟೆಸ್ಲಾ ಕಾರುಗಳನ್ನು ಮಸ್ಕ್ ಅವರು ಭಾರತದಲ್ಲಿ ಮಾರಲು ಬಂದರೆ ಅದು ಭಾರತಕ್ಕೆ ಸರಿಹೋಗುವುದಿಲ್ಲ" ಎಂದು ಗಡ್ಕರಿ ಕಡ್ಡಿತುಂಡು ಮಾಡಿದಂತೆ ಸ್ಪಷ್ಟವಾಗಿ ತಿಳಿಸಿದ್ದರು.

ಈ ವಿಚಾರದ ಬಗ್ಗೆ ಟ್ವೀಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಎಲಾನ್ ಮಸ್ಕ್ ತಮ್ಮ ಕಾರುಗಳ ಮಾರಾಟಕ್ಕೆ ಅವಕಾಶ ಇಲ್ಲದಿರುವ ಕಡೆ ತಯಾರಿಕಾ ಘಟಕ ಸ್ಥಾಪಿಸುವುದಿಲ್ಲ ಎಂದಿದ್ಧಾರೆ.
"ಕಾರುಗಳನ್ನು ಮೊದಲು ಮಾರಾಟ ಮಾಡಿ ಸರ್ವಿಸ್ ಮಾಡಲು ಎಲ್ಲಿ ಅವಕಾಶ ಕೊಡುವುದಿಲ್ಲವೋ ಅಲ್ಲಿ ಟೆಸ್ಲಾ ತಯಾರಿಕಾ ಘಟಕ ಸ್ಥಾಪನೆ ಮಾಡುವುದಿಲ್ಲ" ಎಂದು ಶುಕ್ರವಾರ ರಾತ್ರಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಆಮದು ಕಾರುಗಳಿಗೆ ದುಬಾರಿ ತೆರಿಗೆ ಇದೆ. 40 ಸಾವಿರ ಡಾಲರ್ (ಸುಮಾರು 30 ಲಕ್ಷ ರೂಪಾಯಿ) ಗಿಂತ ಹೆಚ್ಚು ಬೆಲೆಯ ಕಾರನ್ನು ಆಮದು ಮಾಡಿಕೊಂಡರೆ ಶೇ 100ರಷ್ಟು ತೆರಿಗೆ ಹಾಕಲಾಗುತ್ತದೆ. ಅಂದರೆ 30 ಲಕ್ಷ ರೂ ಮೂಲ ಬೆಲೆಯ ಕಾರು ಭಾರತಕ್ಕೆ ಆಮದಾಗಿ ಬಂದರೆ 60 ಲಕ್ಷ ರೂ ಆಗಿಹೋಗುತ್ತದೆ. ಇನ್ನು, 30 ಲಕ್ಷ ರೂಗಿಂತ ಕಡಿಮೆ ಬೆಲೆಯ ಕಾರುಗಳಿಗೆ ಶೇ. 60ರಷ್ಟು ಆಮದು ಸುಂಕ ಹೇರಲಾಗುತ್ತದೆ. ಹೀಗಾಗಿ, ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ ಮಾರುಕಟ್ಟೆ ಇಲ್ಲದಂತಾಗಿದೆ. ಇದು ಎಲಾನ್ ಮಸ್ಕ್ ಅವರಿಗೆ ಕಣ್ಣುರಿ ತಂದಿದೆ. ಹೀಗಾಗಿ, ಮೊದಲು ಮಾರಲು ಬಿಡಿ ಆನಂತರ ಇಲ್ಲಿಯೇ ತಯಾರಿಸುತ್ತೇವೆ ಎಂದು ಮಸ್ಕ್ ಜಗ್ಗಿದ್ದಾರೆ.
ಟೆಸ್ಲಾ ಭಾರತ ತಂಡಕ್ಕೆ ಬೇರೆ ಹೊಣೆ:
ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರು ತಯಾರಿಸುವ ಅಥವಾ ಮಾರಾಟ ಮಾಡುವ ನಿರೀಕ್ಷೆಯನ್ನೇ ಬಿಟ್ಟಂತೆ ಕಾಣುತ್ತಿದೆ. ಟೆಸ್ಲಾ ಮಾರಾಟಕ್ಕೆಂದು ಭಾರತದಲ್ಲಿ ನೇಮಕಾತಿ ಮಾಡಿಕೊಂಡಿದ್ದ ಉದ್ಯೋಗಿಗಳನ್ನು ಈಗ ಮಧ್ಯಪ್ರಾಚ್ಯ ಹಾಗೂ ವಿಸ್ತೃತ ಏಷ್ಯನ್ ಪೆಸಿಫಿಕ್ ಮಾರುಕಟ್ಟೆಗಳತ್ತ ಗಮನಹರಿಸಲು ಬಿಟ್ಟಿದ್ದಾರೆ. ಇದು ಭಾರತ ಸರಕಾರಕ್ಕೆ ಮಸ್ಕ್ ಕೊಟ್ಟಿರುವ ಪ್ರತಿಸವಾಲು ಎನ್ನಲಡ್ಡಿ ಇಲ್ಲ.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications