ಕೇರಳ ಪಟಾಕಿ ದುರಂತ, 5 ಜನರ ಬಂಧನ
ತಿರುವನಂತಪುರಂ, ಏಪ್ರಿಲ್ 11 : ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಗ್ನಿ ದುರಂತದಲ್ಲಿ 100ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. [ಕೇರಳ ದುರಂತದ ಚಿತ್ರಗಳು]
ಭಾನುವಾರ
ಮುಂಜಾನೆ
3.30ರ
ಸುಮಾರಿಗೆ
ನಡೆದ
ಅಗ್ನಿ
ದುರಂತದ
ಬಗ್ಗೆ
ತನಿಖೆ
ನಡೆಸುತ್ತಿರುವ
ಕೇರಳ
ಪೊಲೀಸರು,
ಪಟಾಕಿ
ತಂದಿದ್ದ
ಐವರನ್ನು
ಬಂಧಿಸಿದ್ದಾರೆ.
ದೇವಾಲಯದ
ಆಡಳಿತ
ಮಂಡಳಿಯ
ಇತರ
ಕೆಲವು
ಸದಸ್ಯರಿಗಾಗಿ
ಹುಡುಕಾಟ
ಮುಂದುವರೆದಿದೆ.
[ಪಟಾಕಿ
ಸಿಡಿದು
ಭಾರೀ
ಅಗ್ನಿ
ದುರಂತ,
105
ಸಾವು]
ಪಂಕಜಾಕ್ಷಿ ಅವರು ನೀಡಿದ ದೂರಿನ ಅನ್ವಯ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಆದರೆ, ರಾತ್ರೋರಾತ್ರಿ ನಿಷೇಧವನ್ನು ವಾಪಸ್ ಪಡೆಯಲಾಗಿತ್ತು. ನಿಷೇಧ ವಾಪಸ್ ಪಡೆದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂಕಜಾಕ್ಷಿ ಅವರ ಮನೆಗೂ ದುರಂತದಲ್ಲಿ ಹಾನಿಯಾಗಿದೆ. [ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]
ದೇವಾಲಯದಿಂದ
ಸುಮಾರು
50
ಮೀಟರ್
ದೂರದಲ್ಲಿ
ವಾಸವಾಗಿರುವ
80
ವರ್ಷದ
ಪಂಕಜಾಕ್ಷಿ
ಅವರು
ಕಳೆದ
4
ವರ್ಷಗಳಿಂದ
ಪಟಾಕಿ
ಸಿಡಿಸಬಾರದು
ಎಂದು
ದೂರು
ನೀಡುತ್ತಲೇ
ಇದ್ದಾರೆ.
ಈ
ಬಾರಿಯು
ಅವರು
ದೂರು
ಕೊಟ್ಟಿದ್ದರು.
ಆಗ
ಪಟಾಕಿ
ಸಿಡಿಸುವುದನ್ನು
ನಿಷೇಧಿಸಲಾಗಿತ್ತು.
[ಕೇರಳ
ಪಟಾಕಿ
ಅವಘಡದ
ಕರಾಳ
ಚಿತ್ರಗಳು]
ಆದರೆ, ಅಗ್ನಿ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ ಬಳಿಕ ನಿಷೇಧವನ್ನು ತೆರೆವುಗೊಳಿಸಲಾಗಿತ್ತು. ಪಟಾಕಿ ಸಿಡಿಸಲೆಂದೇ ಐದಕ್ಕೂ ಹೆಚ್ಚು ಜನರು ಆಗಮಿಸಿದ್ದರು.