ಕಾರ್ಗಿಲ್ ವಿಜಯ್ ದಿವಸ್: ಜೈ ಜವಾನ್ ...ಜೈ ಹಿಂದ್...
ಹದಿನೇಳು ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದ ಕುರಿತಾದ ಲೇಖನದ ಭಾಗ - 3. ಯುವ ಬ್ರಿಗೇಡ್ ಬೆಂಗಳೂರಿನ ರಾಷ್ಟ್ರೀಯ ಸೈನಿಕರ ಸ್ಮಾರಕ ಭವನದಲ್ಲಿ ಇಂದು (ಜುಲೈ 26) ಸಂಜೆ ಮಾಜಿ ಸೈನಿಕರ ಉಪಸ್ಥಿತಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಿ
ನಮ್ಮ ಸೈನಿಕರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬೇರೆ ಯಾರು ಕೂಡ ಮುಂದೆಂದಿಗೂ ಇಂತಹಾ ದುಸ್ಸಾಹಸಕ್ಕೆ ಇಳಿಯದಂತೆ ಮಾಡುತ್ತಾರೆ" ಎಂದು 1999ರ ಜೂನ್ 7ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ವಾಜಪೇಯಿ ಅವರು ಮಾಡಿದ ಐತಿಹಾಸಿಕ ಭಾಷಣ ಭಾರತೀಯ ಸೈನಿಕರ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿತು.
ಇದರಿಂದ ಪ್ರೇರಿತರಾದ ಸೈನಿಕರು ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯುತ್ತಾ ಹೋದರು. ಭೂಸೇನಾ ಪಡೆಯ 20,000 ಯೋಧರು, ವಾಯು ಸೇನೆಯ 10,000 ಯೋಧರು, ಪ್ಯಾರಾ ಮಿಲಿಟರಿ ಪಡೆಯವರು ಸಮುದ್ರ ಮಟ್ಟಕ್ಕಿಂತ 18 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ,ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ ಗಡಿಯಲ್ಲಿ ನಿಂತಿದ್ದ ಭಾರತೀಯ ಯೋಧರು ವೀರಾವೇಶದಿಂದ ವೈರಿ ಸೈನಿಕರ ರುಂಡ ಚೆಂಡಾಡಿದರು.

"ನಿಮಗೆ ಆಪತ್ತಾಗಬಹುದು, ಮಾತುಕತೆಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದ ಅಮೆರಿಕಾಕ್ಕೆ ವಾಜಪೇಯಿ ಚೆನ್ನಾಗಿಯೇ ಟಾಂಗ್ ನೀಡಿದ್ದರು, "ಪಾಕಿಸ್ತಾನಕ್ಕೆ ಬುದ್ಧಿಯನ್ನು ನೀವು ಹೇಳುತ್ತೀರೋ ಅಥವಾ ನಾವೇ ತಕ್ಕ ಬುದ್ಧಿ ಕಲಿಸಬೇಕೋ" ಎಂದು ಕೇಳಿದರು. ಇತ್ತ ನವಾಜ್ ಶರೀಫ್ ಅವರು ಭಾರತದ ಒತ್ತಡ ತಾಳಲಾರದೆ 1999 ಜುಲೈ 4ರಂದು ದೊಡ್ಡಣನ ವಾಷಿಂಗ್ಟನ್ ನಗರಕ್ಕೆ ಓಡಿದರು.
ಬಿಲ್ ಕ್ಲಿಂಟನ್ ಬಳಿ "ಹೇಗಾದರೂ ಮಾಡಿ ಯುದ್ಧ ನಿಲ್ಲಿಸಿ ಎಂದು ಅಂಗಲಾಚಿದರು. ಈ ಬಾರಿ ಜಾಣ್ಮೆ ವಹಿಸಿದ ಕ್ಲಿಂಟನ್ ಭಾರತದ ಭೂಪ್ರದೇಶದಿಂದ ಪಾಕ್ ಸೈನ್ಯವನ್ನು ಹಿಂಪಡೆಯುವಂತೆ ನವಾಜ್ ಶರೀಫ್ ಅವರಿಗೆ ತಾಕೀತು ಮಾಡಿದಾಗ ಶರೀಫ್ ಅವರದ್ದು ಇಂಗು ತಿಂದ ಮಂಗನಾದ ಪರಿಸ್ಥಿತಿ.
ಅದಾಗಲೇ ಭಾರತದ ವೀರ ಯೋಧರು ಶೇ.80 ಭಾಗವನ್ನೂ ವಾಪಸ್ ವಶಕ್ಕೆ ಪಡೆದಾಗಿತ್ತು. ಕೊನೆಯಲ್ಲಿ ಡ್ರಾಸ್ ಉಪವಲಯವನ್ನು ಪಾಕಿಸ್ತಾನಿ ಪಡೆಗಳು ತೆರವು ಮಾಡಿದ ಕೂಡಲೇ ಜುಲೈ 26ರಂದು ಹೋರಾಟ ಸ್ಥಗಿತಗೊಳಿಸುವ ಮೂಲಕ ವಿಜಯ ಪತಾಕೆ ಹಾರಿಸಿ ಗೆಲುವನ್ನು ಘೋಷಿಸಿತು.

ಇದರಲ್ಲಿ ಸುಮಾರು 527ಜನರು ಹುತಾತ್ಮರಾಗಿದ್ದಾರೆ. ಸಾವಿರಾರು ಯೋಧರು ಗಾಯಗೊಂಡಿದ್ದಾರೆ. ನಮ್ಮ ಭಾರತ ಮಾತೆಯನ್ನು ರಕ್ಷಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡ ವೀರಯೋಧರ ಋಣವನ್ನಂತು ತೀರಿಸಲು ಸಾಧ್ಯವಿಲ್ಲ, ಕನಿಷ್ಟ ಇವರುಗಳ ತ್ಯಾಗ ಮತ್ತು ಸಮರ್ಪಣಾ ಭಾಗ್ಯವನ್ನು ನೆನೆಯುವುದು ಮತ್ತೆ ಸಮಾಜಕ್ಕೆ ನೆನೆಪಿಸುವುದು ನಮ್ಮ ಕರ್ತವ್ಯ.
ಹೀಗಾಗಿಯೇ ಈ ದಿನವನ್ನು ಮತ್ತು ಐತಿಹಾಸಿಕ ಗೆಲುವನ್ನು, ಸೈನಿಕರ ತ್ಯಾಗ ಬಲಿದಾನಗಳನ್ನು ನೆನೆದು ಗೌರವಿಸಲು 'ಕಾರ್ಗಿಲ್ ವಿಜಯ ದಿವಸ್' ಎಂಬ ಶಿರ್ಷಿಕೆಯಲ್ಲಿ ದೇಶದ ವಿವಿದಡೆಯಲ್ಲಿ ಆಚರಿಸಲಾಗುತ್ತದೆ. ದೇಶದ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಪ್ರಧಾನಮಂತ್ರಿಗಳು ಸಹ ಕಾರ್ಗಿಲ್ ಹೀರೋಗಳಿಗೆ ಗೌರವ ಸಮರ್ಪಿಸುತ್ತಾರೆ.
ವಿವಿಧ ಸಂಘಟನೆಗಳು ಕೂಡ ಸ್ಥಳೀಯವಾಗಿ ಆಚರಿಸುತ್ತಾರೆ. ಹಾಗೆಯೇ ಯೋಧರಿಗಾಗಿಯೇ 'ಮಹಾ ರಕ್ಷಕ್" ಎಂಬ ವಿಭಾಗವನ್ನು ಹೊಂದಿರುವ ಯುವ ಬ್ರಿಗೇಡ್ ಬೆಂಗಳೂರಿನ ರಾಷ್ಟ್ರೀಯ ಸೈನಿಕರ ಸ್ಮಾರಕ ಭವನದಲ್ಲಿ ಇಂದು (ಜುಲೈ 26) ಸಂಜೆ ಮಾಜಿ ಸೈನಿಕರ ಉಪಸ್ಥಿತಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications