17ವರ್ಷದ ಹಿಂದಿನ ಯುದ್ದದ ಮೆಲುಕು: ಪಾಕಿಗೆ ಬುದ್ದಿ ಕಲಿಸಿದ ಯೋಧರು
ಹದಿನೇಳು ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದ ಕುರಿತಾದ ಲೇಖನ - 2. ಯೋಧರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಿಂದಿರುಗಿಸುವಂತಹ ಅಮಾನವೀಯ ಕಾರ್ಯ ನಡೆಸಿದ್ದ ಪಾಕ್.
ನಮ್ಮವರದೇ ಆದ ಎಷ್ಟೊ ಬಂಕರುಗಳು ಅವರ ಸಹಾಯಕ್ಕೆ ಬಂದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ತಾನ, ಭಾರತೀಯರ ಮೇಲೆ ದಾಳಿ ಮಾಡಲು ಸನ್ನದ್ಧವಾಗಿತ್ತು. ಅಲ್ಲಿಯವರೆಗೂ ಇದರ ಅರಿವೇ ಇಲ್ಲದ ಭಾರತೀಯ ಸೇನೆಗೆ ತಶಿ ನಂಗ್ಯಾಲ್ ಎಂಬ ಕುರಿ ಕಾಯುವವನ ಮೂಲಕ ಪಾಕ್ ಸೇನೆ ಬೆಟ್ಟದ ಮೇಲೆ ಸ್ಥಾಪಿತವಾಗಿರುವ ಮಾಹಿತಿ ತಿಳಿಯಿತು.
ತಕ್ಷಣವೇ ಅಂದರೆ ಮೇ ಎರಡನೇ ವಾರದಲ್ಲಿ ಕ್ಯಾ.ಸೌರಭ್ ಕಾಲಿಯಾ ನೇತೃತ್ವದಲ್ಲಿ ಐದು ಯೋಧರ ತಂಡ ಅಲ್ಲಿನ ಪರಿಸ್ಥಿತಿ ಅವಲೋಕನ ಮತ್ತು ವರದಿ ನೀಡುವುದಕ್ಕಾಗಿ ಆ ಪ್ರದೇಶಕ್ಕೆ ತೆರಳಲು ಸೇನೆಯಿಂದ ನಿಯೋಜಿಸಲ್ಪಟ್ಟರು. ಅವರಿಗೂ ಶತ್ರು ಪಡೆಯ ಗಾತ್ರ ಮತ್ತು ಶಕ್ತಿಯ ಕುರಿತು ಸ್ವಲ್ಪವೂ ಅಂದಾಜಿರಲಿಲ್ಲ. ಮುಂದಾಲೋಚನೆಯಿಲ್ಲದೆ ಗುಡ್ಡ ಹತ್ತಿದ ನಮ್ಮ ವೀರ ಯೋಧರು ವೈರಿಗಳ ಬಳಿ ಸಿಲುಕಿ ಕ್ರೌರ್ಯಕ್ಕೆ ಒಳಗಾದರು.
ಅಷ್ಟೇ ಅಲ್ಲ ಅವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಿಂದಿರುಗಿಸುವಂತಹ ಅಮಾನವೀಯ ಕಾರ್ಯವನ್ನು ಪಾಕಿಗಳು ಎಸಗಿದರು. ಆಗಲೇ ನಮ್ಮವರಿಗೆ ಪಾಕ್ ಅತಿಕ್ರಮಣದ ತೀವ್ರತೆ ಅರಿವಿಗೆ ಬಂದಿದ್ದು. ಪಾಕಿಗಳು ಸುಮಾರು 160 ಕಿಲೋಮೀಟರುಗಳಷ್ಟು ಪ್ರದೇಶವನ್ನು ಆಕ್ರಮಿಸಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಂದಿನ NDA ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ವಾಜಪೇಯಿ ಅವರು 'ಆಪರೇಷನ್ ವಿಜಯ್' ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುವಂತೆ ಸೈನ್ಯಕ್ಕೆ ಸೂಚಿಸಿದರು. ಸೇನಾ ಚಟುವಟಿಕೆಗಳು ವೇಗ ಪಡೆದುಕೊಂಡವು. ಆದರೆ ಅಂತಹ ಪ್ರತಿಕೂಲ ವಾತಾವರಣದಲ್ಲಿ ಹೋರಾಟ ಮಾಡಲು ನನ್ನ ದೇಶದ ಸೈನಿಕರ ಬಳಿ ಶಸ್ತ್ರಾಸ್ತ್ರಗಳೇ ಸರಿಯಾಗಿ ಇರಲಿಲ್ಲ.
ಅಷ್ಟೇ ಏಕೆ, ಮಂಜಿನಿಂದ ರಕ್ಷಣೆ ಕೊಡುವ ದಿರಿಸುಗಳಾಗಲಿ, ಬೂಟು,ಕನ್ನಡಕಗಳಾಗಲಿ ಇಲ್ಲವೇ ಇಲ್ಲ. ಕೆಲವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಬಿಡಿ ಸುಮ್ಮನೆ ಏಕೆ ರಗಳೆ ಎಂದು ರಗಳೆ ಮಾಡಿದರು. ತಮ್ಮದೇ ದೇಶದ ಕೊರಳನ್ನು ಪಕ್ಕದವರು ಹಿಸುಕಲು ಪ್ರಯತ್ನಿಸುತ್ತಿದ್ದಾರೆಂಬುದನ್ನು ತಿಳಿದುಕೊಳ್ಳದೇ ವಿರೋಧ ಪಕ್ಷದವರು ಸಹಜವಾಗಿ ಆಡಳಿತ ಪಕ್ಷಗಳ ಮೇಲೆ ಗೂಬೆ ಕೂರಿಸಿದವು.
ಹಲವು ಮದ್ದುಗುಂಡುಗಳು ನಿಷ್ಕ್ರಿಯವಾಗಿದ್ದವು. ಆದರೂ ನಮ್ಮ ಸೈನಿಕರು ಎದೆ ಗುಂದಲಿಲ್ಲ. ತಾಯಿ ಭಾರತಿಯ ರಕ್ಷಣೆಯೊಂದೇ ಅವರ ಮನದಲ್ಲಿದ್ದುದು. ಪರಿಸ್ಥಿತಿ ಹೇಗಿತ್ತೆಂದರೆ ಇರುವಷ್ಟು ಮದ್ದುಗುಂಡುಗಳನ್ನೇ ಎಲ್ಲ ಪ್ರದೇಶಗಳಿಗೆ ಹೊಂದಿಸಿ ಹಂಚಿಕೊಳ್ಳಬೇಕಿತ್ತು. ಅಂತೂ ಕಾರ್ಯಾಚರಣೆ ಪ್ರಾರಂಭವಾಯಿತು.

ಮೊದಲಿಗೆ ತೊಲೊಲಿಂಗ್ ಬೆಟ್ಟವನ್ನು ವಶಪಡಿಸಿಕೊಳ್ಳಬೇಕಿತ್ತು. ನಮ್ಮ ಸೈನಿಕರು ಇದ್ದಿದ್ದು ಬೆಟ್ಟದ ಬುಡದಲ್ಲಿ. ಬೋಫೋರ್ಸುಗಳನ್ನು ನಿಲ್ಲಿಸಿಕೊಂಡು ಸಜ್ಜಾದರು. ಮೇಲೆ ಕುಳಿತ ಶತ್ರು ಪಾಳಯದವರಿಗೆ ಇದೆಲ್ಲವೂ ಕಾಣುತ್ತಿತ್ತು. ಅತ್ತ ಕಡೆಯಿಂದ ಶೆಲ್ ಗಳ ಮೂಲಕ ಮಾರಣಾಂತಿಕ ದಾಳಿ ನಡೆಯುತ್ತಲೇ ಇದೆ. ಉಹುಂ ನಮ್ಮ ಸೈನಿಕ ಧೃತಿಗೆಡಲಿಲ್ಲ.
ಟೋಲೋಲಿಂಗ್ ಯಾಕಿಷ್ಟು ಮಹತ್ವದ್ದು ಎಂದರೆ, ಇದು ರಾ.ಹೆ. 1ರ ಶಿಖರದ ಮೇಲೆ ಇದೆ. ಇಲ್ಲಿ ಕುಳಿತರೆ ಸುಮಾರು 200 ಕಿಮೀ ವ್ಯಾಪ್ತಿಯನ್ನು ಕಂಟ್ರೋಲ್ ಮಾಡವಂತಹ ಸ್ಥಳ. ಆ ಪ್ರದೇಶದಲ್ಲಿ ಅದೊಂದೇ ರಸ್ತೆ ಇದ್ದ ಕಾರಣ, ಆ ದಾರಿಯಲ್ಲಿ ಹೋದ ಸೈನಿಕರೆಲ್ಲರೂ ಶವವಾಗಿ ಮರಳಿದ್ದರು.
ಹಾಗಾಗಿ ಸೈನ್ಯ ಅಲ್ಲಿಂದ ಮುಂದುವರೆಯಬೇಕಿದ್ದರೆ, ತೋಲೊಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯತೆಯಾಯಿತು. ನಮ್ಮ ಸೇನೆಯ ಕಾರ್ಯಾಚರಣೆಗೆ ವಾಯುಸೇನೆಯೂ ಅದ್ಭುತವಾಗಿ ಬೆಂಬಲಿಸಿತು. ಆಪರೇಷನ್ ಸಫೇದ್ ಸಾಗರ್ ಹೆಸರಿನಲ್ಲಿ ವಾಯುಪಡೆ ಹಾರುತ್ತಾ ಗುಂಡುಗಳ ಮಳೆಸುರಿಸಿತು. 2 ರಜಪೂತಾನಾ ರೈಫಲ್ಸ್ ಕೊನೆಗೂ ಜೂನ್ 12ರಂದು ತೊಲೋಲಿಂಗನ್ನು ಮರು ವಶಪಡಿಸಿಕೊಂಡಿತು.
ನಂತರದ್ದು ಟೈಗರ್ ಹಿಲ್ - ಪಾಯಿಂಟ್ 4150. ಇಲ್ಲಿ ಎರಡೂ ಪಡೆ ಸಾಕಷ್ಟು ಸಾವು ನೋವು ಅನುಭವಿಸಿತು. ಅಂತಿಮವಾಗಿ ಟೈಗರ್ ಹಿಲ್ ಭಾರತದ ಕೈವಶವಾಗುವ ವೇಳೆ ಭಾರತೀಯ ಸೈನ್ಯ ಹತ್ತು ಪಾಕಿ ಸೈನಿಕರ ಬಲಿ ಪಡೆದಿತ್ತು.
"ನಮ್ಮ ಸೇನಾಪಡೆಗಳ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ. ಮುಂದಿನ ಪುಟ ಕ್ಲಿಕ್ಕಿಸಿ..
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications