ನೌಕಾಪಡೆಗೆ ಹೊಸದಾಗಿ ಐಎನ್ಎಸ್ ವೇಲಾ ಜಲಾಂತರ್ಗಾಮಿ ಸೇರ್ಪಡೆ
ಮುಂಬೈ, ನವೆಂಬರ್ 25: ಭಾರತೀಯ ನೌಕಾಪಡೆಗೆ ಹೊಸದಾಗಿ ಐಎನ್ಎಸ್ ವೇಲಾ ಜಲಾಂತರ್ಗಾಮಿ ಸೇರ್ಪಡೆಯಾಗಿದೆ.
ಇದು ಕಲ್ವರಿ -ವರ್ಗದ ಜಲಾಂತರ್ಗಾಮಿ ಯೋಜನೆ 75ರ ಅಡಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಆರು ಜಲಾಂತರ್ಗಾಮಿಗಳ ಪೈಕಿ ನಾಲ್ಕನೇಯದಾಗಿದೆ.ನೌಕಾದಳ ಮುಖ್ಯಸ್ತ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಈ ಜಲಾಂತರ್ಗಾಮಿಯನ್ನು ಚಾಲನೆಗೊಳಿಸಲಾಯಿತು.
ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್ ಆರಂಭ: ಇಲ್ಲಿದೆ ಮಾಹಿತಿ
ಕಳೆದ ಒಂದು ವಾರಕ್ಕೂ ಕಡಿಮೆ ಅವಯಲ್ಲಿ ಇದು ಭಾರತೀಯ ನೌಕಾದಳಕ್ಕೆ 2ನೇ ಬಾರಿ ಜಲಾಂತರ್ಗಾಮಿಯ ಸೇರ್ಪಡೆಯಾಗಿದೆ.ನವೆಂಬರ್ 21ರಂದು ನೌಕಾದಳಕ್ಕೆ ಐಎನ್ಎಸ್ ವಿಶಾಖಪಟ್ಟಣಂ ಸಮರ ನೌಕೆ ಸೇರಿತ್ತು.
ಭಾರತೀಯ ನೌಕಾಪಡೆಯು ಗುರುವಾರ ಮುಂಬೈನ ನೌಕಾನೆಲೆಯಲ್ಲಿ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ INS ವೇಲಾವನ್ನು ನಿಯೋಜಿಸಿದೆ. INS ವೇಲಾ ಪ್ರಾಜೆಕ್ಟ್ 75 ರ ಅಡಿಯಲ್ಲಿ ನಿಯೋಜಿಸಲಾದ ನಾಲ್ಕನೇ ಸ್ಕಾರ್ಪೀನ್-ವರ್ಗದ ಜಲಾಂತರ್ಗಾಮಿಯಾಗಿದೆ.
ಇದನ್ನು Mazagon Dock Shipbuilders Ltd ನಿಂದ M/s ನೇವಲ್ ಗ್ರೂಪ್ ಆಫ್ ಫ್ರಾನ್ಸ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಒಂದೇ ವಾರದ ಅಂತರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವ ಎರಡನೇ ನೌಕೆ ಇದಾಗಿದೆ. ನವೆಂಬರ್ 21ರಂದು ನೌಕಾಪಡೆಯು ಯುದ್ಧನೌಕೆ ಐಎನ್ಎಸ್ ವಿಶಾಖಪಟ್ಟಣಂವನ್ನು ಸೇರ್ಪಡೆ ಮಾಡಿಕೊಂಡಿತ್ತು.
INS ವಿಶಾಖಪಟ್ಟಣಂ 75 ಪ್ರತಿಶತ ಸ್ವದೇಶಿ ಯುದ್ಧ ನೌಕೆ : INS ವಿಶಾಖಪಟ್ಟಣಂ (INS Visakhapatnam)ಅನ್ನು ಮುಂಬೈನ ಮಜಗಾನ್ ಡಾಕ್ಯಾರ್ಡ್ನಲ್ಲಿ ನಿರ್ಮಿಸಲಾಗಿದೆ. ಈ ಯುದ್ಧನೌಕೆಯ (Warship) ಪ್ರಮುಖ ವಿಷಯವೆಂದರೆ ಇದರ 75 ಪ್ರತಿಶತ ಭಾಗವು ಸಂಪೂರ್ಣವಾಗಿ ಸ್ವದೇಶಿಯಾಗಿದೆ. ಮುಂಬರುವ ವರ್ಷಗಳಲ್ಲಿ ಈ ವರ್ಗದ ಇನ್ನೂ ಮೂರು ಯುದ್ಧನೌಕೆಗಳನ್ನು 35,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆ: INS ವಿಶಾಖಪಟ್ಟಣಂ 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಇದರ ತೂಕ 7,400 ಟನ್ ಆಗಿದೆ. ಈ ಯುದ್ಧನೌಕೆ ಅತ್ಯಂತ ಆಧುನಿಕವಾಗಿದೆ. ಇದು ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆಯಾಗಿದ್ದು, ಇದರಲ್ಲಿ 50 ಅಧಿಕಾರಿಗಳು ಸೇರಿದಂತೆ ಸುಮಾರು 300 ಸೈನಿಕರನ್ನು ನಿಯೋಜಿಸಬಹುದಾಗಿದೆ.
INS ವಿಶಾಖಪಟ್ಟಣಂ ಶತ್ರುಗಳ ಕಾಲ : ಹಲವು ವರ್ಷಗಳ ಕಾಲ ವಿವಿಧ ಪ್ರಯೋಗಗಳ ನಂತರ, ಶತ್ರು ವಿಧ್ವಂಸಕ ಐಎನ್ಎಸ್ ವಿಶಾಖಪಟ್ಟಣಂ ಈಗ ನೌಕಾಪಡೆಗೆ ಸೇರಲು ಸಿದ್ಧವಾಗಿದೆ. ಈ ಯುದ್ಧನೌಕೆಯಲ್ಲಿ ಹಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಐಎನ್ಎಸ್ ವಿಶಾಖಪಟ್ಟಣಂನಲ್ಲಿ ಸ್ವದೇಶಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಲಾಗಿದೆ. ಅದರ ಮೇಲೆ ನಿಯೋಜಿಸಲಾದ ಕ್ಷಿಪಣಿಯು 70 ಕಿಮೀ ದೂರದಲ್ಲಿ ಹಾರುವ ಶತ್ರು ಯುದ್ಧ ವಿಮಾನವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಐಎನ್ ಎಸ್ ವಿಶಾಖಪಟ್ಟಣಂ ಪರಮಾಣು, ಜೈವಿಕ ಮತ್ತು ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುವುದಲ್ಲದೆ, ಸಮುದ್ರದಲ್ಲಿ ಒಂದು ಕಿಲೋಮೀಟರ್ ಆಳದಲ್ಲಿ ಜಲಾಂತರ್ಗಾಮಿ ನೌಕೆಗಳಲ್ಲಿ ಅಡಗಿರುವ ಶತ್ರುಗಳನ್ನು ಸಮಾಧಿ ಮಾಡಬಲ್ಲದು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಐಎನ್ಎಸ್ ವಿಶಾಖಪಟ್ಟಣಂ ಆಗಮನವು ನೌಕಾಪಡೆಯನ್ನು ವ್ಯೂಹಾತ್ಮಕವಾಗಿ ಬಲಪಡಿಸುತ್ತದೆ.
ಈ ಕಾರ್ಯಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅಡ್ಮಿರಲ್ ಸಿಂಗ್, ಐಎನ್ಎಸ್ ವೇಲಾ ಜಲಾಂತರ್ಗಾಮಿ ಕಾರ್ಯಾಚರಣೆಯ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ಕೈಗೊಳ್ಳಬಹುದು ಎಂದು ಹೇಳಿದರು.
"ಇಂದಿನ ಕ್ರಿಯಾತ್ಮಕ ಮತ್ತು ಸಂಕೀರ್ಣ ಭದ್ರತಾ ಪರಿಸ್ಥಿತಿಯನ್ನು ಗಮನಿಸಿದರೆ, ಅದರ ಸಾಮರ್ಥ್ಯ ಮತ್ತು ಫೈರ್ಪವರ್ ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ" ಎಂದು ಸಿಂಗ್ ಹೇಳಿದ್ದಾರೆ.