ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಿ!
ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ.
ರಾಜಸ್ಥಾನ, ಮೇ 23: ರಕ್ಕಸರನ್ನೆಲ್ಲ ಒಂದೇ ಏಟಿಗೆ ಹೊಡೆದುರುಳಿಸುವ ಸುಂದರ ರಾಜಕುಮಾರ, ಉದ್ದ ಜಡೆಯ ಚೆಂದದ ರಾಜಕುಮಾರಿ, ಗಿಳಿಯ ಕೊರಳೊಳಗಿರುವ ರಾಕ್ಷಸನ ಪ್ರಾಣ... ಎಂಬೆಲ್ಲ ಸುಂದರ ಕಲ್ಪನೆಯನ್ನು ಹೊತ್ತು ತರುತ್ತಿದ್ದ ಅಜ್ಜಿಯ ಕತೆಗೆ ಆಧುನಿಕ ಕಾಲದಲ್ಲಿ ಅಜ್ಜಿಯಂತೇ ವೃದ್ಧಾಪ್ಯ ಆವರಿಸಿದೆ!
ವಿಡಿಯೋ ಗೇಮ್, ಕಾಮಿಕ್ಸ್ ಗಳು, ಕಾರ್ಟೂನ್ ಚಾನೆಲ್ ಗಳು ಮಕ್ಕಳ ಕಲ್ಪನಾ ಶಕ್ತಿಯನ್ನೇ ಕಸಿದಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೀಗ ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸಿ, ಕ್ರಿಯಾಶೀಲತೆಯನ್ನು ವೃದ್ಧಿಸುವುದಕ್ಕಾಗಿ ರಾಜಸ್ಥಾನ ಸರ್ಕಾರ ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದೆ.[ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ]

ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ. ಆಧುನಿಕ ಕಾಲದ ಭರಾಟೆಯಲ್ಲಿ ಮಕ್ಕಳಲ್ಲಿನ ಮುಗ್ಧತೆ, ಕ್ರಿಯಾಶೀಲತೆ, ಕಲ್ಪನಾ ಶಕ್ತಿ ಮಾಯವಾಗುತ್ತಿರುವ ಕಾರಣ ಇಂಥದೊಂದು ಯೋಜನೆಯನ್ನು ಪರಿಚಯಿಸಿ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ಒದಗಿಸುವ ಉದ್ದೇಶ ಇಲ್ಲಿನ ಸರ್ಕಾರದ್ದು.[ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2]
ಮಕ್ಕಳ ವ್ಯಕ್ತಿತ್ವ ವಿಕಸನ, ಮನರಂಜನೆ, ಬುದ್ಧಿವಿಕಾಸದ ಉದ್ದೇಶದಿಂದ ಜಾರಿಯಾದ ಬಾಲ ಸುಭಾಸ್ ಯೋಜನೆಯ ಅಡಿಯಲ್ಲಿ ಪ್ರತಿ ಶನಿವಾರ ದ ಒಂದು ಅವಧಿಯಲ್ಲಿ ಇಲ್ಲಿನ ಶಾಲೆಗಳಲ್ಲಿ ಓದುವ ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ಕಥೆ ಹೇಳಲಾಗುತ್ತದೆ. ಈ ಶಾಲೆಗಳಲ್ಲಿ ಓದುವ ಮಕ್ಕಳ ಅಜ್ಜಿಯರೇ ಶಾಲೆಗೆ ಬಂದು ಕತೆ ಹೇಳಬಹುದು.
ಅಕಸ್ಮಾತ್ ಅಜ್ಜಿಯರು ಬಾರದೆ ಇದ್ದಲ್ಲಿ ಶಾಲೆಯ ಹಿರಿಯ ಶಿಕ್ಷಕರು ಕಥೆಹೇಳಬೇಕಾಗುತ್ತದೆ ಎಂದು ಇಲ್ಲಿನ ಮಾಧ್ಯಮಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಬಿತ್ತುವಂಥ ನೀತಿ ಕತೆಗಳು, ಮನರಂಜನೆ ನೀಡುವ ಕತೆಗಳು, ಅವರ ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುವ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications