ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಿ!
ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ.
ರಾಜಸ್ಥಾನ, ಮೇ 23: ರಕ್ಕಸರನ್ನೆಲ್ಲ ಒಂದೇ ಏಟಿಗೆ ಹೊಡೆದುರುಳಿಸುವ ಸುಂದರ ರಾಜಕುಮಾರ, ಉದ್ದ ಜಡೆಯ ಚೆಂದದ ರಾಜಕುಮಾರಿ, ಗಿಳಿಯ ಕೊರಳೊಳಗಿರುವ ರಾಕ್ಷಸನ ಪ್ರಾಣ... ಎಂಬೆಲ್ಲ ಸುಂದರ ಕಲ್ಪನೆಯನ್ನು ಹೊತ್ತು ತರುತ್ತಿದ್ದ ಅಜ್ಜಿಯ ಕತೆಗೆ ಆಧುನಿಕ ಕಾಲದಲ್ಲಿ ಅಜ್ಜಿಯಂತೇ ವೃದ್ಧಾಪ್ಯ ಆವರಿಸಿದೆ!
ವಿಡಿಯೋ ಗೇಮ್, ಕಾಮಿಕ್ಸ್ ಗಳು, ಕಾರ್ಟೂನ್ ಚಾನೆಲ್ ಗಳು ಮಕ್ಕಳ ಕಲ್ಪನಾ ಶಕ್ತಿಯನ್ನೇ ಕಸಿದಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೀಗ ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸಿ, ಕ್ರಿಯಾಶೀಲತೆಯನ್ನು ವೃದ್ಧಿಸುವುದಕ್ಕಾಗಿ ರಾಜಸ್ಥಾನ ಸರ್ಕಾರ ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದೆ.[ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ]

ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ. ಆಧುನಿಕ ಕಾಲದ ಭರಾಟೆಯಲ್ಲಿ ಮಕ್ಕಳಲ್ಲಿನ ಮುಗ್ಧತೆ, ಕ್ರಿಯಾಶೀಲತೆ, ಕಲ್ಪನಾ ಶಕ್ತಿ ಮಾಯವಾಗುತ್ತಿರುವ ಕಾರಣ ಇಂಥದೊಂದು ಯೋಜನೆಯನ್ನು ಪರಿಚಯಿಸಿ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ಒದಗಿಸುವ ಉದ್ದೇಶ ಇಲ್ಲಿನ ಸರ್ಕಾರದ್ದು.[ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2]
ಮಕ್ಕಳ ವ್ಯಕ್ತಿತ್ವ ವಿಕಸನ, ಮನರಂಜನೆ, ಬುದ್ಧಿವಿಕಾಸದ ಉದ್ದೇಶದಿಂದ ಜಾರಿಯಾದ ಬಾಲ ಸುಭಾಸ್ ಯೋಜನೆಯ ಅಡಿಯಲ್ಲಿ ಪ್ರತಿ ಶನಿವಾರ ದ ಒಂದು ಅವಧಿಯಲ್ಲಿ ಇಲ್ಲಿನ ಶಾಲೆಗಳಲ್ಲಿ ಓದುವ ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ಕಥೆ ಹೇಳಲಾಗುತ್ತದೆ. ಈ ಶಾಲೆಗಳಲ್ಲಿ ಓದುವ ಮಕ್ಕಳ ಅಜ್ಜಿಯರೇ ಶಾಲೆಗೆ ಬಂದು ಕತೆ ಹೇಳಬಹುದು.
ಅಕಸ್ಮಾತ್ ಅಜ್ಜಿಯರು ಬಾರದೆ ಇದ್ದಲ್ಲಿ ಶಾಲೆಯ ಹಿರಿಯ ಶಿಕ್ಷಕರು ಕಥೆಹೇಳಬೇಕಾಗುತ್ತದೆ ಎಂದು ಇಲ್ಲಿನ ಮಾಧ್ಯಮಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಬಿತ್ತುವಂಥ ನೀತಿ ಕತೆಗಳು, ಮನರಂಜನೆ ನೀಡುವ ಕತೆಗಳು, ಅವರ ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುವ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications