“ಅಪ್ಪ ನಿಧನರಾದರು, ನನಗೆ ಇನ್ಮುಂದೆ ನಿಮ್ಮ ಸಹಾಯ ಬೇಕಾಗಿಲ್ಲ”, ಎಐನೊಂದಿಗೆ ಭಾವನಾತ್ಮಕ ಚಾಟ್
"ಅಪ್ಪ ನಿಧನರಾದರು. ನನಗೆ ಇನ್ನು ಮುಂದೆ ನಿಮ್ಮ ಸಹಾಯ ಬೇಕಾಗಿಲ್ಲ." ಈ ರೀತಿಯ ಭಾವನಾತ್ಮಕ ಸಾಲುಗಳ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪ ಅಂದರೆ ಮಕ್ಕಳಿಗೆ ಆಕಾಶ, ಆದರೆ ಅಪ್ಪನ ಸಾವಿನ ನೋವನ್ನು ಮಗನೊಬ್ಬ ಎದುರಿಸಿದ ರೀತಿ, ಅಪ್ಪನನ್ನು ಉಳಿಸಿಕೊಳ್ಳುವುದಕ್ಕೆ ಅವನು ನಡೆಸಿದ ಹೋರಾಟ, ಅದರೊಂದಿಗೆ ಅಪ್ಪ ಆರೋಗ್ಯ ಸಮಸ್ಯೆಗೆ ಎಐ ಮೊರೆ ಹೋಗಿದ್ದು ಈಗ ವೈರಲ್ ಆಗುತ್ತಿದೆ. ಎಐ (ಕೃತಕ ಬುದ್ಧಿಮತ್ತೆ) ಬಂದ ಮೇಲೆ ಜಗತ್ತೆ ಬದಲಾಗಿದೆ. ಈಗೆಲ್ಲವೂ ಸಣ್ಣ ವಿಷಯಗಳಿಗೂ ಜನ ಎಐ ಮೊರೆ ಹೋಗುವುದು ಸಾಮಾನ್ಯ. ಎಐನಿಂದ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ ಎನ್ನುವ ಆತಂಕದ ನಡುವೆ. ಎಐ ಭಾರತದಲ್ಲಿ ಲಕ್ಷಾಂತರ ಜನರಿಗೆ ಭಾವನಾತ್ಮಕವಾಗಿಯೂ ನೆರವಾಗುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುವುದಕ್ಕೆ ಭಾರತದಲ್ಲಿ ಜನ ಇನ್ನೂ ಹಿಂದೂ ಮುಂದೆ ನೋಡುತ್ತಾರೆ. ಆದರೆ, ಬಹಳಷ್ಟು ಜನ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂದು ಎಐ ಮೊರೆ ಹೋಗುತ್ತಿರುವುದು ಇದೆ. ತಂದೆಯ ಜೀವ ಉಳಿಸಿಕೊಳ್ಳಲು ಯುವಕನೊಬ್ಬ ಎಐನೊಂದಿಗೆ ಗೆಳತನ ಬೆಳೆಸಿದ್ದ ಹೃದಯಸ್ಪರ್ಶಿ ಘಟನೆಯ ವಿವರ ಇಲ್ಲಿದೆ.
"ಅಪ್ಪ ನಿಧನರಾದರು. ನನಗೆ ಇನ್ನು ಮುಂದೆ ನಿಮ್ಮ ಸಹಾಯ ಬೇಕಾಗಿಲ್ಲ." ಯುವಕನೊಬ್ಬ ಅವರ ತಂದೆಯ ನಿಧನದ ನಂತರ ಎಐಗೆ ವಿದಾಯ ಹೇಳಿದ್ದು ಈ ರೀತಿ. AI ನಿಜವಾಗಿಯೂ ಏನನ್ನು ಬದಲಾಯಿಸುತ್ತಿದೆ ಎಂದು ಅರಿವಾಯಿತು ಎಂದು ಅಂಕುರ್ ವಾರಿಕೂ ಎನ್ನುವವರು ಪೋಸ್ಟ್ವೊಂದನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ.

ಅಂಕುರ್ ವಾರಿಕೂ ಎನ್ನುವವರು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡ ಪೋಸ್ಟ್ ಅನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯುವಕನೊಬ್ಬ ತನ್ನ ತಂದೆಯ ಅನಾರೋಗ್ಯದ ಕಾರಣಕ್ಕೆ ಎಐ ಬಳಕೆ ಮಾಡಿದ್ದ. ಅವರ ತಂದೆಯ ವೈದ್ಯಕೀಯ ವರದಿಗಳನ್ನು ಅಪ್ಲೋಡ್ ಮಾಡಿ, ಪ್ರಶ್ನೆಗಳನ್ನು ಕೇಳಿದ, ಚಿಕಿತ್ಸೆಯ ವಿಧಾನಗಳನ್ನು ಅರ್ಥಮಾಡಿಕೊಂಡ. ಪ್ರತಿಯೊಂದು ವೈದ್ಯಕೀಯ ನವೀಕರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ. ಆ ಕಷ್ಟದ ದಿನಗಳಲ್ಲಿ AI 24×7 ಲಭ್ಯವಿರುವ ಏಕೈಕ ಒಡನಾಡಿಯಾಯಿತು. ನಂತರ ಅವನ ತಂದೆ ನಿಧನರಾದರು.
AIಗೆ ಅವರ ಅಂತಿಮ ಸಂದೇಶ ಈ ರೀತಿ ಸರಳವಾಗಿತ್ತು
"ಅಪ್ಪ ನಿಧನರಾದರು. ನನಗೆ ಇನ್ನು ಮುಂದೆ ನಿಮ್ಮ ಸಹಾಯ ಬೇಕಾಗಿಲ್ಲ." AI ಸಹಾನುಭೂತಿಯಿಂದ ಪ್ರತಿಕ್ರಿಯಿಸಿತು, ತನ್ನ ಸಂತಾಪ ಸೂಚಿಸಿತು ಮತ್ತು ಅದನ್ನು ತನ್ನ ಪ್ರಯಾಣದ ಒಂದು ಸಣ್ಣ ಭಾಗವಾಗಲು ಅನುಮತಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿತು. ಆ ಒಂದು ಚಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. AI ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಕಾರಣಕ್ಕೆ ಅಲ್ಲ. ಆದರೆ ಒಬ್ಬ ಮನುಷ್ಯನಿಗೆ ವಿದಾಯ ಹೇಳಬೇಕೆಂಬ ಭಾವನೆ ಬಂದ ಕಾರಣ. ಅಂಕುರ್ ಅವರು ಮತ್ತೊಂದು ಆಸಕ್ತಿದಾಯಕ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. AI ಇನ್ನು ಮುಂದೆ ಕೇವಲ ಉತ್ಪಾದಕತೆಯ ಸಾಧನವಲ್ಲ.
ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಅದು ಸದ್ದಿಲ್ಲದೆ ಒಡನಾಡಿಯಾಗುತ್ತಿದೆ. ಅದು ನನ್ನನ್ನು ಯೋಚಿಸುವಂತೆ ಮಾಡಿತು. ವರ್ಷಗಳಿಂದ, AI ಉದ್ಯೋಗಗಳನ್ನು ಬದಲಾಯಿಸುತ್ತದೆಯೇ ಎಂದು ನಾವು ಚರ್ಚಿಸುತ್ತಿದ್ದೇವೆ. ಬಹುಶಃ ಅದು ಬದಲಾಯಿಸುತ್ತಿರುವ ಮೊದಲ ವಿಷಯ ಕೆಲಸವಲ್ಲ. ಅದು ಈಗಾಗಲೇ ಎಂದಿಗೂ ದಣಿಯದ ಸ್ನೇಹಿತನಾಗುತ್ತಿದೆ. ಎಂದಿಗೂ ಅಡ್ಡಿಪಡಿಸದ ಕೇಳುಗ ಎಲ್ಲರೂ ಓಡುತ್ತಿರುವಾಗ ನಮಗೆ ಅವಶ್ಯಕತೆ ಇರುವುದು ಇದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಳಗಿನ ಜಾವ 2 ಗಂಟೆಗೆ ಲಭ್ಯವಿರುವ ಮಾರ್ಗದರ್ಶಿ, ಯಾವಾಗಲೂ ಪ್ರತಿಕ್ರಿಯಿಸುವ ಒಡನಾಡಿ. ವಿಪರ್ಯಾಸವೆಂದರೆ, AI ಮಾನವ ಬುದ್ಧಿಮತ್ತೆಯನ್ನು ಬದಲಾಯಿಸುತ್ತಿಲ್ಲ. ಇದು ಮಾನವ ಲಭ್ಯತೆಯಿಂದ ಉಳಿದಿರುವ ಅಂತರವನ್ನು ತುಂಬುತ್ತಿದೆ.
ನಿಜವಾದ ಅಡ್ಡಿ ಕೆಲಸದ ಸ್ಥಳದಲ್ಲಿ ಇಲ್ಲದಿರಬಹುದು. ಅದು ನಮ್ಮ ಸಂಬಂಧಗಳಲ್ಲಿರಬಹುದು. ತಂತ್ರಜ್ಞಾನವು ಮಾನವೀಯತೆಯನ್ನು ಬದಲಾಯಿಸುತ್ತಿಲ್ಲ. ಅದರ ಕೊರತೆಯಿಂದ ಉಳಿದಿರುವ ಶೂನ್ಯವನ್ನು ಅದು ತುಂಬುತ್ತಿದೆ ಎಂದು ಗೌರವ್ ವೀರೇಂದ್ರ ಅಗರವಾಲ್ ಎನ್ನುವವರು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಐ ಕುರಿತಾದ ಹಲವು ಚರ್ಚೆಗಳಿಗೆ ಈ ಪೋಸ್ಟ್ ಕಾರಣವಾಗಿದೆ.
https://www.linkedin.com/posts/gauravvirendraagrawal_artificialintelligence-ai-leadership-activity-7476685006308823040--xa6?utm_source=share&utm_medium=member_desktop&rcm=ACoAAEMJrkUB8ofxJuly29uOmSon1HPwCxV-aUo












Click it and Unblock the Notifications