ಯುದ್ಧ ವಿಮಾನ ಏರುವ ನಾರಿಯರಿಗೆ ಬೀದರ್ ನಲ್ಲಿ ತರಬೇತಿ
ಬೆಂಗಳೂರು, ಜೂನ್ 10: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ಚದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. 'ನಾರಿ ಶಕ್ತಿ ಮಂತ್ರ' ಜಪಿಸುವ ಮೋದಿ ಅವರ ಆಸೆಯಂತೆ ಭಾರತೀಯ ವಾಯು ಸೇನೆ(ಐಎಎಫ್)ಯ ಮೂವರು ಮಹಿಳಾ ಪೈಲಟ್ ಗಳು ಯುದ್ಧ ವಿಮಾನ ಏರಲು ಸಜ್ಜಾಗಿದ್ದಾರೆ.
ಕಳೆದ ವರ್ಷ ಹಿಂಡನ್ ಎಎಫ್ ಸ್ಟೇಷನ್ ನಲ್ಲಿ ಐಎಎಫ್ ನ 83ನೇ ವಾರ್ಷಿಕ ಪೆರೇಡ್ ಸಮಾರಂಭದಲ್ಲಿ ಈ ಮಹತ್ವದ ನಿರ್ಣಯವನ್ನು ಪ್ರಧಾನಿ ಮೋದಿ- ಘೋಷಿಸಿದ್ದರು.[ಈ ಸುದ್ದಿ ಇಲ್ಲಿ ಓದಿ]
ಫ್ಲೈಯಿಂಗ್ ಕ್ಯಾಡೆಟ್ಸ್ ಗಳಾದ ಭಾವನಾ ಕಾಂತ್, ಮೋಹನಾ ಸಿಂಗ್ ಹಾಗೂ ಅವನಿ ಚತುರ್ವೇದಿ ಅವರು ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಚಲಿಸಬಲ್ಲ ಪ್ರಥಮ ಪೈಲಟ್ ಗಳಾಗಲಿದ್ದಾರೆ. ಈಗಾಗಲೇ ಈ ಮೂವರು ದಿಟ್ಟ ಮಹಿಳೆಯರ ತರಬೇತಿ ಆರಂಭವಾಗಿದೆ.[ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ವಾಯುಸೇನೆ]

ಹೈದರಾಬಾದಿನ ದುಂಡಿಗಲ್ ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಜೂನ್ 18 ರಂದು ಮೊದಲ ಬಾರಿಗೆ ಫೈಟರ್ ಶ್ರೇಣಿ ವಿಮಾನಗಳನ್ನೇರಿ ಪ್ರದರ್ಶನ ನೀಡಲಿದ್ದಾರೆ ಎಂದು ಒನ್ ಇಂಡಿಯಾ ಪ್ರತಿನಿಧಿಗೆ ರಕ್ಷಣಾ ಇಲಾಖೆ ಅಧಿಕಾರಿಗಳು ಶುಕ್ರವಾರ (ಜೂನ್ 10) ದಂದು ಹೇಳಿದರು.[ಶಿವಮೊಗ್ಗದ ರಾಜಾರಾಮ್ ಆಗಸದಲ್ಲಿ ಹಾರಿದ ಕಥೆ]
ಕಂಬೈನ್ಡ್ ಗ್ರಾಜುಯೇಷನ್ ಪರೇಡ್ (ಸಿಜಿಪಿ) ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಚಾಲನ ಕೌಶಲ್ಯ ಪ್ರದರ್ಶಿಸಲಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಈ ಪೆರೇಡ್ ವೀಕ್ಷಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ 22 ಮಹಿಳಾ ಟ್ರೈನಿಗಳು ಸೇರಿದಂತೆ 129 ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ.

ಬೀದರ್ ನಲ್ಲಿ ತರಬೇತಿ: ಜೂನ್ 17 ರಂದು ಈ ಟ್ರೈನಿಗಳ ಪೋಷಕರೊಡನೆ ಸಚಿವ ಮನೋಹರ್ ಅವರು ಸಂವಾದ ಕಾರ್ಯಕ್ರಮ ಕೂಡಾ ನಡೆಸಲಿದ್ದಾರೆ. ಇಲ್ಲಿ ತರಬೇತಿ ಪ್ರದರ್ಶನ ನೀಡಿದ ನಂತರ ಮೂವರು ಪೈಲಟ್ ಗಳು ಕರ್ನಾಟಕದ ಬೀದರ್ ಗೆ ಆಗಮಿಸಲಿದ್ದಾರೆ.
ಬೀದರ್ ನಲ್ಲಿ ಉನ್ನತ ಶ್ರೇಣಿಯ ಯುದ್ಧವಿಮಾನ (Hawk) ಗಳನ್ನು ಚಲಾಯಿಸಲಿದ್ದಾರೆ. ನಂತರ ಮೂರನೇ ಹಾಗೂ ಕೊನೆ ಹಂತದ ತರಬೇತಿ ಸಿಗಲಿದೆ. ಇದಾದ ಬಳಿಕ ಫೈಟರ್ ಪೈಲಟ್ ಗಳಾಗಿ ಮುಂದಿನ ವರ್ಷದೊಳಗೆ ನಿಯೋಜನೆಗೊಳ್ಳಲಿದೆ ಎಂದು ಐಎಎಫ್ ಅಧಿಕಾರಿಗಳು ಹೇಳಿದರು. (ಒನ್ಇಂಡಿಯಾ ಸುದ್ದಿ)
-
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ -
ಯುಪಿಎಸ್ಸಿ 2025 ಫಲಿತಾಂಶ ಪ್ರಕಟ: ಪಾಸಾದವರು 958 ಆಕಾಂಕ್ಷಿಗಳು, ಅರ್ಜಿ ಹಾಕಿದ್ದವರು 10 ಲಕ್ಷ ಮಂದಿ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ










Click it and Unblock the Notifications