ಯುದ್ಧ ವಿಮಾನ ಏರುವ ನಾರಿಯರಿಗೆ ಬೀದರ್ ನಲ್ಲಿ ತರಬೇತಿ
ಬೆಂಗಳೂರು, ಜೂನ್ 10: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ಚದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. 'ನಾರಿ ಶಕ್ತಿ ಮಂತ್ರ' ಜಪಿಸುವ ಮೋದಿ ಅವರ ಆಸೆಯಂತೆ ಭಾರತೀಯ ವಾಯು ಸೇನೆ(ಐಎಎಫ್)ಯ ಮೂವರು ಮಹಿಳಾ ಪೈಲಟ್ ಗಳು ಯುದ್ಧ ವಿಮಾನ ಏರಲು ಸಜ್ಜಾಗಿದ್ದಾರೆ.
ಕಳೆದ ವರ್ಷ ಹಿಂಡನ್ ಎಎಫ್ ಸ್ಟೇಷನ್ ನಲ್ಲಿ ಐಎಎಫ್ ನ 83ನೇ ವಾರ್ಷಿಕ ಪೆರೇಡ್ ಸಮಾರಂಭದಲ್ಲಿ ಈ ಮಹತ್ವದ ನಿರ್ಣಯವನ್ನು ಪ್ರಧಾನಿ ಮೋದಿ- ಘೋಷಿಸಿದ್ದರು.[ಈ ಸುದ್ದಿ ಇಲ್ಲಿ ಓದಿ]
ಫ್ಲೈಯಿಂಗ್ ಕ್ಯಾಡೆಟ್ಸ್ ಗಳಾದ ಭಾವನಾ ಕಾಂತ್, ಮೋಹನಾ ಸಿಂಗ್ ಹಾಗೂ ಅವನಿ ಚತುರ್ವೇದಿ ಅವರು ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಚಲಿಸಬಲ್ಲ ಪ್ರಥಮ ಪೈಲಟ್ ಗಳಾಗಲಿದ್ದಾರೆ. ಈಗಾಗಲೇ ಈ ಮೂವರು ದಿಟ್ಟ ಮಹಿಳೆಯರ ತರಬೇತಿ ಆರಂಭವಾಗಿದೆ.[ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ವಾಯುಸೇನೆ]

ಹೈದರಾಬಾದಿನ ದುಂಡಿಗಲ್ ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಜೂನ್ 18 ರಂದು ಮೊದಲ ಬಾರಿಗೆ ಫೈಟರ್ ಶ್ರೇಣಿ ವಿಮಾನಗಳನ್ನೇರಿ ಪ್ರದರ್ಶನ ನೀಡಲಿದ್ದಾರೆ ಎಂದು ಒನ್ ಇಂಡಿಯಾ ಪ್ರತಿನಿಧಿಗೆ ರಕ್ಷಣಾ ಇಲಾಖೆ ಅಧಿಕಾರಿಗಳು ಶುಕ್ರವಾರ (ಜೂನ್ 10) ದಂದು ಹೇಳಿದರು.[ಶಿವಮೊಗ್ಗದ ರಾಜಾರಾಮ್ ಆಗಸದಲ್ಲಿ ಹಾರಿದ ಕಥೆ]
ಕಂಬೈನ್ಡ್ ಗ್ರಾಜುಯೇಷನ್ ಪರೇಡ್ (ಸಿಜಿಪಿ) ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಚಾಲನ ಕೌಶಲ್ಯ ಪ್ರದರ್ಶಿಸಲಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಈ ಪೆರೇಡ್ ವೀಕ್ಷಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ 22 ಮಹಿಳಾ ಟ್ರೈನಿಗಳು ಸೇರಿದಂತೆ 129 ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ.

ಬೀದರ್ ನಲ್ಲಿ ತರಬೇತಿ: ಜೂನ್ 17 ರಂದು ಈ ಟ್ರೈನಿಗಳ ಪೋಷಕರೊಡನೆ ಸಚಿವ ಮನೋಹರ್ ಅವರು ಸಂವಾದ ಕಾರ್ಯಕ್ರಮ ಕೂಡಾ ನಡೆಸಲಿದ್ದಾರೆ. ಇಲ್ಲಿ ತರಬೇತಿ ಪ್ರದರ್ಶನ ನೀಡಿದ ನಂತರ ಮೂವರು ಪೈಲಟ್ ಗಳು ಕರ್ನಾಟಕದ ಬೀದರ್ ಗೆ ಆಗಮಿಸಲಿದ್ದಾರೆ.
ಬೀದರ್ ನಲ್ಲಿ ಉನ್ನತ ಶ್ರೇಣಿಯ ಯುದ್ಧವಿಮಾನ (Hawk) ಗಳನ್ನು ಚಲಾಯಿಸಲಿದ್ದಾರೆ. ನಂತರ ಮೂರನೇ ಹಾಗೂ ಕೊನೆ ಹಂತದ ತರಬೇತಿ ಸಿಗಲಿದೆ. ಇದಾದ ಬಳಿಕ ಫೈಟರ್ ಪೈಲಟ್ ಗಳಾಗಿ ಮುಂದಿನ ವರ್ಷದೊಳಗೆ ನಿಯೋಜನೆಗೊಳ್ಳಲಿದೆ ಎಂದು ಐಎಎಫ್ ಅಧಿಕಾರಿಗಳು ಹೇಳಿದರು. (ಒನ್ಇಂಡಿಯಾ ಸುದ್ದಿ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications