ಬೇನಾಮಿ ಆಸ್ತಿ ಪತ್ತೆಗೆ 24 ಕಡೆ ಕಚೇರಿ: ತೆರಿಗೆ ಇಲಾಖೆ ಚಿಂತನೆ
ಬೇನಾಮಿ ಆಸ್ತಿ ಪ್ರಕರಣಗಳ ಪತ್ತೆ ಹಚ್ಚುವಿಕೆಗೆ, ಆರೋಪಿಗಳ ವಿಚಾರಣೆಗೆ, ತ್ವರಿತ ದಾಳಿಗಳ ಸಂಘಟನೆಗೆ ಅನುಕೂಲವಾಗಲು ಕಚೇರಿಗಳನ್ನು ತೆರೆಯಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.
ನವದೆಹಲಿ, ಮೇ 25: ದೇಶದಲ್ಲಿ ಬೇನಾಮಿ ಆಸ್ತಿಯನ್ನು ಮಟ್ಟ ಹಾಕಲು ಟೊಂಕ ಕಟ್ಟಿ ನಿಂತಿರುವ ಕೇಂದ್ರ ಆದಾಯ ತೆರಿಗೆ ಇಲಾಖೆಯು ದೇಶದ ನಾನಾ ಭಾಗಗಳಲ್ಲಿ ಒಟ್ಟು 24 ಬೇನಾಮಿ ಆಸ್ತಿ ತನಿಖಾ ಕಚೇರಿಗಳನ್ನು ತೆರೆಯಲು ನಿರ್ಧರಿಸಿದೆ. ಬೇನಾಮಿ ಆಸ್ತಿ ನಿಗ್ರಹ ಕಾಯ್ದೆ 2016ರ ನಿಯಮಗಳಿಗೆ ಅನುಗುಣವಾಗಿ ಈ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ.
28 ವರ್ಷಗಳ ಮುನ್ನವೇ ಬೇನಾಮಿ ಆಸ್ತಿ ನಿಗ್ರಹ ಕಾನೂನು ರಚಿಸಲಾಗಿದ್ದರೂ ಬಂದಿದ್ದರೂ ಆ ಕಾನೂನನ್ನು ಜಾರಿಗೆ ತರಲು ಅನೇಕ ತಾಂತ್ರಿಕ ತೊಡಕುಗಳಿದ್ದವು. ಇವನ್ನು ಕಳೆದ ವರ್ಷ ಪರಿಹರಿಸಿ, ಈಗ ಕಾನೂನಿನ ಸುಗಮ ಅನುಷ್ಠಾನಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ (ಮಾ. 24) ಹೇಳಿತ್ತು.[ಆರು ತಿಂಗಳಲ್ಲಿ 600 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಪತ್ತೆ]
ಈ ಹಿನ್ನೆಲೆಯಲ್ಲಿ, ಬೇನಾಮಿ ಆಸ್ತಿ ಹೊಂದಿರುವರ ವಿರುದ್ಧ ಹೋರಾಡಲು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಆನೆ ಬಲ ಬಂದಂತಾಗಿದ್ದು, ಕಳೆದ ಆರು ತಿಂಗಳಲ್ಲಿ ಇಂಥ 240 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಇಲಾಖೆ, 600 ಕೋಟಿ ರು. ಮೌಲ್ಯದ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.[ಪಾಕ್ ನಲ್ಲಿ ಮೋಸ ಹೋದ ಯುವತಿ ಭಾರತಕ್ಕೆ: ಸುಷ್ಮಾ ಸ್ವಾಗತ]

ಇದೂ ಸಹ ಬೇನಾಮಿ ಆಸ್ತಿಗೆ ಕಾನೂನಿಗೆ ಪರಿಧಿಯದ್ದು

ತ್ವರಿತ ವಿಚಾರಣೆಗೆ ಅನುಕೂಲ
ಈ ಪ್ರಕರಣದ ಜಾಡು ಹಿಡಿದಿರುವ ತೆರಿಗೆ ಇಲಾಖೆಗೆ ಈಗ ದೇಶದ ಅಲ್ಲಲ್ಲಿ ಬೇನಾಮಿ ಆಸ್ತಿ ನಿಗ್ರಹ ತನಿಖಾ ಕಚೇರಿಗಳನ್ನು ತೆರೆಯುವ ಅವಶ್ಯತೆಯಿದೆಯೆಂಬ ಆಲೋಚನೆ ಬಂದಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ನಿರ್ಧರಿಸಿದೆ. ಇದರಿಂದ ಬೇನಾಮಿ ಆಸ್ತಿ ಪ್ರಕರಣಗಳಲ್ಲಿ ದೂರು ದಾಖಲಿಸಲು, ತ್ವರಿತಗತಿಯಲ್ಲಿ ಕಾರ್ಯಾಚರಣೆ ಅಥವಾ ಆರೋಪಿಗಳ ವಿಚಾರಣೆ ನಡೆಸಲು ಅನುಕೂಲವಾಗುತ್ತದೆ ಎಂಬುದು ಇಲಾಖೆ ಆಲೋಚನೆ.

ಕೆಲವು ಕಡೆ ಎರಡು ಕಚೇರಿ ಸಾಧ್ಯತೆ
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಒಟ್ಟು 24 ಕಡೆಗೆ ಬೇನಾಮಿ ಆಸ್ತಿ ನಿಗ್ರಹ ತನಿಖಾ ಕಚೇರಿಗಳನ್ನು ಆರಂಭಿಸಲು ನಿರ್ಧಾರವಾಗಿದೆ. ಕೆಲವು ರಾಜ್ಯಗಳಲ್ಲಿ ಅವಶ್ಯವಿದ್ದರೆ ಎರಡು ಕಚೇರಿಗಳನ್ನೂ ಸ್ಥಾಪಿಸಲು ನಿರ್ಧರಿಸಲಾಗಿದೆ.

ತಪ್ಪಿತಸ್ಥರಿಗೆ ಏಳು ವರ್ಷ ಸಜೆ
ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತುಗೊಳ್ಳುವ ಅಪರಾಧಿಗೆ ಏಳು ವರ್ಷಗಳ ಕಠಿಣ ಸಜೆ ಹಾಗೂ ಆತನ ಒಟ್ಟು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ. 25ರವರೆಗಿನ ಹಣವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಕಳೆದ ವರ್ಷದಿಂದಲೇ ಜಾರಿ
ಇಂಥದ್ದೊಂದು ಕಾನೂನಿನ ಅವಶ್ಯಕತೆಯನ್ನು ಮನಗಂಡೇ, ಕೇಂದ್ರ ಸರ್ಕಾರವು ಕಳೆದ 28 ವರ್ಷಗಳಿಂದ ಹಲ್ಲಿಲ್ಲದ ಹಾವಿನಂತೆ ಮಲಗಿದ್ದ ಕಾನೂನಿಗೆ ತಿದ್ದುಪಡಿ ತಂದು ಅನೇಕ ಅಡೆ ತಡೆಗಳನ್ನು ನಿವಾರಿಸಿ ಅದು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಕಳೆದ ವರ್ಷ ನವೆಂಬರ್ 1ರಿಂದಲೇ ಬೇನಾಮಿ ಆಸ್ತಿ ನಿಗ್ರಹ ಕಾನೂನು ಜಾರಿಗೊಂಡಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications