ಕೇಂದ್ರದ ಮಹತ್ವದ ನಿರ್ಧಾರ: ದಿನಬಳಕೆಯ 30ವಸ್ತುಗಳ ಮೇಲೆ GST ಇಳಿಕೆ
ಕೇಂದ್ರ ಸರಕಾರದ ಮಹತ್ವದ ನಿರ್ಧಾರವೊಂದರಲ್ಲಿ ದಿನಬಳಕೆಯ ಮೂವತ್ತು ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಇಳಿಸಲಾಗಿದೆ. ಐಷಾರಾಮಿ, SUV ಮತ್ತು ಮಧ್ಯಮ ವರ್ಗದ ಕಾರುಗಳ ಮೇಲೆ ಸೆಸ್ ಹೆಚ್ಚಿಸಲಾಗಿದೆ.
ನವದೆಹಲಿ, ಸೆ 10: ಕೇಂದ್ರ ಸರಕಾರದ ಮಹತ್ವದ ನಿರ್ಧಾರವೊಂದರಲ್ಲಿ ದಿನಬಳಕೆಯ ಮೂವತ್ತು ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಇಳಿಸಲಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶನಿವಾರ (ಸೆ 9) ನಡೆದ 21ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದ್ದು, ಐಷಾರಾಮಿ, SUV ಮತ್ತು ಮಧ್ಯಮ ವರ್ಗದ ಕಾರುಗಳ ಮೇಲೆ ಸೆಸ್ ಹೆಚ್ಚಿಸಲಾಗಿದೆ. ಆದರೆ, ಸಣ್ಣಕಾರುಗಳ ಮೇಲಿನ GST ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

GST ಟಿಆರ್-1 ಸಲ್ಲಿಸುವ ಗಡುವನ್ನು ಅಕ್ಟೋಬರ್ ಹತ್ತರವರೆಗೆ ವಿಸ್ತರಿಸುವ, ಗಡುವು ಮೀರಿದ ನಂತರ ರಿಟರ್ನ್ಸ್ ಸಲ್ಲಿಸಿದರೆ ಶೇ. 18 ಬಡ್ಡಿ ವಿಧಿಸುವ ಮತ್ತು ನೆಟ್ ವರ್ಕ ನಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಲು ಸಮಿತಿ ರಚಿಸುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ.
ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಪ್ರಮುಖ ಅಂಶಗಳು ಇಂತಿವೆ:
> 1200 ಮತ್ತು1500ಸಿಸಿ ಕಾರುಗಳ ಮೇಲಿನ ತೆರಿಗೆಯಲ್ಲಿ ಬದಲಾವಣೆಯಿಲ್ಲ.
> ಸರಕಾರದ ಗುತ್ತಿಗೆ ಮೇಲಿನ ಕೆಲಸದ ಮೇಲಿನ ತೆರಿಗೆ ಶೇ. 18ರಿಂದ 12ಕ್ಕೆ ಇಳಿಕೆ.
> ಖಾದಿ, ಗ್ರಾಮೋದ್ಯೋಗ ಮಳಿಗೆಯಲ್ಲಿ ಮಾರಲಾಗುವ ಬಟ್ಟೆಗಳ ಮೇಲೆ ಜಿಎಸ್ಟಿ ಇಲ್ಲ.
> ಮಧ್ಯಮ ಗಾತ್ರದ ಕಾರುಗಳ ಮೇಲಿನ ಶೇ. 28 ಜಿಎಸ್ಟಿಗೆ ಶೇ. 17 ಸೆಸ್.
> ಐಷಾರಾಮಿ ಕಾರಿನ ಮೇಲಿನ ಶೇ. 28 ಜಿಎಸ್ಟಿಗೆ ಶೇ. 20 ಸೆಸ್.
> SUV ಕಾರುಗಳ ಮೇಲಿನ ಶೇ. 28 ಜಿಎಸ್ಟಿಗೆ ಶೇ. 23 ಸೆಸ್.
> ಒಣ ಹುಣಸೆ, ರಬ್ಬರ್ ಬ್ಯಾಂಡ್ ಮೇಲಿನ ತೆರಿಗೆ ಇಳಿಕೆ.
> ಇಡ್ಲಿಹಿಟ್ಟು, ಅಗರಬತ್ತಿ , ರೇನ್ ಕೋಟ್ ಮೇಲಿನ ದರ ಇಳಿಕೆ.
> ಕಸ್ಟರ್ಡ್ ಪುಡಿ, ಪ್ಯಾಕೇಜ್ ತಿಂಡಿ ಸೇರಿದಂತೆ ಇತರ ದಿನಯೋಪಯೋಗಿ ವಸ್ತುಗಳ ಮೇಲಿನ ದರ ಇಳಿಕೆ.
> ಅಂತರರಾಜ್ಯ ಖಾದಿ ವ್ಯಾಪಾರಸ್ಥರು ಜಿಎಸ್ಟಿ ನೊಂದಾಣಿ ಮಾಡುವ ಅವಶ್ಯಕತೆಯಿಲ್ಲ.
ಪ್ಲಾಸ್ಟಿಕ್ ರೇನ್ ಕೋಟ್ ಮೇಲಿನ ತೆರಿಗೆ ಶೇ.28 ರಿಂದ 18, ರಬ್ಬರ್ ಬ್ಯಾಂಡ್ ಮೇಲಿನ ತೆರಿಗೆ ಶೇ. 28 ರಿಂದ 12ಕ್ಕೆ ಇಳಿಸಲಾಗಿದೆ. ಇನ್ನು ಇತರ ದಿನಯೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಯ ಶೇಕಡಾವಾರು ಪ್ರಮಾಣ ಇನ್ನು ಪ್ರಕಟವಾಗಬೇಕಷ್ಟೇ..
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications