Flipkart: ಫ್ಲಿಪ್ ಕಾರ್ಟ್ನ 1,00,00,000 ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳ ಕಳ್ಳತನ
Flipkart: ಬಿಗ್ ಬಿಲಿಯನ್ ಡೇ ಬಂತೆಂದರೆ ಸಾಕು ಆಫರ್ ಬೆಲೆಯಲ್ಲಿ ವಸ್ತುಗಳನ್ನು ಶಾಪಿಂಗ್ ಮಾಡಲು ಬಹುತೇಕ ಮಂದಿ ಆನ್ಲೈನ್ನತ್ತ ಮುಖ ಮಾಡುತ್ತಾರೆ. ಹಾಗೆಯೇ ಇತ್ತೀಚೆಗಷ್ಟೇ ಅಮೇರಿಕಾ ಮೂಲದ ದೈತ್ಯ ಕಂಪನಿ ಫ್ಲಿಪ್ ಕಾರ್ಟ್ ಕೂಡ ಭರ್ಜರಿ ಆಫರ್ ಘೋಷಿಸಿತ್ತು. ಈ ವೇಳೆಯೇ 1,00,00,000 ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಘಟನೆ ನಡೆದಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೀಡಿ.
ಅಮೇರಿಕಾ ಮೂಲದ ದೈತ್ಯ ಕಂಪನಿ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಘೋಷಿಸಿದ ವೆಳೆಯೇ ಕೋಟಿ.. ಕೋಟಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದೆ. ಫ್ಲಿಪ್ ಕಾರ್ಟ್ ಕಂಪನಿಯ ಬಿಗ್ ಬಿಲಿಯನ್ ಡೇ ಮಾರಾಟದ ವೇಳೆಯೇ ಸಾರಿಗೆ ಟ್ರಕ್ನಿಂದ 1.21 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನ ಆಗಿವೆ. ಈ ಕುರಿತು ಪಂಜಾಬ್ ಪೊಲೀಸರು ಚಾಲಕ ಮತ್ತು ಆತನ ಸಹಾಯಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಫ್ಲಿಪ್ ಕಾರ್ಟ್ ಸರಕುಗಳನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ಸಾರಿಗೆ ಸಂಸ್ಥೆ ಕ್ಯಾಮಿಯಾನ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಟ್ರಕ್ನಿಂದ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಹರಿಯಾಣ ನಿವಾಸಿ ಮತ್ತು ಕಂಪನಿಯ ಫೀಲ್ಡ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ಪ್ರೀತಮ್ ಶರ್ಮಾ ದೂರಿನ ಪ್ರಕಾರ, ಸೆಪ್ಟೆಂಬರ್ 27ರಂದು ಮುಂಬೈನ ಭಿವಾಂಡಿಯಿಂದ 11,677 ಸರಕುಗಳನ್ನು ತುಂಬಿ ಖನ್ನಾದ ಮೋಹನ್ಪುರದಲ್ಲಿರುವ ಫ್ಲಿಪ್ಕಾರ್ಟ್ ಗೋದಾಮಿಗೆ ಕಳುಹಿಸಲಾಯಿತು.
ರಾಜಸ್ಥಾನದ ಭರತ್ಪುರದ ಕಕ್ರಾಲಾ ಗ್ರಾಮದ ನಿವಾಸಿ ನಾಸಿರ್ ತನ್ನ ಸಹಾಯಕ ಚೆಟ್ ಅವರೊಂದಿಗೆ ವಾಹನವನ್ನು ಚಾಲನೆ ಮಾಡುತ್ತಿದ್ದರು. ಟ್ರಕ್ ಖನ್ನಾ ಗೋದಾಮನ್ನು ತಲುಪಿದಾಗ, ನಾಸಿರ್ ಕೆಳಗಿಳಿದರು. ಆದರೆ ಚೆಟ್ ಆವರಣದಿಂದ ಹೊರಡುವ ಮೊದಲು ವೇರ್ಹೌಸ್ ಕೌಂಟರ್ನಲ್ಲಿ ವಾಹನವನ್ನು ನಿಲ್ಲಿಸಿದರು. ಬಳಿಕ ಕಂಪನಿಯ ಸಿಬ್ಬಂದಿ ಸದಸ್ಯ ಅಮರ್ದೀಪ್ ಸಿಂಗ್ ಶರ್ಮಾ ಅವರಿಗೆ ಕರೆ ಮಾಡಿ ರವಾನೆಯನ್ನು ಸ್ಕ್ಯಾನ್ ಮಾಡಿದಾಗ 234 ವಸ್ತುಗಳು ಕಾಣೆ ಆಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.
221 ಐಫೋನ್ಗಳು, ಇತರ ಐದು ಮೊಬೈಲ್ ಫೋನ್ಳು, ಬಟ್ಟೆಗಳು, ಐಲೈನರ್ಗಳು, ಹೆಡ್ಫೋನ್ಗಳು, ಮಾಯಿಶ್ಚರೈಸರ್ಗಳು, ಸುಗಂಧ ದ್ರವ್ಯಗಳು ಮತ್ತು ಸಾಬೂನುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಇದನ್ನು ಗಮನಿಸಿದರೆ, ಸಾಮಾನ್ಯವಾಗಿ ತಲೆಗೆ ಮೊದಲು ಯೋಚನೆ ಬರುವುದೇ, ಇಂತಹ ದೈತ್ಯ ಕಂಪನಿಯ ವಸ್ತುಗಳನ್ನು ಬಿಡುತ್ತಿಲ್ಲ. ಇನ್ನೂ ಸಾಮಾನ್ಯ ಜನರ ಬಳಿಯ ವಸ್ತುಗಳನ್ನು ಬಿಡುತ್ತಾರೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲಿವೆ. ಅಲ್ಲದೆ, ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಅವರ ರೀತಿಯಲ್ಲೇ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ತಾವು ನಡೆದಿದ್ದೇ ಹಾದಿ ಎಂಬಂತೆ ಕಳ್ಳತನದ ಹಾದಿ ಹಿಡಿಯುತ್ತಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications