ನ್ಯೂಟ್ವಿಸ್ಟ್‌: 'ನನ್ ರೇಪ್ ಮಾಡಿದ್ರು' ಅಂದವಳ ಮಾತಿನ ಹಿಂದೆ ಆಸ್ತಿಯ ಮಸಲತ್ತು!

ಗಾಜಿಯಾಬಾದ್ ಅಕ್ಟೋಬರ್ 21: ದೆಹಲಿಯಿಂದ 40 ವರ್ಷದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ ಕೆಲವೇ ದಿನಗಳಲ್ಲಿ, ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಹೊರಹೊಮ್ಮಿದೆ. ಗುರುವಾರ ಮಹಿಳೆ ಮಾಡಿರುವ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿರುವ ಪೊಲೀಸರು ಮಹಿಳೆ ಮತ್ತು ಆರೋಪಿಗಳ ನಡುವೆ ಆಸ್ತಿ ವಿವಾದವಿದ್ದ ಕಾರಣ ಸಂಪೂರ್ಣ ಸಂಚು ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಯೋಜನೆಗೆ ಮಹಿಳೆಗೆ ಸಹಾಯ ಮಾಡಿದ ಮೂವರನ್ನು ಬಂಧಿಸಲಾಗಿದ್ದು, ಆಕೆಯೂ ಕ್ರಮ ಎದುರಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೀರತ್ ರೇಂಜ್ ಐಜಿ ಪ್ರವೀಣ್ ಕುಮಾರ್ ಅವರು ಇಂದು ಹೇಳಿಕೆ ನೀಡಿದ್ದು, ಮಹಿಳೆ ಆಜಾದ್ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು ನಡೆಯುತ್ತಿರುವ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಸುಳ್ಳು ಕಥೆಯನ್ನು ಹೆಣೆದಿದ್ದಾಳೆ. ಪೊಲೀಸರು ಪ್ರಮುಖ ಕಿಂಗ್‌ಪಿನ್ ಆಜಾದ್ ಮತ್ತು ಅವನ ಸಹಚರರಾದ ಗೌರವ್ ಮತ್ತು ಅಫ್ಜಲ್‌ ಎಂಬಾತನನ್ನು ಬಂಧಿಸಿದ್ದಾರೆ. ಸಂಚಿಗೆ ಬಳಸಿದ್ದ ಆಲ್ಟೊ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. "ಈ ದೂರು ಎಲ್ಲವೂ ಐವರು ಪುರುಷರ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಲು ರೂಪಿಸಲಾದ ಸಂಚು" ಎಂದು ಪೊಲೀಸ್ ಅಧಿಕಾರಿ ಹೇಳಿದರು.

ದೆಹಲಿ ಮಹಿಳಾ ಆಯೋಗ ಹೇಳಿದ್ದೆಲ್ಲಾ ಸುಳ್ಳು

ಅಕ್ಟೋಬರ್ 18 ರಂದು ದೆಹಲಿಯ ನಿವಾಸಿ ಮಹಿಳೆಯೊಬ್ಬರು ಗಾಜಿಯಾಬಾದ್‌ನ ಆಶ್ರಮ ರಸ್ತೆಯ ಬಳಿ ಬಿದ್ದಿರುವುದು ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ದೂರು ದಾಖಲಿಸಿಕೊಂಡಿದ್ದಾರೆ. ಮಹಿಳೆಯನ್ನು ಸೆಣಬಿನ ಚೀಲದಲ್ಲಿ ಸುತ್ತಿ, ಕೈಕಾಲು ಕಟ್ಟಿ, ಖಾಸಗಿ ಭಾಗಗಳಲ್ಲಿ ಕಬ್ಬಿಣದ ರಾಡ್ ಅಳವಡಿಸಿರುವುದು ಪತ್ತೆಯಾಗಿದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದರು. ಹೆಸರಿಸಲಾದ ಐವರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದರು ಮತ್ತು ಆಸ್ತಿ ವಿವಾದದ ಕೋನವನ್ನು ಸಹ ವಿಚಾರಣೆ ನಡೆದಿತ್ತು.

ಮಹಿಳೆಯ ಸಂಚಿನ ಬಗ್ಗೆ ಖಾಕಿಗೆ ಅನುಮಾನ

ಮಹಿಳೆಯ ಸಂಚಿನ ಬಗ್ಗೆ ಖಾಕಿಗೆ ಅನುಮಾನ

ಘಟನೆಯ ಬಗ್ಗೆ ಯುಪಿ ಪೊಲೀಸರು ಮಾಹಿತಿ ಪಡೆದಾಗ, ಮಹಿಳೆಯನ್ನು ಮೊದಲು ಗಾಜಿಯಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದರು. ಮೀರತ್‌ನ ಆಸ್ಪತ್ರೆಯಲ್ಲಿಯೂ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿಲ್ಲ. ಒತ್ತಾಯದ ಮೇರೆಗೆ ಮಹಿಳೆಯನ್ನು ದೆಹಲಿಯ GTB ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಯಿತು.

ಆಸ್ತಿ ವಿವಾದದಲ್ಲಿ ಸಿಲುಕಿಸುವ ಬಿಗ್ ಪ್ಲ್ಯಾನ್ ಬಹಿರಂಗ

ಆಸ್ತಿ ವಿವಾದದಲ್ಲಿ ಸಿಲುಕಿಸುವ ಬಿಗ್ ಪ್ಲ್ಯಾನ್ ಬಹಿರಂಗ

ತನಿಖೆ ವೇಳೆ ಮಹಿಳೆಗೆ ಪರಿಚಯವಿದ್ದ ಆಜಾದ್ ನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದು ಪೊಲೀಸರಿಗೆ ಗೊತ್ತಾಗಿದೆ. ಕಟ್ಟುನಿಟ್ಟಾಗಿ ಪ್ರಶ್ನಿಸಿದಾಗ, ಮಹಿಳೆ ಮತ್ತು ಆರೋಪಿಗಳು ಆಸ್ತಿ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಇದು ಸಂಚು ರೂಪಿಸಲು ಪ್ರೇರೇಪಿಸಿತು ಎಂದು ಅವರು ಒಪ್ಪಿಕೊಂಡರು.

ಮಹಿಳೆಯ ಆರೋಪವೇನು?

ಮಹಿಳೆಯ ಆರೋಪವೇನು?

ಗಾಜಿಯಾಬಾದ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ದೆಹಲಿಗೆ ಬಸ್‌ಗಾಗಿ ಕಾಯುತ್ತಿದ್ದಾಗ ಅಪಹರಣ ಮಾಡಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಸಹೋದರ ತನ್ನನ್ನು ಬಸ್ ಸ್ಟ್ಯಾಂಡ್‌ನಲ್ಲಿ ಡ್ರಾಪ್ ಮಾಡಿದ್ದಾನೆ ಎಂದು ಅವಳು ಹೇಳಿದಳು. ಅಲ್ಲಿಂದ ಕಾರಿನಲ್ಲಿ ಬಂದ ಐದು ಜನ ತನಗೆ ಪರಿಚಿತರು ಅವಳನ್ನು ಎಳೆದುಕೊಂಡು ಹೋಗಿ ಸೆರೆಯಲ್ಲಿಟ್ಟು ಅತ್ಯಾಚಾರವೆಸಗಿದರು. ಇದಕ್ಕೂ ಮುನ್ನ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ಹೇಳಿದ್ದಾಳೆ. ಎಲ್ಲಾ ಕೋನಗಳಿಂದ ವಿಚಾರಣೆ ಮಾಡಿದಾಗ ಮಹಿಳೆ ಆಸ್ತಿ ವಿಚಾರಣೆ ಸುಳ್ಳು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+