Viral Video: ಗಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನವನ್ನು ರಕ್ಷಿಸಿದ ರ್ಯಾಫ್ಟಿಂಗ್ ಆಪರೇಟರ್, ನೆಟ್ಟಿಗರಿಂದ ಮೆಚ್ಚುಗೆ
ಮನುಷ್ಯನ ಕ್ರೂರತೆಯ ಬಗ್ಗೆ ಪ್ರತಿದಿನ ಹಲವಾರು ಸುದ್ದಿಗಳು ಕೇಳಿಬರುತ್ತಿರುವ ಈ ಕಾಲದಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಗಂಗಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದಾಗ ಪ್ರವಾಹದ ನಡುವೆ ಸಿಲುಕಿದ್ದ ಬೀದಿ ನಾಯಿಯೊಂದನ್ನು ರ್ಯಾಫ್ಟಿಂಗ್ (Rafting) ಆಪರೇಟರ್ವೊಬ್ಬರು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.
'ಸೇವ್ ಎ ಸ್ಟ್ರೇ ನೋಯ್ಡಾ' (Save a Stray Noida) ಎಂಬ ಪ್ರಾಣಿ ದಯಾ ಸಂಸ್ಥೆಯು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ನದಿಯ ನೀರಿನ ಮಟ್ಟವು ಹಠಾತ್ತನೆ ಏರಿಕೆಯಾದ ಕಾರಣ, ಈ ಶ್ವಾನವು ಗಂಗಾ ನದಿಯ ಮಧ್ಯದಲ್ಲಿರುವ ಸಣ್ಣ ಬಂಡೆಯೊಂದರ ಮೇಲೆ ಸಿಲುಕಿಕೊಂಡಿತ್ತು. ನಾಯಿಯ ಸುತ್ತಲೂ ವೇಗವಾಗಿ ನೀರು ಹರಿಯುತ್ತಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲದೆ ಆ ಮೂಕ ಪ್ರಾಣಿ ತೀವ್ರ ಭಯ ಹಾಗೂ ಆತಂಕದಿಂದ ನಿಂತಿರುವುದನ್ನು ವಿಡಿಯೋದ ಆರಂಭದಲ್ಲಿ ನೋಡಬಹುದಾಗಿದೆ.

ಸ್ವಲ್ಪ ಹೊತ್ತಿನಲ್ಲೇ ಆ ಮಾರ್ಗವಾಗಿ ರ್ಯಾಫ್ಟಿಂಗ್ ದೋಣಿಯಲ್ಲಿ ಬಂದ ಗುಂಪೊಂದು ನಾಯಿಯನ್ನು ಗಮನಿಸಿದೆ. ಈ ವೇಳೆ ದೋಣಿಯಲ್ಲಿದ್ದ ರ್ಯಾಫ್ಟಿಂಗ್ ಆಪರೇಟರ್ವೊಬ್ಬರು ಅತ್ಯಂತ ಜಾಗರೂಕತೆಯಿಂದ ನಾಯಿಯಿದ್ದ ಬಂಡೆಯ ಸಮೀಪದ ಕಲ್ಲಿನ ಮೇಲೆ ಹೆಜ್ಜೆ ಇಡುತ್ತಾರೆ. ನಾಯಿಯು ಗಾಬರಿಯಾಗದಂತೆ ಅದರ ಮೈದಡವಿ, ಪ್ರೀತಿಯಿಂದ ಸಮಾಧಾನಪಡಿಸುತ್ತಾರೆ. ನಂತರ ಹಗ್ಗದ ಸಹಾಯದಿಂದ ದೋಣಿಯನ್ನು ತಮ್ಮತ್ತ ಎಳೆದುಕೊಂಡು, ನಾಯಿಯನ್ನು ಎತ್ತಿ ಸುರಕ್ಷಿತವಾಗಿ ದೋಣಿಯೊಳಗೆ ಕೂರಿಸುತ್ತಾರೆ. ದೋಣಿಯಲ್ಲಿದ್ದ ಇತರರು ಕೂಡ ಆ ನಾಯಿಯನ್ನು ಪ್ರೀತಿಯಿಂದ ಉಪಚರಿಸಿ ಧೈರ್ಯ ತುಂಬುವ ದೃಶ್ಯ ವಿಡಿಯೋದಲ್ಲಿದೆ.
ಈ ವಿಡಿಯೋಗೆ ಅತ್ಯಂತ ಅರ್ಥಪೂರ್ಣವಾದ ಶೀರ್ಷಿಕೆಯನ್ನು ನೀಡಲಾಗಿದೆ. "ಇಂತಹ ಕ್ಷಣಗಳು ಮಾನವೀಯತೆಯು ತನ್ನ ಶುದ್ಧ ರೂಪದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ನಮಗೆ ನೆನಪಿಸುತ್ತವೆ. ಎಷ್ಟೋ ನಿರ್ಲಕ್ಷ್ಯಗಳ ನಡುವೆಯೂ, ತೋರುವ ಒಂದು ಸಣ್ಣ ಧೈರ್ಯ ಮತ್ತು ಕರುಣೆಯು ಜೀವವನ್ನು ಉಳಿಸಬಲ್ಲದು. ಜೊತೆಗೆ ಜನರ ಒಳ್ಳೆಯತನದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ಯಾರದೋ ಒಬ್ಬರ ಉಳಿವಿಗೆ ನಾವೂ ಕಾರಣವಾಗೋಣ" ಎಂದು ಬರೆಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ರ್ಯಾಫ್ಟಿಂಗ್ ಆಪರೇಟರ್ನ ಸಮಯಪ್ರಜ್ಞೆ ಮತ್ತು ಕರುಣೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳು
ಈ ವೈರಲ್ ವಿಡಿಯೋಗೆ ಸಾವಿರಾರು ಜನರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು "ರಿಯಲ್ ಹೀರೋ.. ಈತನ ಕಾರ್ಯಕ್ಕೆ ನನ್ನದೊಂದು ಸೆಲ್ಯೂಟ್. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ, ಮಾನವೀಯತೆ ಇನ್ನೂ ಬದುಕಿದೆ ಎನ್ನಲು ಇದೇ ಸಾಕ್ಷಿ." ಎಂದು ಕಾಮೆಂಟ್ ಮಾಡಿದ್ದಾರೆ. "ಮೂಕ ಪ್ರಾಣಿಯನ್ನು ಎತ್ತುವ ಮುನ್ನ ಅದರ ಭಯವನ್ನು ಹೋಗಲಾಡಿಸಿ, ಅದನ್ನು ಪ್ರೀತಿಯಿಂದ ಸಮಾಧಾನಪಡಿಸಿದ ಆತನ ಗುಣ ನಿಜಕ್ಕೂ ಶ್ಲಾಘನೀಯ. ಹೃದಯ ತುಂಬಿಬಂತು." ಎಂದು ಇನ್ನೊರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಒಟ್ಟಾರೆಯಾಗಿ, ಈ ವಿಡಿಯೋ ಮೂಕ ಪ್ರಾಣಿಗಳ ಮೇಲಿನ ಪ್ರೀತಿ ಹಾಗೂ ಸಂಕಷ್ಟದ ಸಮಯದಲ್ಲಿ ತೋರಬೇಕಾದ ಮಾನವೀಯ ಮೌಲ್ಯಗಳಿಗೆ ಒಂದು ಅದ್ಭುತ ಉದಾಹರಣೆಯಾಗಿ ನಿಂತಿದೆ.
-
ಗ್ರೌಂಡ್ನಲ್ಲಿ ಪಂತ್ ಅಬ್ಬರ, ಗ್ಯಾಲರಿಯಲ್ಲಿ ತಿರುಪತಿ ತಿಮ್ಮಪ್ಪನಿಗೆ ಗೋಯೆಂಕಾ ಪ್ರಾರ್ಥನೆ; ವೈರಲ್ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
Sudharani: ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರಿಯೇಟರ್ಸ್ ಆದ್ರೆ ಹಿಂಗೆ ಆಗೋದು: ನಟಿ ಸುಧಾರಾಣಿ ವೈರಲ್ ವಿಡಿಯೋ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications